ವಕೀಲ ಮೋಹನ್ ಕುಮಾರ್ ದಾನಪ್ಪರವರಿಗೆ ‘ ಆತ್ಮಶ್ರೀ ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ ಪ್ರಧಾನ #avintvcom
1 min read
ವಕೀಲ ಮೋಹನ್ ಕುಮಾರ್ ದಾನಪ್ಪರವರಿಗೆ ‘ ಆತ್ಮಶ್ರೀ ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ ಪ್ರಧಾನ
ದಿನಾಂಕ:-22-11-2020 ರಂದು ಬೆಂಗಳೂರಿನ ಯಲಹಂಕ ಉಪನಗರದಲ್ಲಿನ ಹೋಟೆಲ್ ಪ್ರಖ್ಯಾತಿಯಲ್ಲಿ ಆತ್ಮ ಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಬೆಂಗಳೂರು ರವರ ವತಿಯಿಂದ ಹಮ್ಮಿಕೊಂಡ 65ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿ ವಕೀಲ ಮೋಹನ್ ಕುಮಾರ್ ದಾನಪ್ಪನವರಿಗೆ ” ಆತ್ಮ ಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ”ಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಹೈ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಜಸ್ಟಿಸ್ ಅರಳಿ ನಾಗರಾಜ್ ರವರು, ಹಾಗೂ ಶ್ರೀ ಕೊಳದ ಮಠ ಮಹಾ ಸಂಸ್ಥಾನದ ಶ್ರೀ ಶಾಂತವೀರ ಮಹಾ ಸ್ವಾಮೀಜಿಯವರು, ಅನಿವಾಸಿ ಭಾರತೀಯರು ಹಾಗೂ ಖ್ಯಾತ ವೈದ್ಯರಾದ ಡಾ! ಪ್ರಭಾಕರ್ ರೆಡ್ಡಿ (ಲಂಡನ್)ಯವರು, ಅನಿವಾಸಿ ಭಾರತೀಯರು ಹಾಗೂ ಮೈಸೂರಿನ ಗ್ಲೋಬಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಜಯಚಂದ್ರ ರಾಜುರವರು, ಹಾಗೂ ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯ್ಕರವರು, ಖ್ಯಾತ ಸಾಹಿತಿಗಳಾದ ಶ್ರೀ ಸದಾಶಿವಯ್ಯ ಜರಗನಹಳ್ಳಿರವರು, ಚಲನಚಿತ್ರ ನಿರ್ಮಾಪಕರಾದ ಡಾ. ಶ್ರೀಹರಿರವರು,ಮತ್ತು ಖ್ಯಾತ ಹಿನ್ನಲೆ ಗಾಯಕರಾದ ಶ್ರೀಮತಿ ನಾಗಚಂದ್ರಿಕಾ ಭಟ್ ರವರು, ಕಿರುತೆರೆ ಹಾಗೂ ಚಲನಚಿತ್ರ ನಟಿ ಕುಮಾರಿ ಖುಷಿ ರವರು ಮತ್ತು
ಸದ್ರಿ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಾಹಿತಿ, ನಟ ನಿರ್ದೇಶಕ, ಪತ್ರಕರ್ತರಾದ ಡಾ!! ಗುಣವಂತ ಮಂಜು,ರವರು ಪ್ರಶಸ್ತಿ ಪ್ರಧಾನ ಮಾಡಿದರು!