ಮಕ್ಕಳಿಗೆ ಮೇ.6 ರಿಂದ ಬೇಸಿಗೆ ಶಿಬಿರ…
1 min read
ಮಕ್ಕಳಿಗೆ ಮೇ.6 ರಿಂದ ಬೇಸಿಗೆ ಶಿಬಿರ.
ಚಿಕ್ಕಮಗಳೂರು: ಮಕ್ಕಳಿಗೆ ಯೋಗ ಕಲಿಸುವ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು 14 ರಿಂದ 16 ವರ್ಷದ ಮಕ್ಕಳಿಗೆ ಮೇ.6 ರಿಂದ 10ರ ವರೆಗೂ ಹಾಗೂ 18 ವರ್ಷ ಮೇಲ್ಪಟ್ಟವರೆಗೆ ಮೇ.12 ರಿಂದ 16ರ ವರೆಗೆ ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯೋಗ ತರಬೇತುದಾರ ಡಾ.ಬಾಸ್ಕರ್ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯೋಗ ಇಂದು ವಿಶ್ವಮಾನ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯ ಪೂರ್ಣ ಜೀವನಕ್ಕೆ ಯೋಗ ಅವಿಭಾಜ್ಯ ಅಂಗವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯೋಗ ಕಲಿಸಿಕೊಡುವ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.6 ರಿಂದ 10ರ ವರೆಗೂ ಯೋಗ ಕಲಿಸಿಕೊಡಲಾಗುವುದು. ಹಾಗೇ 10 ವರ್ಷ ಮೇಲ್ಪಟ್ಟವರಿಗೆ ಮೇ.12 ರಿಂದ 16ರ ವರೆಗೆ ಯೋಯ ಶಿಕ್ಷಣ ಹೇಳಿಕೊಡಲಾಗುವುದು. ಶಿಬಿರದಲ್ಲಿ ಹಲ್ಲಿನ ಸಮಸ್ಯೆ ಇದ್ದವರಿಗೆ 16 ತರಹದ ದಂತ ಥೇರಪಿಯನ್ನು ಹೇಳಿಕೊಡಲಾಗುವುದು. ಇದು ಮಧುಮೇಹ ಮತ್ತು ಅಸ್ತಮಾ ಇದ್ದವರಿಗೆ ಅನುಕೂಲ ವಾಗಲಿದೆ ಎಂದರು.
ಹಿಮಾ ತಾರಕ ಯೋಗಾಸನದ ಒಂದು ಭಾಗವಾಗಿದ್ದು, ದೂರದೃಷ್ಟಿ ಮತ್ತು ಸಮೀಪ ದೃಷ್ಟಿದೋಷ ಇದ್ದವರಿಗೆ ಅನುಕೂಲವಾಗ ಲಿದೆ. ಹಿಮಾ ಥೇರಪಿಯಿಂದ ವೈರಲ್ ಜ್ವರ ಬಾರದಂತೆ ತಡೆಗಟ್ಟಬಹುದು ಎಂದ ಅವರು ಯೋಗದ ಜತೆಗೆ ಧ್ಯಾನ, ರಾಜ ಯೋಗ ಸೇರಿದಂತೆ ಇತರೆ ಆಸನಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು ಎಂದರು.
ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಸತಿ ಹಾಗೂ ಪೌಷ್ಟಿಕಯುಕ್ತ ಆಹಾರವನ್ನು ನೀಡಲಾಗುವುದು ಎಂದ ಅವರು, ಪ್ರವೇಶಾತಿಗೆ ಶುಲ್ಕ ವಿಧಿಸಿದ್ದು, 14 ರಿಂದ 16 ವರ್ಷದ ಮಕ್ಕಳಿಗೆ ಮೂರು ಸಾವಿರ ರೂ. ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಆರು ಸಾವಿರ ರೂ. ನಿಗಧಿಪಡಿಸಲಾಗಿದೆ. ನೋಂದಣಿ ಬಯಸುವವರು 8197726334, 6360420141 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಇದ್ದರು. ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಗಂಗಾಧರ್