ಮಗಳನ್ನ ಅನ್ಯ ಸಮುದಾಯಕ್ಕೆ ಮದುವೆ ಮಾಡಿದಕ್ಕೆ ಕುಟುಂಬಕ್ಕೆ ಬಹಿಷ್ಕಾರ…
1 min read
ಮಗಳನ್ನ ಅನ್ಯ ಸಮುದಾಯಕ್ಕೆ ಮದುವೆ ಮಾಡಿದಕ್ಕೆ ಕುಟುಂಬಕ್ಕೆ ಬಹಿಷ್ಕಾರ…
ಚಿಕ್ಕಮಗಳೂರು: ಅನ್ಯ ಸಮುದಾಯದ ಯುವಕನೊಂದಿಗೆ ತನ್ನ ಮಗಳನ್ನು ಮದುವೆ ಮದುವೆ ಮಾಡಿದಕ್ಕಾಗಿ ಕುಟುಂಬವನ್ನು ಬಹಿಷ್ಕಾರ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯಮ್ಮ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಓರ್ವ ಮಗನಿದ್ದಾನಂತೆ. ಮೂವರು ಹೆಣ್ಣು ಮಕ್ಕಳನ್ನ ಅದೇ ಸಮುದಾಯದವರೊಂದಿಗೆ ಮದ್ವೆ ಮಾಡಿಸಿದ್ದಾರಂತೆ. ಕೊನೆಯ ಮಗಳು ಬೇರೆ ಸಮುದಾಯದ ಯುವಕನನ್ನು ಇಷ್ಟಪಟ್ಟ ಹಿನ್ನೆಲೆಯಲ್ಲಿ ಮದುವೆ ಮಾಡಿಸಿದ್ದಾರೆ. ಮದುವೆಗೆ ಆಪ್ತರು ಸಂಬಂಧಿಕರು ಬಂದು ಹೋಗಿದ್ರು, ಮದುವೆ ಮುಗಿದ ಮೇಲೆ ಊರಿನಲ್ಲಿ ತಮ್ಮದೇ ಸಮುದಾಯದವರು ಬಹಿಷ್ಕಾರಿಸಿದ್ದಾರಂತೆ.
ಬಹಿಷ್ಕಾರ ಹಾಕಿದ ನಂತರ ಜಯಮ್ಮ ತಮ್ಮ ಸಮುದಾಯವರ ಮನೆ ಶುಭ ಸಮಾರಂಭಕ್ಕೆ ಸೇರಿದಂತೆ ದೇವಸ್ಥಾನಕ್ಕೂ ಹೋಗೋ ಹಾಗಿಲ್ವಂತೆ. ಹೀಗಾಗಿ ನ್ಯಾಯ ದೊರಕಿಸಿ ಕೊಡಿ ಎಂದು ಜಯಮ್ಮ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲು ಹತ್ತಿದ್ದಾರೆ. ಅಲ್ಲದೇ ಎಸ್ಸಿ, ಎಸ್ಟಿ ದೌರ್ಜನ್ಯ ಸಮಿತಿ ಸಭೆಯಲ್ಲೂ ಈ ಕುರಿತು ಪ್ರಶ್ನೆ ಮಾಡುತ್ತೇನೆ ಎಂದು ಜಯಮ್ಮ ಹೇಳುತ್ತಿದ್ದಾರೆ. ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿದ್ದರೆ, ಅಧುನಿಕ ಜಗತ್ತಿನಲ್ಲಿ ಹೀಗೂ ಬಹಿಷ್ಕಾರದ ವಾಸನೆ ಇರೋದು ನಿಜಕ್ಕೂ ದುರಂತವೇ ಸರಿ.