AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಲ್ಲಿ ಮೂತ್ರವಿಸರ್ಜನೆ ಮಾಡಬಾರದು ಎಂದು ಹೇಳಿದ್ದೆ ತಪ್ಪಾ….

1 min read

ಇಲ್ಲಿ ಮೂತ್ರವಿಸರ್ಜನೆ ಮಾಡಬಾರದು ಎಂದು ಹೇಳಿದ್ದೆ ತಪ್ಪಾ….

ಕುಡಿದ ಮತ್ತಿನಲ್ಲಿ ದಾಂದಲೆ.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯನ ಕಾಲಿನಮೂಳೆ ಮುರಿತ.
ಮೂಡಿಗೆರೆ ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ವೈನ್ ಶಾಪ್ ಬಳಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತಿದ್ದ ಯುವಕನಿಗೆ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಸರಿಯಲ್ಲ ಎಂದು ಅರೆಕೂಡಿಗೆ ಶಿವಣ್ಣ ಹೇಳಿದಾಗ ಕುಡಿದ ಅಮಲಿನಲ್ಲಿದ್ದ ಯುವಕ ನಿನ್ನ ತಲೆ ಮೇಲೆ ವಿಸರ್ಜನೆ ಮಾಡ ಬೇಕಾ ಎಂದು ಹೇಳಿ ಹಲ್ಲೆ ನಡೆಸಿರುತ್ತಾನೆ.
ಬಿಡಿಸಲು ಬಂದ ಊರಬಗೆಉದಯರವರ ಮೇಲೆ ಅವರ ಜೊತೆಯಲ್ಲಿದ್ದ 6.ಜನರ ಗುಂಪು ಹಲ್ಲೆ ಮಾಡಿದೆ.
ಅರೆಕೂಡಿಗೆಶಿವಣ್ಣರವರನ್ನು ಕೆಳಗೆ ಬಿಳಿಸಿ ಕಾಲಿನಿಂದ ತುಳಿದು ಕಾಲಿನ ಮೇಲೆ ಕಲ್ಲು ಎತ್ತಿಹಾಕಿ ಕಾಲಿನ ಮೂಳೆ ಮುರಿಯುವಂತೆ ಮಾಡಿದ್ದಾರೆ.ತಲೆಗೆ ಸಹ ಕಲ್ಲಿನಿಂದ ಹೊಡೆದು ಗಾಯ ಗೊಳಿಸಿರುತ್ತಾರೆ.
ಬಿಡಿಸಲು ಬಂದ ಉದಯರವರಿಗೂ ಹಲ್ಲೆ ಮಾಡಿ ಗಾಯ ಗೊಳಿಸಿರುತ್ತಾರೆ.
ವಯಸ್ಸಿನ ಬಗ್ಗೆ ಅರಿವಿರದ ಈ ಗುಂಪು ಮಾನವಿಯತೆಯ ಮೌಲ್ಯ ಹೇಳಿದ್ದೆ ತಪ್ಪಾಯಿತ.
ಮೂಡಿಗೆರೆ ಪಟ್ಟಣದಲ್ಲಿ ಯುವಕರ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಅತಿಯಾಗಿರುವುದು ಮಹಿಳೆಯರು.ಮಕ್ಕಳು ತಿರುಗಾಡುವುದೆ ಸಾಹಸದ ಕೆಲಸವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂದಪಟ್ಟ ಇಲಾಖೆ ಶಿಸ್ತಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಸಾರ್ವಜನಿಕರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *