AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಲಿತ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮ…..

1 min read

ದಲಿತ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮ…..
ದಿನಾಂಕ -26-11-2024 ನೇ ಮಂಗಳವಾರ ಮೂಡಿಗೆರೆಯ ಹೌಸಿಂಗ್ ಬೋರ್ಡ್ ನಲ್ಲಿರುವ ಜೈ ಭೀಮ್ ಹಾಲ್ ನಲ್ಲಿ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಗ್ಗಲಮಕ್ಕಿ ಗಣೇಶ್ – ಈ ದೇಶದ ಸರ್ವ ಶ್ರೇಷ್ಠ ಗ್ರಂಥ ಭಾರತದ ಸಂವಿಧಾನ ಈ ಗ್ರಂಥವನ್ನು ಎಲ್ಲರು ಓದಿದಾಗ ಮಾತ್ರ ಸರ್ವರು ಮಾನವೀಯ ಮೌಲ್ಯಗಳಿಂದ ಬದುಕಲು ಸಾಧ್ಯ ಎಂದರು..
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಹೆಚ್ ಬಿ ಹಾಲಯ್ಯರವರು. ಮನುಸ್ಮೃತಿ ಇದ್ದ ಕಾಲಘಟ್ಟದಲ್ಲಿ ಈ ದೇಶದ 85,% ಬಹುಜನರಿಗೆ ಯಾವುದೇ ಅವಕಾಶ ಇರಲಿಲ್ಲ ಆದರೆ ಅಂಬೇಡ್ಕರ್ ರವರು ಸಂವಿಧಾನ ಬರೆಯುವ ಮೂಲಕ ಎಲ್ಲರಿಗೂ ಸಮಾನವಾದ ಅವಕಾಶ ನೀಡಿರುವುದಕ್ಕೆ ಇಂದು ಸರ್ವರು ಸ್ವತಂತ್ರವಾಗಿ ಬದುಕಲು ಸಾಧ್ಯ ಆಗಿದೆ ಎಂದರು,ಹಾಗಾಗಿ ಯಾರು ಕೂಡ ಸಂವಿಧಾನಕ್ಕೆ ಅಗೌರವ ಸಲ್ಲಿಸೋದು ಮಾಡಬಾರದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಂಜುನಾಥ್ ಪಿ ಕೆ ವಹಿಸಿದ್ದರು.
ಈ ಒಂದು ಕಾರ್ಯಕ್ರಮದಲ್ಲಿ ನಿವೃತ್ತ ಉಪ ತಹಶೀಲ್ದಾರ್ ಮಂಜುನಾಥ್, ಕಾಂಗ್ರೆಸ್ ನ ಜಿಲ್ಲಾ ವಕ್ತಾರ ಎಂ ಎಸ್ ಅನಂತ್, ಸಾವಿತ್ರಿ, ಸಿದ್ದೇಶ್, ಸಾಗರ್, ಶೇಖರ್, ಜೈಪಾಲ್,ಭಾನುಪ್ರಕಾಶ್, ಯೋಗೇಶ್, ಕುಮಾರ್, ಶಿವಣ್ಣ, ಸುರೇಶ್, ನಾಗೇಶ್, ರವೀಂದ್ರ, ಬೈರಪ್ಪ, ಅರುಣ್, ಶಿವಪ್ರಸಾದ್, ಗಿರಿದರ್ಶಿನಿ ಬಾಲಕರ ವಿದ್ಯಾರ್ಥಿ ನಿಲಯದ ವಿಧ್ಯಾರ್ಥಿಗಳು ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭೀಮಗೀತೆಯನ್ನು ಬಕ್ಕಿ ಮಂಜುನಾಥ್ ಹಾಡಿದರು,ಕಾರ್ಯಕ್ರಮದ ನಿರ್ವಹಣೆಯನ್ನು ಹರೀಶ್ ನಲಿಕೆ ನಿರ್ವಹಿಸಿದರು.

ಶಿವಪ್ರಸಾದ್.ವಂದಿಸಿದರು.

About Author

Leave a Reply

Your email address will not be published. Required fields are marked *