लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾನೂನಿನ ಭೀತಿ ಎದುರಿಸುತ್ತಿರುವ ಅರಣ್ಯ ಹಕ್ಕುಗಳ ಕಾಯ್ದೆ: ಅದರ ಸಾಂವಿಧಾನಿಕತೆಯನ್ನು ಸಂರಕ್ಷಿಸಬೇಕಾದ ಅಗತ್ಯತೆ

1 min read

ಮತ್ತೆ ಕಾನೂನಿನ ಭೀತಿ ಎದುರಿಸುತ್ತಿರುವ ಅರಣ್ಯ ಹಕ್ಕುಗಳ ಕಾಯ್ದೆ: ಅದರ ಸಾಂವಿಧಾನಿಕತೆಯನ್ನು ಸಂರಕ್ಷಿಸಬೇಕಾದ ಅಗತ್ಯತೆ

2ನೇ ಏಪ್ರಿಲ್ 2025ರಂದು ಸರ್ವೋಚ್ಚ ನ್ಯಾಯಾಲಯ (ಸುಪ್ರೀಂ ಕೋರ್ಟ್)ದಲ್ಲಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆ, 2006ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ನಲ್ಲಿಸಲಾಗಿರುವ ಅರ್ಜಿಗಳನ್ನು ಆಲಿಸಲಾಗುವುದು. ಈ ಕಾಯ್ದೆಯನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಆಂಗ್ಲ ಭಾಷೆಯಲ್ಲಿ ಫಾರೆಸ್ಟ್ ರೈಟ್ಸ್ ಆಕ್ಟ್ (FRA) ಎಂದು ಕರೆಯಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಮಾನವ ಹಕ್ಕುಗಳ ಉಲ್ಲಂಘನೆಗಳು, ದೊಡ್ಡ ಪ್ರಮಾಣದ ಸ್ಥಳಾಂತರ/ಪುನರ್ವಸತಿ, ಕಾನೂನಿನ ಹಿನ್ನಡೆಗಳು ಮತ್ತು ಪರಿಸದ ನಾಶದತ್ತ ಪತ್ರಿಕಾ ಸದಸ್ಯರ ತುರ್ತು ಗಮನ ಬೇಕಾಗಿದೆ.

ಅರಣ್ಯ ಹಕ್ಕು ಕಾಯ್ದೆ ಎಂದರೇನು?

ಭಾರತದಾದ್ಯಂತ ವಾಸಿಸುತ್ತಿರುವ ಆದಿವಾಸಿಗಳು ಮತ್ತು ಇತರ ಅರಣ್ಯವಾಸಿ ಸಮುದಾಯಗಳ ನೇತೃತ್ವದಲ್ಲಿ ಅನೇಕ ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ 2006ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸಂಸತ್ತು ಜಾರಿಗೊಳಿಸಿತು. ವಸಾಹತುಶಾಹಿ ಮತ್ತು ಸ್ವಾತಂತ್ರ್ಯಾನಂತರದ ಆಡಳಿತ ವ್ಯವಸ್ಥೆಗಳ ಅಡಿಯಲ್ಲಿ ವ್ಯವಸ್ಥಿತವಾಗಿ ಶೋಷಣೆಗೆ ಒಳಗಾಗಿ, ತಮ್ಮದೇ ಸ್ವಂತ ಭೂಮಿಯಿಂದ ಹೊರಹಾಕಲ್ಪಟ್ಟು, ನೀತಿ-ರಚನೆಯ ಪ್ರಕ್ರಿಯಿಂದ ದೂರವಿರಿಸಲಾದ ಅರಣ್ಯ ನಿವಾಸಿಗಳಿಗೆ ಈ ಕಾಯ್ದೆಯಿಂದಾಗಿ ನಿರ್ಣಾಯಕ ಶಾಸಕಾಂಗ ಬಲ ದೊರೆಯಿತು. ಈ ಕಾಯ್ದೆಯ ಮುನ್ನುಡಿಯಲ್ಲಿ ಅರಣ್ಯದಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ-ನಿವಾಸಿಗಳಿಗೆ ಆಗಿರುವ ವ್ಯವಸ್ಥಿತ ಐತಿಹಾಸಿಕ ಅನ್ಯಾಯವನ್ನು ಗುರುತಿಸಲಾಗಿದ್ದು, ಅವರೆಲ್ಲರೂ ಅರಣ್ಯ ವ್ಯವಸ್ಥೆಯ ಉಳಿವು ಮತ್ತು ಸುಸ್ಥಿರತೆಯ ಅವಿಭಾಜ್ಯ ಅಂಗವೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಅರಣ್ಯ-ನಿವಾಸಿಗಳು ಹಲವಾರು ತಲೆಮಾರುಗಳ ಕಾಲ ವಾಸಿಸಿರುವ ಕಾಡು ಮತ್ತು ಅಲ್ಲಿ ಬಳಸಿ, ನಿರ್ವಹಿಸಿರುವ ಸಂಪನ್ಮೂಲಗಳ ಮೇಲೆ ಅವರಿಗಿರುವ ಹಕ್ಕುಗಳನ್ನು ಗುರುತಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆಯು ಎಲ್ಲಾ ವಿಧದ ಕಾಡು ಭೂಮಿಯ ಮೇಲೆ ವ್ಯಕ್ತಿಗತ ಜೊತೆಗೆ ಸಮುದಾಯ-ಆಧಾರಿತ ಹಿಡುವಳಿಯನ್ನು ನೀಡಿ, ಅದರ ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಗ್ರಾಮ ಸಭೆಗಳಿಗೆ ನೀಡುತ್ತದೆ. ಈ ಮೂಲಕ ಅರಣ್ಯ ಭೂಮಿ ಪರಿವರ್ತನೆಯ ಉಸ್ತುವಾರಿಯನ್ನು ಅವರಿಗೆ ನೀಡುತ್ತಾ, ಕಾಡಿನ ರಕ್ಷಣೆ ಮತ್ತು ಸಮತೋಲನವನ್ನು ಖಚಿತಪಡಿಸುತ್ತದೆ. ಭಾರತದಲ್ಲಿ ಆದಿವಾಸಿಗಳು ಮತ್ತು ಕಾಡನ್ನು ಅವಲಂಬಿಸಿರುವ ಜನರ ಅತಿದೊಡ್ಡ ಜನಸಂಖ್ಯೆಯಿದ್ದು, ಇವರುಗಳು ಅರಣ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ಸಂರಕ್ಷಿಸುವ ಸುದೀರ್ಘ ದಾಖಲಿತ ಇತಿಹಾಸವು ಲಭ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಜೀವನೋಪಾಯ ಭದ್ರತೆ ಎರಡನ್ನೂ ಬಲಪಡಿಸಿ ಲಕ್ಷಾಂತರ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಮರ್ಥ್ಯವನ್ನು ಅರಣ್ಯ ಹಕ್ಕು ಕಾಯ್ದೆಯು ಹೊಂದಿದೆ.

ಇತ್ತೀಚಿಗೆ ಪರಿಸರ ಸಂರಕ್ಷಣಾ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದ್ದು, ಇದರಿಂದಾಗಿ ದೇಶಾದ್ಯಂತ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ ಮತ್ತು ಅರಣ್ಯ ಪ್ರದೇಶದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ಅರಣ್ಯ ಹಕ್ಕುಗಳ ಕಾಯ್ದೆಯನ್ನು ಪ್ರಶ್ನಿಸಿ ದಾಖಲಿಸಲಾಗಿರುವ ಅರ್ಜಿಗಳು ಕಾಡಿನ ಮೇಲೆ ಅವಲಂಬಿತ ಸಮುದಾಯಗಳನ್ನು “ಅತಿಕ್ರಮಣಕಾರರು” ಎಂದು ಗುರುತಿಸಿ, ವಲಸೆ/ಸ್ಥಳಾಂತರವನ್ನು ಕಾನೂನುಬದ್ಧಗೊಳಿಸುವ ಮೂಲಕ, ಈ ಸಮುದಾ ಕ್ಷಣಿಯ ವಿರುದ್ಧವಾಗಿವೆ ಎಂಬ ಹಳಿಯು ಆಧಾರದ ಮೇಲೆ ಸಲ್ಲಿಸಲಾಗಿವೆ. ಆದರೆ, ವಾಸ್ತವಾಂಶವು ಇದಕ್ಕೆ ಭಿನ್ನವಾಗಿದ್ದು, ಈ ಕಾಯ್ದೆಯು ಸಮುದಾಯ ಮತ್ತು ‘ಯ ವಿಚಾರವಾದ ಸಂರಕ್ಷಣೆಯ ಸಂಬಂಧವನ್ನು ಎತ್ತಿಹಿಡಿಯುತ್ತದೆ.
ಈ ಕಾರಣದಿಂದಾಗಿ, ಈ ಕಾಯ್ದೆಯು ಭಾರತದ ಸಂರಕ್ಷಣಾ ಮತ್ತು ಹವಾಮಾನ ನೀತಿ ರಚನಾ ಪ್ರಕ್ರಿಯೆಯಲ್ಲಿ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇಂದು, ಹವಾಮಾನ ಬದಲಾವಣೆಯ ಸಮ್ಮೇಳನಗಳು (COP), ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN), ಜೈವಿಕ ವೈವಿಧ್ಯತೆಯ ಸಮಾವೇಶ (CHD) ದಂತಹ ಪರಿಸರ ಸಂಬಂಧಿ ಸಂಸ್ಥೆಗಳು ಮತ್ತು ಭಾರತವು ಸದಸ್ಯ ರಾಷ್ಟ್ರವಾಗಿ ಸಹಿ ಹಾಕಿರುವ ಜಾಗತಿಕ ಜೀವವೈವಿಧ್ಯ ಚೌಕಟ್ಟು ಕಾಡನ್ನು ಮತ್ತು ಜೀವವೈವಿಧ್ಯವನ್ನು ನಿರ್ವಹಿಸಲು, ಅದಕ್ಕೆ ಸಂಬಂಧಿತ ಆಡಳಿತ ನಡೆಸಲು ಮತ್ತು ಅವುಗಳನ್ನು ರಕ್ಷಿಸಲು ಅನುಕೂಲವಾಗುವಂತೆ – ಮೂಲನಿವಾಸಿಗಳು ಮತ್ತು ಇತರ ಸ್ಥಳೀಯ ಸಮುದಾಯಗಳ ಹಕ್ಕುಗಳು ಮತ್ತು ಜ್ಞಾನವನ್ನು ಬಲಪಡಿಸುವ ಕರೆ ನೀಡುತ್ತದೆ – ಆದರೆ ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಅರಣ್ಯ ಹಕ್ಕುಗಳ ಕಾಯ್ದೆಯು ಈಗಾಗಲೇ ಈ ದೃಷ್ಟಿಕೋನದ ಆಧಾರದ ಮೇಲೆ ರಚಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ನಡಾವಳಿ

2007ರಲ್ಲಿ ಕಾಯ್ದೆಯು ಜಾರಿಯಾದಾಗ, ಉಚ್ಚ ನ್ಯಾಯಾಲಯಗಳಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೃತ್ತ ಅರಣ್ಯ ಅಧಿಕಾರಿಗಳು ಮತ್ತು ವನ್ಯಜೀವ ಹಿತಾಸಕ್ತಿ ಸಂಸ್ಥೆಗಳ ಮೂಲಕ ಅನೇಕ ಅರ್ಜಿಗಳನ್ನು ಸಲ್ಲಿಸಲಾಯಿತು. ಈ ನಡುವೆ ಮಾರ್ಚ್ 2008ರಲ್ಲಿ ವೈಲ್ಡ್‌ಲೈಫ್ ಫಸ್ಟ್, ನೇಚರ್ ಕನ್ಸರ್ವೇಶನ್ ಸೊಸೈಟಿ, ಟೈಗರ್ ರಿಸರ್ಚ್ ಅಂಡ್ ಕನ್ಸರ್ವೇಶನ್ ಟ್ರಸ್ಟ್ ಮತ್ತು ಇತರರು ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯ ಪ್ರಕಾರ, ಅರಣ್ಯ ಹಕ್ಕುಗಳ ಕಾಯ್ದೆಯು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಸಂರಕ್ಷಣೆಯ ಮೂಲಭೂತ ಉದ್ದೇಶಗಳು ಮತ್ತು ಸಂಸತ್ತಿನ ಶಾಸಕಾಂಗ ಸಾಮರ್ಥ್ಯಕ್ಕೆ ವಿರುದ್ಧವಾಗಿದೆ. ಜನವರಿ 2015ರಲ್ಲಿ, ಈ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ಮಾಡಲೆಂದು ವೈಲ್ಡ್‌ಲೈಫ್ ಫಸ್ಟ್ ಮತ್ತು ಇತರರು Vs ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು (WP(C) No.109/2008) . 201400, ಅರ್ಜಿದಾರರು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಪ್ರಕ್ರಿಯೆಯು ದೋಷಪೂರಿತವಾಗಿದ್ದು, ಇದರಿಂದ “ಅತಿಕ್ರಮಣಕಾರರಿಗೆ” ಪ್ರಯೋಜನವಾಗುತ್ತಿದೆ ಎಂದು ಉಲ್ಲೇಖಿಸಲಾಗಿರುವ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದರು. ಇದರಲ್ಲಿ ತಿಳಿಸಿರುವಂತೆ, ಕಾಯ್ದೆಗೆ ಅನುಗುಣವಾಗಿ ಕಾಡಿನಲ್ಲಿ ವಾಸಿಸುವ ಸಮುದಾಯಗಳು ತಮ್ಮ ಹಕ್ಕುಗಳನ್ನು ಬಿಟ್ಟುಕೊಡದೆ, ಸಂರಕ್ಷಿತ ಪ್ರದೇಶಗಳಲ್ಲಿ ಅವರ “ಸ್ವಯಂಪ್ರೇರಿತ ಪುನರ್ವಸತಿ”ಗೆ ಕರೆ ನೀಡುತ್ತದೆ.

2016ರಲ್ಲಿ, ಕಾಯ್ದೆಯನ್ನು ತಿರಸ್ಕರಿಸಿದ ಕುಟುಂಬಗಳನ್ನು ಹೊರಹಾಕಲು ಇಲ್ಲಿಯವರೆಗೆ ಏಕೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿ ಅರ್ಜಿದಾರರಿಂದ ಮನವಿಯನ್ನು ಸಲ್ಲಿಸಲಾಯಿತು. 13ನೇ ಫೆಬ್ರವರಿ 2019ರಂದು, ಸರ್ವೋಚ್ಚ ನ್ಯಾಯಾಲಯವು ತಿರಸ್ಕೃತ ಹಕ್ಕುದಾರರನ್ನು ಹೊರಹಾಕಲು ಎಲ್ಲಾ ರಾಜ್ಯಗಳು ಈ ವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ನಿರ್ದೇಶಿಸಿ ಮಧ್ಯಂತರ ಆದೇಶವನ್ನು ಜಾರಿಮಾಡಿತು. ಇದರಿಂದಾಗಿ ಸುಮಾರು 16 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಗೊಳ್ಳುವ ಸಂದರ್ಭ ಎದುರಾಯಿತು. ಈ ಸಮಯದಲ್ಲಿ ಇದಕ್ಕೆ ಸಂಬಂಧಿತ ಸಮುದಾಯಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ತುರ್ತು ಹಸ್ತಕ್ಷೇಪದ ನಂತರ, ಸರ್ವೋಚ್ಚ ನ್ಯಾಯಾಲಯವು ಸ್ಥಳಾಂತರವನ್ನು ನಿರ್ದೇಶಿಸುವ ತನ್ನ ತೀರ್ಪನ್ನು 28ನೇ ಫೆಬ್ರುವರಿ 2019ರಂದು ತಡೆಹಿಡಿಯಿತು.

ನಂತರ ನ್ಯಾಯಾಲಯವು ಕಾಯ್ದೆಯ ಹಕ್ಕುದಾರರ ಅರ್ಜಿಯನ್ನು ತಿರಸ್ಕರಿಸುವಾಗ ಅನುಸರಿಸಲಾದ ಕಾನೂನು ಕಾರ್ಯವಿಧಾನಗಳನ್ನು ಮುಕ್ತವಾಗಿ ಘೋಷಿಸಲು ರಾಜ್ಯ ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿ, ಅಪಾದಿತ ಅತಿಕ್ರಮಣಗಳ
ಕುರಿತು ಸ್ಯಾಟಲೈಟ್ ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಅರಣ್ಯ ಸಮೀಕ್ಷೆಗೆ ಕರೆ ನೀಡಿತು. ಸೆಪ್ಟೆಂಬರ್ 2019ರ ವೇಳೆಗೆ, ಎರಡು ಪ್ರಮುಖ ಅರ್ಜಿದಾರರಾದ, ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯು ಈ ಪ್ರಕರಣದಿಂದ ಹೊರನಡೆದರು. ಅದೇ ಸಮಯದಲ್ಲಿ ನ್ಯಾಯಾಲಯವು ಭಾರತೀಯ ಅದಣ್ಯ ಸಮೀಕ್ಷೆಯನ್ನು ಕಕ್ಷಿದಾರರನ್ನಾಗಿ ಈ ಪ್ರಕರಣಕ್ಕೆ ಸೇರಿಸಿತು.

ಏಪ್ರಿಲ್ 2ರಂದು ಮತ್ತೆ ಈ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಲಾಗಿದ್ದರೂ, ಉಚ್ಚಾಟನೆಯ ಕರೆಗಳು ಮತ್ತು ಸಮರ್ಥನೆಗಳು ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಪ್ರಕರಣದ ಮೂಲ ಉದ್ದೇಶದಿಂದ ಎಲ್ಲರ ಗಮನವನ್ನು ಬೇರೆಡೆಗೆ ತಿರುಗಿಸಿವೆ. ರಾಜ್ಯ ಮಟ್ಟದಲ್ಲಿ ನಡೆಯಬೇಕಾದ ನಿರಸ್ಕೃತ ಅರ್ಜಿಗಳ ಮರುಪರಿಶೀಲನೆಯು ಅಪೂರ್ಣವಾಗಿಯೇ ಉಳಿದಿದ್ದು, ಅನೇಕ ಪ್ರಕರಣಗಳಲ್ಲಿ ಸರಿಯಾದ ಪ್ರಕ್ರಿಯೆಯ ಉಲ್ಲಂಘನೆಯೂ ಆಗಿದೆ.

ಕೆಲವು ಪ್ರಮುಖ ಕಾಳಜಿಗಳು ಮತ್ತು ತಪ್ಪು ನಿರೂಪಣೆಗಳು

1. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಅರಣ್ಯ-ಸಂಬಂಧಿ ಆಡಳಿತಾಂಗ ವ್ಯವಸ್ಥೆಯು ಕಾಯ್ದೆಯನ್ನು ತಮಗಿರುವ ಅಧಿಕಾರ ಹಾಗು ನಿಯಂತ್ರಣಕ್ಕೆ ಅಪಾಯವೆಂದು ಪರಿಗಣಿಸುತ್ತಿರುವುದರಿಂದಾಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಕಾಯ್ದೆಯ ಪರಿಸರ ರಕ್ಷಣೆಯ ನಿಯಮುವಳಿಗಳನ್ನು ಹತ್ತಿಕ್ಕಲು ಹುನ್ನಾರ ಮಾಡುತ್ತಿರುವುದರಿಂದ, ಅರಣ್ಯ ಹಕ್ಕುಗಳ ಕಾಯ್ದೆಯು ಅನುಷ್ಠಾನದ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಈ ಕಾಯ್ದೆಯು ಅರಣ್ಯವಾಸಿಗಳಿಗೆ ಮತ್ತು ಕಾಡಿನ ಮೇಲೆ ಅವಲಂಬಿಸಿರುವ ಸಮುದಾಯಗಳಿಗೆ ಯಾವುದೇ ಹೊಸ ಹಕ್ಕುಗಳನ್ನು ನೀಡುವುದಿಲ್ಲ, ಬದಲಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಅವರ ಹಕ್ಕುಗಳನ್ನು ಗುರುತಿಸುತ್ತದೆ.

ಯಾವುದೇ ವ್ಯಕ್ತಿಯು ಭೂಮಿಗಾಗಿ ಸಲ್ಲಿಸಿದ ಹಕ್ಕುಪತ್ರ ಅರ್ಜಿಯು ತಿರಸ್ಕೃತಗೊಂಡಲ್ಲಿ, ಅವರ ಕುಟುಂಬವನ್ನು ಅಲ್ಲಿಂದ ಹೊರಹಾಕುವ ಯಾವುದೇ ಅವಕಾಶ ಅಥವಾ ಅನುಮತಿಯನ್ನು ಈ ಕಾಯ್ದೆ ನೀಡುವುದಿಲ್ಲ. ಸಾಕ್ಷಾಧಾರಗಳ ಪ್ರಕಾರ ಸಾಮಾನ್ಯವಾಗಿ, ಹಕ್ಕುಪತ್ರ ಬೇಡಿಕೆಯನ್ನು ತಿರಸ್ಕರಿಸಿದಾಗ, ಅಂತಹ ಕುಟುಂಬಗಳಿಗೆ ಯಾವುದೇ ಸೂಚನೆ ಅಥವಾ ತಾರ್ಕಿಕತೆಯನ್ನು ನೀಡಲಾಗುತ್ತಿಲ್ಲ ಅಥವಾ ಅವರ ಕೇಳಿರುವ ಭೂಮಿಯನ್ನು ಗುರುತಿಸುವುದಕ್ಕಿಂತ ಕಡಿಮೆ ಭೂಮಿಗೆ ಹಕ್ಕುಪತ್ರವನ್ನು ಅನುಮೋದಿಸಲಾಗುತ್ತದೆ. ಇದಲ್ಲದೆ, ಈ ಕಾಯ್ದೆಯ ಹಲವಾರು ಅಂಶಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ.

ಉದಾಹರಣೆಗೆ, ಇತ್ತೀಚೆಗೆ ಹಕ್ಕುಪತ್ರ ಬೇಡಿಕೆಯ ಅನುಮೋದನಾ ನಿರ್ಧಾರದ ಮೌಲ್ಯಮಾಪನ ಮಾಡಲು ಸ್ಯಾಟಲೈಟ್ ಚಿತ್ರಣವನ್ನು ಬಳಸಲು ತಿಳಿಸಲಾಗಿದೆ. ಆದರೆ, ಬೇಡಿಕೆಯನ್ನು ಸಲ್ಲಿಸುವಾಗ ಮಾತ್ರ ಸ್ಯಾಟಲೈಟ್ ಚಿತ್ರಣವನ್ನು ಪೋಷಕ ಪುರಾವೆಯಾಗಿ ಅನುಮತಿಸಲಾಗಿದ್ದು, ಅವುಗಳನ್ನು ತಿರಸ್ಕರಿಸಲು ಇದನ್ನು ಆಧರಿಸಲಾಗುತ್ತಿಲ್ಲ.

2. ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಸಂಸದೀಯ ಅಧಿಕಾರ ಹಾಗೂ ಗ್ರಾಮ ಸಭೆಯ ಅಧಿಕಾರವನ್ನು ಕಡೆಗಾಣಿಸುತ್ತಿವೆ. ಗ್ರಾಮ ಸಭೆಯು 74ನೇ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟ ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗು ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್‌ಗಳ ನಿಬಂಧನೆಗಳು (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) (PESA) ಕಾಯ್ದೆ, 1996ರ ಕಾನೂನು ಚೌಕಟ್ಟುಗಳಿಗೆ ಮೂಲಭೂತ ವ್ಯವಸ್ಥೆಯಾಗಿದೆ. ಈ ಕಾಯ್ದೆಯು, ಗ್ರಾಮ ಸಭೆಗಳು ಆಡಳಿತ ನಿರ್ಧಾರ ಕೈಗೊಳ್ಳುವಾಗ ಲಿಂಗ ವೈವಿಧ್ಯತೆ ಮತ್ತು ಯುವಜನರ ಸೇರ್ಪಡೆಯನ್ನು ಕಡ್ಡಾಯವಾಗಿ ಹೊಂದಿರುವಂತೆ ನಿರ್ದೇಶಿಸುತ್ತದೆ.

3. ಈ ಅರ್ಜಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಪರಸ್ಪರ ವಿರುದ್ಧವಾಗಿ ನಿಲ್ಲಿಸಿ, ಅವರ ನಡುವೆ ವೈಮನಸ್ಸು ಮೂಡಿಸಲು ಪ್ರಯತ್ನಿಸುತ್ತಿವೆ. ಮೊದಲಿನಿಂದಲೂ ಈ ಕಾಯ್ದೆಗೆ ಸಂಬಂಧಿಸಿದ ಆಂದೋಲನವು ಕಾಡುಗಳ ಮೇಲೆ ಅನೇಕ ತಲೆಮಾರುಗಳಿಂದ ಅವಲಂಬಿತರಾಗಿರುವ ಆದರೆ ಇನ್ನೂ ವ್ಯವಸ್ಥಿತವಾಗಿ ಭೂಮಿ ಮತ್ತು ಪ್ರವೇಶ ಹಕ್ಕುಗಳನ್ನು ಪಡೆಯದೇ ಇರುವ ಹಲವಾರು ಕುರುಬ ಮತ್ತು ಅರೆ ಅಲೆಮಾರಿಗಳು, ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳು, ದಲಿತರು ಮತ್ತು ಅಧಿಸೂಚನೆಯಿಂದ ಹೊರಗಿಡಲಾದ (ಡಿನೋಟಿಫೈಡ್) ಬುಡಕಟ್ಟು ಸಮುದಾಯಗಳಂತಹ ವೈವಿಧ್ಯಮಯ ಸಮುದಾಯಗಳನ್ನು ಅರಣ್ಯ ಹಕ್ಕುಗಳ ಕಾಯ್ದೆಯಡಿಯಲ್ಲಿ ಒಳಗೊಳ್ಳುವ ಅಗತ್ಯವನ್ನು ಸಾರಿದೆ. ಕೆಲವು ಸಮುದಾಯಗಳನ್ನು ರಾಜ್ಯಕ್ಕೆ ಅನುಗುಣವಾಗುವಂತೆ ವಿವಿಧ ವರ್ಗಗಳ ಅಡಿಯಲ್ಲಿ ನಿಯೋಜಿಸಲಾಗಿದ್ದು, ಈ ಸನ್ನಿವೇಶವು ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಈ ಕಾಯ್ದೆಯಡಿಯಲ್ಲಿ ಸೇರಿಸಬೇಕಾದ ಅಗತ್ಯತೆಗೆ ಮತ್ತಷ್ಟು ಒತ್ತು ನೀಡುತ್ತದೆ.

4. ಸಂರಕ್ಷಿತ ಪ್ರದೇಶಗಳಿಂದ ಪುನರ್ವಸತಿ ಮಾಡುವ ಯೋಜನೆಗಳು ಕೇವಲ ನಾಮಾರ್ಧಕ್ಕೆ/ಹೆಸರಿಗಾಗಿ ಮಾತ್ರ “ಸ್ವಯಂಪ್ರೇರಿತ” ಎಂದು ಕರೆಯಲಾಗುತ್ತಿದ್ದು, ಅನೇಕಬಾರಿ ಇದನ್ನು ಬಲವಂತದಿಂದ, ಹಿಂಸೆಯಿಂದ, ಒತ್ತಡದಿಂದ ಅಥವಾ ಅಸ್ತಿತ್ವದಲ್ಲಿರುವ ಹಕ್ಕುಗಳ ನಿರಾಕರಣೆ ಮತ್ತು ದುರ್ಬಲಗೊಳಿಸುವಿಕೆಯಿಂದ ನಡೆಸಲಾಗುತ್ತಿದೆ ಎಂದು ದೇಶಾದ್ಯಂತ ಪುರಾವೆಗಳು ದೊರೆತಿವೆ. “ಸ್ವಯಂಪ್ರೇರಿತ ಪುನರ್ವಸತಿ” ಎಂದು ಕರೆದು ಈ ಸ್ಥಳಾಂತರವನ್ನು ಸಮರ್ಥಿಸುವಾಗ, ಈ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಅತೀವ ಗಮನ ನೀಡುವ ಅಗತ್ಯವಿದೆ.

5. ಇತ್ತೀಚಿನ ವರ್ಷಗಳಲ್ಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಸಂರಕ್ಷಿತ ಪ್ರದೇಶಗಳಿಂದ ಅರಣ್ಯವಾಸಿಗಳನ್ನು ಪುನರ್ವಸತಿ ಮಾಡುವ ಯೋಜನೆಗಳಲ್ಲಿ ಅರಣ್ಯ ಹಕ್ಕುಗಳ ಕಾಯಿದೆ ಉಲ್ಲಂಘನೆಗಳ ಕುರಿತು ಹಲವಾರು ಹೇಳಿಕೆಗಳನ್ನು ನೀಡಿದೆ. 2024ರಲ್ಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2024 ಪ್ರಧಾನ ಮಂತ್ರಿ ಜುಗಾ ಯೋಜನೆಯನ್ನು ಪ್ರಾರಂಭಿಸಿತು. ಇದು ಅರಣ್ಯ ಹಕ್ಕುಗಳ ಗುರುತಿಸುವಿಕೆ, ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಮೂಲಕ ಸುಸ್ಥಿರ ಜೀವನೋಪಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆಡಳಿತಾಂಗ ವ್ಯವಸ್ಥೆಯ ಈ ನಡೆಗಳು ಕಾಯ್ದೆಯ ಸಾಂವಿಧಾನಿಕತೆ ಮತ್ತು ಅಧಿಕಾರವನ್ನು ಬಲಪಡಿಸುತ್ತವೆ.

6. ಅರಣ್ಯ ಹಕ್ಕುಗಳ ಕಾಯ್ದೆಯು ತಳಮಟ್ಟದ ಸಮುದಾಯಗಳಿಂದ ಪ್ರಾರಂಭವಾಗಿ ಮೇಲಿರುವ ಆಡಳಿತಾಂಗ ವ್ಯವಸ್ಥೆಯ ವರೆಗಿನ ಸಂವಹನೆ (ಬಾಟಮ್-ಅಪ್ ಅಪ್ರೋಚ್) ಮತ್ತು ಪಾರದರ್ಶಕವಾದ ಮೂರು ಹಂತಗಳ ಹಕ್ಕುಪತ್ರ ಬೇಡಿಕೆಯ ಕಾರ್ಯವಿಧಾನವನ್ನು ಹೊಂದಿದೆ. ಇದು ಆದಿವಾಸಿ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿ ಸಮುದಾಯಗಳ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ – ಇಲ್ಲಿ ಮುಖ್ಯವಾದ ಅಂಶವೇನೆಂದರೆ, ಇದನ್ನು ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಇತರ ಕಾನೂನು ಚೌಕಟ್ಟುಗಳ ಜೊತೆಗೆ ಓದಬೇಕಾದ ಅಗತ್ಯತೆಯಿದೆ (ಉದಾ: ಪಂಚಾಯತ್ ನಿಬಂಧನೆಗಳು (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) PESA, 1996 ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989), ಈ ಕಾನೂನುಗಳು ಸುಳ್ಳು ಅಪರಾಧೀಕರಣ, ಅನಧೀಕೃತ ಸ್ಥಳಾಂತರ ಮತ್ತು ಅರಣ್ಯ ಹಕ್ಕುಗಳ ಅನುಭೋಗದಲ್ಲಿ ಹಸ್ತಕ್ಷೇಪವನ್ನು ಅಪರಾಧವೆಂದು ಪರಿಗಣಿಸುತ್ತವೆ. ಈ ಸಮುದಾಯಗಳು ಈಗಲೂ ವಸಾಹತುಶಾಹಿ ಮತ್ತು ಜಾತಿವಾದಿ ದಬ್ಬಾಳಿಕೆಯ ತಂತ್ರಗಳು,ಸುಳ್ಳು ಆರೋಪಗಳು, “ಅತಿಕ್ರಮಣಕಾರಿ” ಎಂಬ ಅವಹೇಳನಕಾರಿ ಹೆಸರುಗಳು ಮತ್ತು ಪ್ರತೀಕಾರದ ಹಿಂಸಾಚಾರದಿಂದ ಗುರಿಯಾಗುತ್ತಲೇ ಇರುವುದರಿಂದ, ಅರಣ್ಯ ಹಕ್ಕುಗಳ ಕಾಯ್ದೆಗೆ ವ್ಯಕ್ತಪಡಿಸಲಾಗುತ್ತಿರುವ ವಿರೋಧ ಅಥವಾ ಅದನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಸಾಂವಿಧಾನಿಕ ನೈತಿಕತೆಯ ದೃಷ್ಟಿಯ ಮೂಲಕ ಪರಿಶೀಲಿಸುವುದು ಅತ್ಯಗತ್ಯ.

ಮುಂಬರುವ ವಿಚಾರಣೆಯು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರದ ಭೀತಿಯನ್ನು ಹುಟ್ಟುಹಾಕಲಿದ್ದು, ಕಾಯ್ದೆಯ ಅನುಷ್ಠಾನಕ್ಕೆ ವ್ಯವಸ್ಥಿತ ಅಡೆತಡೆಯನ್ನು ಉಂಟುಮಾಡಿ, ಅರಣ್ಯ ಹಕ್ಕುಗಳ ಕಾಯ್ದೆಯ ಸಾಂವಿಧಾನಿಕತೆಯನ್ನು ಎತ್ತಿಹಿಡಿಯಲು ವಿಫಲಗೊಳ್ಳುವ ಸಾಧ್ಯತೆಯಿದೆ. ಇದೇ ಕಾಯ್ದೆಯು ಪರಿಹರಿಸಲು ಮತ್ತು ರದ್ದುಗೊಳಿಸಲು ಪ್ರಯತ್ನಿಸುತ್ತಿರುವ ಐತಿಹಾಸಿಕ ಅನ್ಯಾಯಗಳನ್ನು ವಿಸ್ತರಿಸುವ ಅಪಾಯವನ್ನು ಸಹ ಹೊಂದಿದೆ.

ಇದು ಭಾರತದ ಅರಣ್ಯಗಳು ಮತ್ತು ಅರಣ್ಯದಲ್ಲಿ ವಾಸಿಸುವ ಸಮುದಾಯಗಳ ಮೇಲೆ ಆಗಲಿರುವ ದೂರಗಾಮಿ ಪರಿಣಾಮಗಳನ್ನು ಪರಿಶೀಲಿಸಲು ಪತ್ರಿಕಾ ಸದಸ್ಯರಿಗೆ ನಾವು ನೀಡುತ್ತಿರುವ ಕರೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

1. ಅದಿತಿ.ವಿ.. (+918217226256)

2. ಸಿ. ಆರ್.ಬಿಜೋಯ್, ಅರಣ್ಯ ಮತ್ತು ಸಂಪನ್ಮೂಲ ಆಡಳಿತ ತಜ್ಞರು (+919843172584) 3. ತುಷಾರ್ ದಾಶ್, ಅರಣ್ಯ ಮತ್ತು ಸಂಪನ್ಮೂಲ ಆಡಳಿತ ತಜ್ಞರು (+917008507779),

4. ಸ್ವಪ್ಟಿಲ್ ಶುಕ್ಲಾ, ವಕೀಲರು ಮತ್ತು ಸಂಶೋಧಕರು (+917838108307)

5. ಪಾರೊ..(+917259802850)

6.ಪ್ರಕೃತಿ.. (+917290061566)

7. ಅಮೀರ್ ಹಮ್ಹಾ, ವನ್ ಗುಜ್ಜರ್ ಬುಡಕಟ್ಟು ಯುವ ಸಂಘಟನೆ (+919927531392)

8. ಅರ್ಪಿತಾ ಕೊಡಿವೇರಿ, ಪರಿಸರ ವಕೀಲರು, ಕಾನೂನು ವಿದ್ವಾಂಸರು ಮತ್ತು ಲೇಖಕರು

(akodiveri@vassar.edu)

9. ಕೆ.ಎನ್.ವಿಠಲ್.ಅಧ್ಯಕ್ಷರು…ರಾಜ್ಯ ಮೂಲ ಆದಿವಾಸಿ (+918020220022/7022852970…..knvittal@gmail.com)

ಪತ್ರಿಕಾಗೋಷ್ಠಿಯಲ್ಲಿ. ಜ್ಯೊತಿವಿಠಲ್…
ಜಿಲ್ಲಾ ಸಂಯೋಜಕರು.
ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ.ಚಿಕ್ಕಮಗಳೂರು.
ಸುರೇಶ್ .ಮಗ್ಗಲಮಕ್ಕಿ.ಅದ್ಯಕ್ಷರು..ತಾಲೂಕು.ಬುಡಕಟ್ಟು ಕೃಷಿಕರ ಸಂಘ.ಮೂಡಿಗೆರೆ.
ಶೇಕರ್.ಮುಖಂಡರು.
ಇದ್ದರು.

About Author

Leave a Reply

Your email address will not be published. Required fields are marked *