ಬೀಟಮ್ಮ ಕಾಡಾನೆ ಗ್ಯಾಂಗ್ ಸ್ಥಳಾಂತರಿಸಿ ಇಲ್ಲವೇ ಧರಣಿ ಸತ್ಯಾಗ್ರಹ ಎದುರಿಸಿ : ರೈತ ಮುಖಂಡ ಗುರುಶಾಂತಪ್ಪ..
1 min read
ಬೀಟಮ್ಮ ಕಾಡಾನೆ ಗ್ಯಾಂಗ್ ಸ್ಥಳಾಂತರಿಸಿ ಇಲ್ಲವೇ ಧರಣಿ ಸತ್ಯಾಗ್ರಹ ಎದುರಿಸಿ : ರೈತ ಮುಖಂಡ ಗುರುಶಾಂತಪ್ಪ..
ಬೀಟಮ್ಮ ಗ್ಯಾಂಗ್ ನ ಕಾಡಾನೆಗಳು ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಬೇಡು ಬಿಟ್ಟಿದ್ದು ಹತ್ತಾರು ಎಕರೆ ಕಾಫಿ ತೋಟ ಸರ್ವನಾಶ ಮಾಡುತ್ತಿವೆ ಕೂಡಲೇ ಆನೆಗಳನ್ನು ಸ್ಥಳಾಂತರಿಸಬೇಕು. ನಾಲ್ಕು ದಿನಗಳಲ್ಲಿ ಸ್ಥಳಾಂತರ ಮಾಡದಿದ್ದರೆ ಅರಣ್ಯ ಇಲಾಖೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಎಚ್ಚರಿಕೆ ನೀಡಿದ್ದಾರೆ.
ಕಳೆದ 15 ದಿನಗಳಿಂದ ಬೀಟಮ್ಮ ಕಾಡಾನೆ ಅದರ ತಂಡದ ಜೊತೆ ಚಿಕ್ಕಮಗಳೂರು ಹೊರವಲಯದ ಕೆ.ಆರ್ ಪೇಟೆ ಆಲದಗುಡ್ಡೆ ಸುತ್ತಮುತ್ತ ಬೀಡು ಬಿಟ್ಟಿದ್ದು ಮೊನ್ನೆ ಕೆಸವಿನಮನೆ ಬೈರೇಗೌಡರ ಕಾಫಿ ತೋಟವನ್ನು ಬೇರು ಸಹಿತ ಕಿತ್ತು ಹಾಕಿದ್ದು ಸಾವಿರಾರು ಕಾಫಿ ಗಿಡಗಳನ್ನು ಸರ್ವನಾಶ ಮಾಡಿವೆ. ಇದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ ಆಗಿದ್ದು ಬೈರೇಗೌಡರ ತೋಟದಲ್ಲೇ ದಿನಗಟ್ಟಲೆ ದಿಗ್ಬಂದನ ಹಾಕಿ ಆನೆಗಳನ್ನು ಓಡಿಸದೆ ಇದ್ದುದ್ದೆ ಕಾರಣ ಎಂದು ರೈತ ಮುಖಂಡರು ಆರೋಪಿಸಿದರು.
ಈ ನಡುವೆ ಆಲ್ದೂರು ವಲಯದ ಫಾರೆಸ್ಟರ್ ರಮೇಶ್ ರೈತರಿಗೆ ಉಡಾಫೆ ಉತ್ತರ ಕೊಟ್ಟು ಅರ್ಜಿ ಕೊಡಿ ನಂತರ ಪರಿಶೀಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಬೀಟಮ್ಮ ಗ್ಯಾಂಗ್ ನಲ್ಲಿ 26 ಆನೆಗಳ ಜೊತೆ ಮರಿ ಆನೆಯೊಂದು ಬೀಡು ಬಿಟ್ಟಿದ್ದು ಅದನ್ನು ಓಡಿಸದಂತೆ ನಮಗೆ ನಿರ್ದೇಶನವಿದೆ ಎನ್ನುತ್ತಾರೆ ಎಂದು ರೈತರು ಅಳಲು ತೋಡಿಕೊಂಡರು.
ಈ ಕೂಡಲೇ ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಜೊತೆಗೆ ಆನೆಗಳು ಉಂಟು ಮಾಡಿರುವ ಹಾನಿಗೆ ವೈಜ್ಞಾನಿಕ ಪರಿಹಾರ ಕೊಡಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಗುರು ಶಾಂತಪ್ಪ ಚಿಕ್ಕಮಗಳೂರು ಹಾಗೂ ಮೂಡಿಗೆರೆ, ಎರಡು ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸದೆ ಬೇಜವಾಬ್ದಾರಿ ತೋರಿದ್ದಾರೆ ತಮಗೆ ಲಾಭವಾಗುವ ಕಡೆ ಮಾತ್ರ ಅವರು ಇರುತ್ತಾರೆ ಎಂದು ಆರೋಪಿಸಿದರು.