AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಸಿಕ ಸಭೆ….

ದಿನಾಂಕ 3:12.2024ನೇ ಮಂಗಳವಾರದಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಸಿಕ ಸಭೆ ನಡೆಯಿತು.

2024 ನೇ ಡಿಸೆಂಬರ್ 23 ನೇ ತಾರೀಕಿನಂದು ಸಕಲೇಶಪುರದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟವು ಬೆಳೆಗಾರರ ಸಮಾವೇಶ ಮತ್ತು ಕಾಫಿ ಕೃಷಿ ಮೇಳ ಹಾಗೂ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಂಡಿರುವ ಬಗ್ಗೆ ಚರ್ಚೆ ನಡೆಯಿತು.

ವಾರ್ಷಿಕ ಮಹಾಸಭೆ ಬಾಬ್ತಿನ ಹಣವನ್ನು ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ
ಯಸಳೂರು ಹೋಬಳಿ ಬೆಳೆಗಾರರ ಸಂಘ
ಆಲೂರು ತಾಲೂಕು ಬೆಳೆಗಾರರ ಸಂಘ
ಕಾಂಡ್ಯ ಹೋಬಳಿ ಬೆಳೆಗಾರರ ಸಂಘ
ನೀಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಹೋರಾಟದ ಫಲವಾಗಿ ಬೆಳೆಗಾರರ ಸಮೂಹಕ್ಕೆ ಉಂಟಾಗಿರುವ ಅನುಕೂಲಗಳ ಕಿರು ಪರಿಚಯದ ಕೈಪಿಡಿಯನ್ನು ಮಾಜಿ ಶಾಸಕರಾದ ಹೆಚ್ ಎಂ ವಿಶ್ವನಾಥ್ ಅವರು ಬಿಡುಗಡೆಗೊಳಿಸಿದರು.

ಯಸಳೂರು ಹೋಬಳಿ ಬೆಳಗಾರರ ಸಂಘದ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರಿಗೆ ಸಭೆಯಲ್ಲಿ ಅಭಿನಂದಿಸಲಾಯಿತು ಹಾಗೂ ಯಸಳೂರು ಹೋಬಳಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರಿಗೆ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು

ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ನೂತನ ಅಧ್ಯಕ್ಷರು ,ಉಪಾಧ್ಯಕ್ಷರಿಗೆ ಸಭೆಯಲ್ಲಿ ಅಭಿನಂದಿಸಲಾಯಿತು.

ಸಭೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭಾಗವಹಿಸಿ ಮಾಲಿನ್ಯದ ಬಗ್ಗೆ ಮಾಹಿತಿ ನೀಡಿದರು.

About Author

Leave a Reply

Your email address will not be published. Required fields are marked *