लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕುಡಿಯುವ ನೀರಿಗೆ ಯುಜಿಡಿ ನೀರು ಮಿಶ್ರಣ : ಚರಂಡಿ ಕೆಲಸಕ್ಕೆ ರಸ್ತೆ ಬಂದ್ !

1 min read

ಕುಡಿಯುವ ನೀರಿಗೆ ಯುಜಿಡಿ ನೀರು ಮಿಶ್ರಣ : ಚರಂಡಿ ಕೆಲಸಕ್ಕೆ ರಸ್ತೆ ಬಂದ್ !

ಚಿಕ್ಕಮಗಳೂರು: ನಗರಸಭೆ ಅಧಿಕಾರಿ, ಸಿಬ್ಬಂದಿ ಅಸಡ್ಡೆಯಿಂದ ಒಂದು ವರ್ಷದಿಂದ ಕುಡಿಯುವ ನೀರಿನಲ್ಲಿ ಯುಜಿಡಿ ಕಲುಷಿತ ನೀರು ಮಿಶ್ರಣ ಆಗುತ್ತಿದ್ದು , ಸರಿಪಡಿಸದಿದ್ದಲ್ಲಿ ಜ.೨೬ ರಂದು ಖಾಲಿ ಕೊಡ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯ ಕಾವೇರಿ ಬಡಾವಣೆಯಲ್ಲಿನ ಪುನೀತ್ ರಾಜಕುಮಾರ್ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನಲ್ಲಿ ಯುಜಿಡಿ ಕಲುಷಿತ ನೀರು ನಿರ್ಮಿಶ್ರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ .
ಮಮತಾ ಲಾಯರ್ ಮನೆಯ ರಸ್ತೆಯ ಚರಂಡಿ ಕಾಮಗಾರಿಗಾಗಿ ಪೂರ್ಣ ರಸ್ತೆ ಮುಚ್ಚಿದ್ದು ,ಸಾರ್ವಜನಿಕರು ಓಡಾಡಲು ತೊಂದರೆಯಾಗಿ ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರ ಸಭೆ ಅಧಿಕಾರಿ ಮತ್ತು ಸಿಬ್ಬಂದಿ , ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಚಿಕ್ಕಮಗಳೂರು ನಗರ ಕಳಪೆ ಕಾಮಗಾರಿಗಳತ್ತ ಹೆಸರು ಮಾಡಲು ದಾಪುಗಾಲು ಇಡುತ್ತಿದ್ದು ಇದಕ್ಕೆ ಈ ರಸ್ತೆ ಸಾಕ್ಷಿಯಾಗಿ ನಿಂತಿದೆ .
ಕೆಂಪನಹಳ್ಳಿ ಮತ್ತು ಕಾಳಿದಾಸ ನಗರದ ಹಲವು ರಸ್ತೆಗಳಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಹಲವು ಪೈಪ್‌ಗಳನ್ನು ಒಡೆದು ಹಾಕಲಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ನಗರಸಭೆ ಅಸಡ್ಡೆಯೊಂದಿಗೆ ಅಖಾಡಕ್ಕೆ ಇಳಿದಿದ್ದು ಸಾರ್ವಜನಿಕರು ಓಡಾಡುವ ರಸ್ತೆಯನ್ನು ಸಂಪೂರ್ಣವಾಗಿ ಕಳೆದ ಎರಡು ದಿನಗಳಿಂದ ಮುಚ್ಚಿ ಇಲ್ಲಿನ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ನಗರಸಭೆ ಸದಸ್ಯೆ ಲಲಿತಾ ರವಿ ನಾಯ್ಕ್ ಮಾತನಾಡಿ ನಗರಸಭೆಯ ಅಧಿಕಾರಿ ವರ್ಗ ಕೂಡಲೇ ಎಚ್ಚೆತ್ತುಕೊಂಡು ಈ ಅವ್ಯವಸ್ಥೆಯನ್ನು ಸರಿಪಡಿಸದೆ ಇದ್ದರೆ ಖಾಲಿ ಕೊಡ ಹಿಡಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

 

About Author

Leave a Reply

Your email address will not be published. Required fields are marked *