ಶ್ರೀ ರಾಮೇಶ್ವರ ಕ್ಷೇತ್ರ ನಿಡುವಾಳೆಯಲ್ಲಿ ದಿ:29:11:2024 ರ ಶುಕ್ರವಾರ ಸಂಜೆ ಕಾರ್ತಿಕ ದೀಪೋತ್ಸವ ಜರುಗಿತು.
1 min read
ಶ್ರೀ ರಾಮೇಶ್ವರ ಕ್ಷೇತ್ರ ನಿಡುವಾಳೆಯಲ್ಲಿ ದಿ:29:11:2024 ರ ಶುಕ್ರವಾರ ಸಂಜೆ ಕಾರ್ತಿಕ ದೀಪೋತ್ಸವ ಜರುಗಿತು.
ವಿದ್ಯುದ್ದೀಪ, ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದ ಶ್ರೀ ರಾಮೇಶ್ವರ ದೇವಸ್ಥಾನ ಕ್ಷೇತ್ರದ ಆಡಳಿತ ದಾರರಾದ ಶ್ರೀ ಸುನೀಲ್ ಜೆ ಗೌಡ ದಂಪತಿಗಳು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ದೀಪೋಜ್ವಲನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅಣತೆಗಳು ಪ್ರಜ್ವಲಿಸಿದವು .
ಸುಡುಮದ್ದು ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿತು.
ದೀಪೋತ್ಸವದ ನಂತರ ಸಾರ್ವಜನಿಕ ಅನ್ನಸಂತರ್ಪಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಶ್ವೇತಾ ಸುನೀಲ್ ಜೆ ಗೌಡ, ಮಗ ಸಿದ್ದಾಂತ್ ಗೌಡ, ದಿವಂಗತ ಮಾಜಿ ಸಂಸದರಾದ ಯು ಕೆ ಲಕ್ಷ್ಮಣ್ ಗೌಡರವರ ಧರ್ಮಪತ್ನಿ ಮಾತೃಶ್ರೀ ಲಕ್ಷ್ಮೀ ಲಕ್ಷ್ಮಣ ಗೌಡ, ಪುತ್ರಿಯರಾದ ಶ್ರೀಮತಿ ಗೀತಾ ಗೌಡ ರೂಪ ಗೌಡ , ಮಾಜಿ ಅರ್ಚಕರಾದ ರಾಮ್ ಭಟ್ ವಾಟೇಖಾನ್, ಮಧುಕರ ಗೋಖಲೆ ಮಲ್ಲಿಗೆ ಎಸ್ಟೇಟ್, ವ್ಯವಸ್ಥಾಪಕರಾದ ಎನ್ ಆರ್ ನಾಗರಾಜ್ ಭಟ್, ಕ್ಷೇತ್ರದ ಅರ್ಚಕರಾದ ಚರಣ್ ಕಾರಂತ್ , ದಿನಕರ ಭಟ್, ಸಿಬ್ಬಂದಿ ಸೂರ್ಯನಾರಾಯಣ ಗ್ರಾಮಸ್ಥರಾದ ಶಿವಪ್ಪ ಉರುವಿನಖಾನ್, ವಿಶ್ವ ಆಟೋ , ಸುಬ್ರಾಯ ಗೌಡ ,ಹೆಚ್ ಆರ್ ಚಂದ್ರಶೇಖರ್ , ರವಿ ಬಿ ಉರುವಿನಖಾನ್, ಜಯಂತ್ ಪೂಜಾರಿ , ಚಂದ್ರಶೇಖರ್ , ಮುರಳಿ ಜಾವಳಿ, ಶೇಖರ್ ಮಾವಿನಕಟ್ಟೆ, ನಾಗೇಶ್ ಸಪಾಲ್ಯ, ಸುರೇಶ್ , ಶ್ರೀಮತಿ ಸುಮಿತ್ರಾ ಜಗನ್ನಾಥ್ , ಶಂಕರ್.ಸಂತೊಷ್ ಸಾಲಿಯಾನ್ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು , ಮತ್ತಿತರರು ಉಪಸ್ಥಿತರಿದ್ದರು.