ಶೌಚಾಲಯ ಕಾಮಗಾರಿ ಅಪೂರ್ಣ.. ಹಳೇಹಳ್ಳಿ ಕಾಲೋನಿ ಗ್ರಾಮಸ್ಥರ ಆಕ್ರೋಷ.
1 min read
ಶೌಚಾಲಯ ಕಾಮಗಾರಿ ಅಪೂರ್ಣ..
ಹಳೇಹಳ್ಳಿ ಕಾಲೋನಿ ಗ್ರಾಮಸ್ಥರ ಆಕ್ರೋಷ.
ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಹಳೇಹಳ್ಳಿ ಕಾಲೋನಿ ಡಾ.ಬಿ.ಆರ್ ಅಂಬೇಡ್ಕರ್ ಭವನದ ಪಕ್ಕ ನಿರ್ಮಾಣವಾದ ಶೌಚಾಲಯ ಕಾಮಗಾರಿ ಅಪೂರ್ಣವಾಗಿದ್ದು ಆಡಳಿತ ವ್ಯವಸ್ಥೆಯ ವಿರುದ್ದ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯ ಹದಿನೈದನೇ ಹಣಕಾಸು , ನರೇಗಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನ ಬಳಸಿ ಸುಮಾರು 3ಲಕ್ಷ 60ಸಾವಿರ ಬಳಸಿ ಶೌಚಾಲಯ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ ಇಂದಿಗೂ ಕಾಮಗಾರಿ ಅಪೂರ್ಣ ಹಂತದಲ್ಲಿದ್ದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾ.ಪಂ ಅಧ್ಯಕ್ಷರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಈ ಸಂಬಂಧ ಪಿ.ಡಿ.ಒ ರವರಲ್ಲಿ ಕೇಳಿಕೊಂಡರೆ ಗುತ್ತಿಗೆದಾರರ ಮೇಲೆ ಆರೋಪ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಂಡು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದರು ಮತ್ತು ಹಳೇಹಳ್ಳಿ ಕಾಲೋನಿಯ ವಸತಿ ಪ್ರದೇಶದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಿಕೊಡುವಂತೆ ಮತ್ತು ವಿದ್ಯುತ್ ದೀಪ ದುರಸ್ಥಿ ನಡೆಸಿಕೊಡುವಂತೆ ಹಲವು ಬಾರಿ ಕೇಳಿಕೊಂಡರು ಅಧಿಕಾರಿಗಳು ಮತ್ತು ಅಧ್ಯಕ್ಷರದು ಅದೇ ನಿರ್ಲಕ್ಷ್ಯ, ಬೇಜವಾಬ್ದಾರಿ ತೋರುತ್ತಿದ್ದಾರೆ.
ಆದ್ದರಿಂದ ಸಂಬಂಧಪಟ್ಟವರು ಇನ್ನು ಹದಿನೈದು ದಿನಗಳೊಳಗೆ ಅಪೂರ್ಣಗೊಂಡ ಶೌಚಾಲಯ ಕಾಮಗಾರಿ ಬೀದಿದೀಪ ದುರಸ್ಥಿ ಕಾರ್ಯ ಪೂರ್ಣಗೊಳಿಸದೆ ಹೋದಲ್ಲಿ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಪೂರ್ಣೇಶ್ ರವರು ಮೂಲಕ ತಿಳಿಸಿರುತ್ತಾರೆ. ಈ ಸಂಧರ್ಭದಲ್ಲಿ ಪ್ರಜ್ವಲ್,ಯೋಗೀಶ್, ಪ್ರಮೋದ್, ಸತೀಶ್,ರಂಜಿತ್, ಹರೀಶ್, ಬೊಮ್ಮಯ್ಯ, ಕೃಷ್ಣಯ್ಯ ಮತ್ತು ಇತರರಿದ್ದರು.