ಮೂಡಿಗೆರೆ :ಬಸವಣ್ಣನೆಂದರೆ ಸಂವಿಧಾನ. ಡಾ!!ಮೋಹನ್ ರಾಜಣ್ಣ….
1 min read
ಮೂಡಿಗೆರೆ :ಬಸವಣ್ಣನೆಂದರೆ ಸಂವಿಧಾನ. ಡಾ!!ಮೋಹನ್ ರಾಜಣ್ಣ.
ಮೂಡಿಗೆರೆ :ಬಸವಣ್ಣನೆಂದರೆ ಸಂವಿಧಾನ ಒಂದು ತತ್ವಜ್ಞಾನ. ಒಂದು ಪ್ರಯೋಗ ಶಾಲೆ. ನಡೆ ಮತ್ತು ನುಡಿ ಎರಡೂ ಒಂದೇ ಆಗಿದ್ದ ಬಸವಣ್ಣ ಮಹಾಸಾಧಕ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ!!ಮೋಹನ್ ರಾಜಣ್ಣ ಹೇಳಿದರು..
ಗೋಣಿಬೀಡುನಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ವತಿಯಿಂದ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮ ದಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು.
ಪ್ರತಿಯೊಬ್ಬರು ಸಹ ಬಸವಣ್ಣ ನವರ ವಿಚಾರಧಾರೆ. ಚಿಂತನೆ ಸಂದೇಶ ಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಉಮಾ ಮೋಹನ್ ಮಾತನಾಡುತ್ತಾ ಬಸವಣ್ಣ ನವರು ವಚನಗಳ ಮೂಲಕ ನೀಡಿರುವ ಸಮಾಜ ಸುಧಾರಣಾ ಸಂದೇಶ ಗಳನ್ನು ಜೀವನ ದಲ್ಲಿ ಅಳವಡಿಸುವ ಮೂಲಕ ನಾವು ಭಸ್ಮಧಾರಣೆ ಯಂಥ ಬಹಿರಂಗ ಪ್ರಕ್ರಿಯೇ ಗಿಂತಲೂ ಬಸವ ಧಾರಣೆ ಯಂಥ ಅಂತರಂಗ ಪ್ರಕ್ರಿಯೆ ಒಳಗಾಗಬೇಕು ಎಂದರು..
ಹಿರಿಯಟ್ರಸ್ತಿಗಳಾದ ಸಿ.ಸಿ.ರಾಜಣ್ಣ. ಹಾಗೂ ಟ್ರಸ್ತಿಗಳಾದ ಬಾಂಧವ್ಯ. ಡಿಂಪಲ್. ಪ್ರಸನ್ನ. ಗಂಗಾಧರ್. ಹಾಗೂ ಮುಂತಾದವರುಉಪಸ್ಥಿತರಿದ್ದರು.
ಬಸವ ಪ್ರಾರ್ಥನೆ ಮಾಡಲಾಯಿತು. ಸಿಹಿ ಹಂಚಲಾಯಿತು..