ನಿಧನ……
1 min read……ನಿಧನ……
ದಿಣ್ಣೇಕೆರೆಯ ಡಿ. ಆರ್.ಇಂದ್ರೇಶ್(46)ಇನ್ನಿಲ್ಲ.
*ಯಾವ ಸುಳಿವನ್ನು ಕೊಡದೆ,ಬದುಕಿನ ಅರ್ಧ ದಾರಿಯಲ್ಲಿಯೇ ನಿರ್ಗಮಿಸಿ, ಇಹ ಬದುಕಿಗೆ ಅಂತಿಮ ವಿದಾಯ ಹೇಳಿದ ದಿಣ್ಣೇಕೆರೆಯ ಡಿ. ಆರ್.ಇಂದ್ರೇಶ್*
ವಸ್ತಾರೆ ಸಮೀಪದ ದಿಣ್ಣೇಕೆರೆ ಗ್ರಾಮದ ಡಿ. ಆರ್. ಇಂದ್ರೇಶ್ ಅನಾರೋಗ್ಯದ ಕಾರಣ ಇಂದು ಬೆಳಿಗ್ಗೆ ಘಂಟೆ 3:30 ಸಮಯದಲ್ಲಿ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇದ್ದರೂ ಇಲ್ಲದಂತೆ ಇರುತ್ತಿದ್ದ, ಸೈಲೆಂಟ್ ವಾಯ್ಸ್ ನಂತೆ ಬದುಕುತ್ತಿದ್ದ ಈ ಇಂದ್ರೇಶನ ವಯಸ್ಸು 47ಕ್ಕೆ ಇನ್ನೂ ಬಿದ್ದಿರಲಿಲ್ಲ, 46ರ ಮಧ್ಯಮ ವಯಸ್ಸು, ಬದುಕು ಇನ್ನೂ ಸಾಕಷ್ಟು ದೂರ ತನ್ನ ಕೈಹಿಡಿದ ಮಡದಿ ಮಕ್ಕಳು ತಾಯಿಯು ಸೇರಿದಂತೆ ಬಂಧು-ಬಳಗ ಹಿತೈಷಿಗಳೊಂದಿಗೆ ಪಯಣಿಸಬೇಕಿತ್ತು. ಮಾಡಬೇಕಾದ ಕೆಲಸ ಮತ್ತು ಗುರುತರವಾದ ಜವಾಬ್ದಾರಿ ತನ್ನ ಹೆಗಲ ಮೇಲಿತ್ತು,
ಅಗೋಚರವಾಗಿ ಹೂವೊಂದು ಅರಳಿ ಮುದುಡಿ ಹೋದಂತೆ, ರೋಗವೊಂದರ ನೆಪ ಹೇಳಿ , ಚರ್ಚೆಗೆ ವ್ಯಾಖ್ಯಾನಕ್ಕೆ ಸಿಗದಂತೆ ಸಾವಿನ ತೆಕ್ಕೆಗೆ ಇದ್ದಕ್ಕಿದ್ದ ಹಾಗೆ ಬಿದ್ದು ಹೋಗಿದ್ದು ಅತ್ಯಂತ ದುಃಖಕರ ವಿಷಯವಾಗಿದೆ.
ಬಾ ಎಂದರೆ ವರ್ಷಕೊಮ್ಮೆ ಬರುವ ಉಗಾದಿ ಇನ್ನೇನು ಬರುವುದರಲ್ಲಿತ್ತು, ಉಗಾದಿ ಉಂಡು ಊರೆಲ್ಲರೂ ಕೂಡಿ ಸಂಭ್ರಮಿಸಬೇಕಾಗಿದ್ದ ಈ ಸಮಯದಲ್ಲಿಯೇ ಸಾವೆಂಬ ಸಂಕಟದ ನೋವು ಊರಿನ ತುಂಬಾ ಆವರಿಸಿಕೊಂಡು ಬಿಟ್ಟಿದೆ.
ಸಾವೆಂಬುದು ಬರಬೇಕಾದ ಸಮಯದಲ್ಲಿ ಬಂದರೂ ಕೊಡ ಆ ನೋವನ್ನು ತಡೆಯುವ ಶಕ್ತಿ ಇನ್ನೂ ನಮದಾಗಿಲ್ಲ. ಆದರೆ ಈ ರೀತಿಯ ಸಾವೊಂದರ ದುಃಖವನ್ನು ಸಹಿಸಿಕೊಳ್ಳಲು ಹೇಗೆ ತಾನೇ ಸಾಧ್ಯ?
ಇಂತಹ ಸಾವಿನ ದುಃಖವು ಎದೆಯೊಳಗಿನ ಪ್ರಾರ್ಥನೆಯಂತೆ ಹೊರಹೊಮ್ಮುತ್ತಿದೆ….
ತನ್ನ ಹಡೆದ ತಾಯಿ, ಕೈ ಹಿಡಿದ ಬಾಳ ಸಂಗಾತಿ,ಎರಡು ಹೆಣ್ಣು ಮಕ್ಕಳು, ಸಹೋದರಿ ಸೇರಿದಂತೆ ಒಂದು ದೊಡ್ಡ ಕುಟುಂಬ ವರ್ಗ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಹೊರಟಿರುವ ಈ ಇಂದ್ರೇಶನ ಸಾವಿನ ದುಃಖವನ್ನು ತಡೆಯುವ ಶಕ್ತಿಯು ಅ ಕುಟುಂಬವರ್ಗಕ್ಕೆ ಒದಗಿಬರಲಿ.
*ಇವ ನಮ್ಮ ಹುಡುಗ, ನಮ್ಮ ಕಣ್ಮುಂದೆಯೇ ಹುಟ್ಟಿ ಬೆಳೆದು ಹೊರಟುಹೋದ ಈ ಗೆಳೆಯನಿಗೆ ಸ್ನೇಹಿತರುಗಳ ಹಿತೈಸಿಗಳ ಅಂತಿಮ ನಮನಗಳು, ಭಾವಪೂರ್ಣ ಸಂತಾಪಗಳು.