ನಿಧನ..
1 min read
ನಿಧನ..
ಮಾಜಿ ಶಾಸಕರ ಪತ್ನಿ ಇನ್ನಿಲ್ಲ.
ಆಲ್ದೂರು೨೫ :ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ. ಸಿ.ಎ ಚಂದ್ರೇಗೌಡರ ಧರ್ಮಪತ್ನಿ ಪುಟ್ಟಮ್ಮನವರು ನಿಧನ.
ಆಲ್ದೂರಿನಲ್ಲಿ ಕಳೆದ ಐದು ದಿನಗಳಿಂದ ಶ್ರೀ ಪ್ರಸನ್ನ ಗಣಪತಿ ದೇವಾಲಯದ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನೆ ಅಂಗವಾಗಿ ಆಲ್ದೂರಿಗೆ ಆಲ್ದೂರು ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಗಳ ಜನರು ದೇವರ ಹೆಸರಿನಲ್ಲಿ ಒಂದಾಗಿ ಒಂದೆಡೆ ಸೇರಿ ಸಡಗರ ಹೆಜ್ಜೆ ಹಾಕುತ್ತಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಭ್ರಮದಿಂದ ತೆರೆದುಕೊಂಡಿದ್ದರು.
ಐದು ದಿನದ ಈ ಕಾರ್ಯಕ್ರಮವು ಇಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಒಂದು ಹಂತದಲ್ಲಿ ತೆರೆ ಬೀಳಲಿತ್ತು. ಈ ಕಾರ್ಯಕ್ರಮದ ನೇತೃತ್ವವನ್ನು ಸೇವಾ ಸಮಿತಿಯ ಅಧ್ಯಕ್ಷ ಸ್ಥಾನದೊಂದಿಗೆ ನಿರ್ವಹಿಸುತಿದ್ದವರು ಆಲ್ದೂರಿನ ಕಾಫಿ ಬೆಳೆಗಾರರು ,ದಾನಿಗಳು ಆದ ಸಿ. ಸುರೇಶ್ ಅವರು. ಕಾರ್ಯಕ್ರಮ ಇನ್ನೇನು ಸಂಪನ್ನಗೊಳ್ಳುತ್ತದೆ ಎನ್ನುವಷ್ಟರಲ್ಲಿಯೇ ಸಿ. ಸುರೇಶ್ ಅವರ ಮಾತೃಶ್ರೀ ಶ್ರೀಮತಿ ಪುಟ್ಟಮ್ಮನವರು ಇಂದು ಸಂಜೆ ಘಂಟೆ 4:30 ರಲ್ಲಿನಿಧನರಾಗಿದ್ದಾರೆ.
24 ವರ್ಷಗಳ ಹಿಂದೆಯೇ ತನ್ನ ಪತಿಯನ್ನು ಕಳೆದುಕೊಂಡಿದ್ದ 85ವರ್ಷದ ಪುಟ್ಟಮ್ಮನವರು ವಯೋಸಹಜ ಕಾಯಿಲೆಯ ಕಾರಣವಾಗಿ ಕೆಲ ದಿನಗಳಿಂದ ಹಾಸಿಗೆ ಹಿಡಿದಿದ್ದರು.ಪತಿ ದಿವಂಗತ ಸಿ.ಎ ಚಂದ್ರೇಗೌಡರು 1973~78ರ ಅವಧಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.
ಚಿಕ್ಕಮಾಗರವಳ್ಳಿ ಅಣ್ಣೇಗೌಡರ ತುಂಬು ಕುಟುಂಬವೊಂದರ ಹಿರಿಯ ಸೊಸೆಯಾಗಿ ಬಂದು,ಜೀವನಪೂರ್ತಿ ಕೃಷಿ ಬದುಕನ್ನೇ ತಬ್ಬಿಕೊಂಡು,ಹೊಲಗದ್ದೆ ತೋಟಗಳ ಮಧ್ಯೆ ಒಂದು ದೊಡ್ಡ ಕೂಡು ಕುಟುಂಬವನ್ನು ನಿಭಾಯಿಸುತ್ತಾ , ಮೂರು ಮಕ್ಕಳೊಂದಿಗೆ ಹಸನಾಗಿ ಬದುಕು ಕಟ್ಟಿಕೊಂಡು, ಜೊತೆಗೆ ರಾಜಕಾರಣಿಯ ಮಡದಿಯಾಗಿ ಇಹ ಬದುಕಿಗೆ ಸಾರ್ಥಕವಾದ ಬಾಷ್ಯ ಬರೆದು, ಆಧುನಿಕತೆ ಎಂಬುದು ಎಷ್ಟೇ ಮುಂದುವರೆದಿದ್ದರೂ ಕೂಡ , ಮಲೆನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ತನ್ನ ಹಳೆಯ ತೊಟ್ಟಿ ಮನೆಯ ಶ್ರೀಮಂತಿಕೆಯನ್ನು ಹಾಗೆಯೇ ಇಂದಿಗೂ ಒಂದು ಅಂದ ಚಂದದೊಂದಿಗೆ ಕಾಪಿಟ್ಟುಕೊಂಡು, ಇಹ ಬದುಕಿಗೆ ಒಂದು ಪೂರ್ಣ ವಿರಾಮ ಇಟ್ಟು ಹೊರಟು ಹೋದವರು ಶ್ರೀಮತಿ ಪುಟ್ಟಮ್ಮನವರು.
ಮೃತರು ಮಗ ಸಿ ಸಿ ಸುರೇಶ್. ಸುಧಾ ಮತ್ತು ಸುಮಾ ಎಂಬ ಮೂರು ಮಕ್ಕಳು ಸೇರಿದಂತೆ, ಐದು ಜನ ಮೊಮ್ಮಕ್ಕಳಾದಿಯಾಗಿ ಬಹುದೊಡ್ಡ ಕುಟುಂಬವನ್ನು ಹಿತೈಶಿಗಳನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ನಾಳೆ ಮಧ್ಯಾಹ್ನ 3.ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ.