AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು-ಕಾವ್ಯ ಸಂಸ್ಕೃತಿಯಾನ ಸಮಾರೋಪ ಸಮಾರಂಭ-ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಆರ್.ಜೆ.ಹಳ್ಳಿ ನಾಗರಾಜ್ ಅವರಿಗೆ ಗೌರವ ಸಮರ್ಪಣೆ

ಚಿಕ್ಕಮಗಳೂರು-ನಗರದ ಕನ್ನಡ ಭವನದಲ್ಲಿ ಬೆಂಗಳೂರು ರಂಗಮoಡಲ,ಅವಧಿ ಸಂಸ್ಥೆ ಹಾಗೂ ಕಸಾಪ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಕಾವ್ಯ ಸಂಸ್ಕೃತಿಯಾನದ ಸಮಾರೋಪ ಸಮಾರಂಭದಲ್ಲಿ ಅಂಗವಾಗಿ ಕವಿಯತ್ರಿ ಸವಿತಾ ನಾಗಭೂಷಣ್, ಕಾವ್ಯ ಸಂಸ್ಕೃತಿ ಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ರಾಜ್ಯ ಸಂಚಾಲಕ ಆರ್.ಜೆ.ಹಳ್ಳಿ ನಾಗರಾಜ್ ಅವರಿಗೆ ಜಿಲ್ಲಾ ಕಸಾಪ ದಿಂದ ಗೌರವಿಸಿ ಸನ್ಮಾನಿಸಲಾಯಿತು.

ಇದೇ ವೇಳೆ ಕಥೆಗಾರ್ತಿ ಸವಿತಾ ನಾಗಭೂಷಣ್ ಕವಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಬಳಿಕ ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲೆ ಡಾ|| ಪುಷ್ಪಭಾರತಿ ಸಮಾರೋಪ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ರಾಮನಗರ ಕಾವ್ಯ ಸಂಸ್ಕೃತಿ ಯಾನದ ಅಧ್ಯಕ್ಷ ಡಾ.ಬೈರಮಂಡಲ ರಾಮೇಗೌಡ, ಸದಸ್ಯ ಗುಂಡಣ್ಣ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ತರೀಕೆರೆ ಅಧ್ಯಕ್ಷ ರವಿದಳವಾಯಿ, ಮಹಿಳಾ ಘಟಕದ ಅಧ್ಯಕ್ಷೆ ವಿಜಯ ಲಕ್ಷ್ಮಿ ,ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ನಗರಾಧ್ಯಕ್ಷ ಸಚಿನ್ ಸಿಂಗ್, ಸುಮಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *