ಮಾ.16.2025.ರಂದು ಮೂಡಿಗೆರೆಯಲ್ಲಿ ಜಿಲ್ಲಾ ಮಟ್ಟದ ಜನಪದಕಲಾಮೇಳ
1 min read
ಮಾ.16.2025.ರಂದು ಮೂಡಿಗೆರೆಯಲ್ಲಿ ಜಿಲ್ಲಾ ಮಟ್ಟದ ಜನಪದಕಲಾಮೇಳ
, ಚಿಕ್ಕಮಗಳೂರು: ಮೂಡಿಗೆರೆಯ ಮಿತ್ರ ಜಾನಪದ ಕಲಾ ಸಂಘದ ವತಿಯಿಂದ ಮಾ.16.ರಂದು ಬೆಳಿಗ್ಗೆ 9.3000 ಅಡ್ಯಂತಾಯ ರಂಗ ಮಂದಿರದಲ್ಲಿ ಜಾನಪದ ಉಳಿವಿಗೆ ಮರಳಿ ಜಾನಪದಕ್ಕೆ ಎಂಬ ಘೋಷವಾಕ್ಯದಡಿಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ-2025 ಆಯೋಜಿಸಲಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿ ಮಂಜುನಾಥ್ ಬಕ್ಕಿ ತಿಳಿಸಿದರು.
ಸರ್ಕಾರ ಹಿಂದಿನಿಂದಲೂ ಕಲಾವಿದರನ್ನು ಕಡೆಗಣಿಸುತ್ತ ಬಂದಿದೆ ಕಲಾವಿದರಿಗೆ ಪ್ರೋತ್ಸಾಹ ಧನ, ಮಾಸಿಕ ವೇತನ ಕಲಾಪ್ರಕಾರ ಇನ್ನಿತರ ಹಲವಾರು ರೀತಿಯಲ್ಲಿ ಉತ್ಸಾಹ ಮತ್ತು ಪ್ರೋತ್ಸಾಹವನ್ನು ನೀಡದೆ ಕಡೆಗಣಿಸುತ್ತ ಜಾನಪದ ಕಲೆಗಳನ್ನು ಬೆಳೆಸುವಲ್ಲಿ ಮತ್ತು ಉಳಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಂಘಟನೆ ಸ್ಥಳಿಯ ದಾನಿಗಳು , ಕಲಾಪೋಷಕರ ನರವಿನೊಂದಿಗೆ ಯುವಜನಮೇಳ ಆಯೋಜಿಸಲಾಗುತ್ತಿದೆ ಎಂದರು.
ಸರ್ಕಾರವು ಈ ಹಿಂದೆ ಯುವಜನೋತ್ಸವ ಮತ್ತು ಯುವಜನ ಮೇಳವನ್ನು ನಡೆಸುತ್ತ ಬಂದಿದ್ದೂ ಆದರೆ ಸುಮಾರು 6 ರಿಂದ 7 ವರ್ಷಗಳಿಂದ ಯುವಜನ ಮೇಳವನ್ನು ನಡೆಸದೆ ರದ್ದುಪಡಿಸಿರುವುದು ಖಂಡನೀಯ ಮತ್ತು ಜನಪದ ಕಲಾವಿದರಿಗೆ ಅವಕಾಶಗಳೆ ಇಲ್ಲದಂತಾಗಿದೆ ಎಂದರು.
ಜಾನಪದ ಕಲಾ ಪ್ರಕಾರಗಳಿಗೆ ಆದ್ಯತೆ ನೀಡುವ ಜಿಲ್ಲಾ ಯುವಜನ ಮೇಳದಲ್ಲಿ ಜಿಲ್ಲೆಯ ಯುವ ಸಂಘ ಸಂಸ್ಥೆಗಳು, ಪ್ರತಿನಿಧಿಗಳು, ಕಲಾ ತಂಡಗಳು ಹಾಗೂ ಆಸಕ್ತ ಯುವಜನರು ತಮ್ಮ-ತಮ್ಮ ತಂಡಗಳೊಂದಿಗೆ ಹಾಗೂ ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ನೇರವಾಗಿ
ಸ್ಪರ್ಧಿಸಬಹುದಾಗಿದೆ ಎಂದರು.
ಜನಪದ ಗೀತೆ, ಯುವಕ/ಯುವತಿಯರಿಗೆ-6 ಜನ,ಜಾನಪದ ನೃತ್ಯ ಯುವಕ/ಯುವತಿಯರಿಗೆ-10 ಜನ. ನಿಶಾನಿ ವಾದ್ಯ ಯುವಕರಿಗೆ ಮಾತ್ರ -7 ಜನ, ಲಾವಣಿ ಯುವಕ/ಯುವತಿಯರಿಗೆ-ವೈಯಕ್ತಿಕ ಸ್ಪರ್ಧೆಗಳು ಆಯೋಜಿಸ ಲಾಗಿದೆ
ಹೆಚ್ಚಿನ ಮಾಹಿತಿಗಾಗಿ 95919 71168, : 63604 46648,9449 284210, 94486 67558 ಸಂಪರ್ಕಿಸಬಹುದಾಗಿದೆ. ಗೋಷ್ಟಿಯಲ್ಲಿ ಸಂಘದ ನವೀನ್ ಕಣಚೂರು,ಶಶಿಕುಮಾರ್,ಜಯಪಾಲ್, ಹೇಮಂತ್, ಶ್ರವಣ್, ಪ್ರೀತಮ್ ಇದ್ದರು.