ವೈದ್ಯರ ಕೊರತೆ.ರೋಗಿಗಳ ಪರದಾಟ.
1 min read
ವೈದ್ಯರ ಕೊರತೆ.ರೋಗಿಗಳ ಪರದಾಟ.
ಮೂಡಿಗೆರೆ ತಾಲೂಕಿನ ಬಣಕಲ್ಲಿನಲ್ಲಿ ಬಹಳ ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದೆ.
ಇತ್ತಿಚಿಗೆ ರೋಗಿಗಳ ಸಂಖ್ಯೆ ದಿನೆ ದಿನೆ ಜಾಸ್ತಿಯಾಗುತಿದ್ದು ಒಬ್ಬರೆ ವೈದ್ಯರು ಕಾರ್ಯನಿರ್ವಹಿಸುತಿದ್ದಾರೆ.
ರಾತ್ರಿ ಪಾಳಯದಲ್ಲಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿಲ್ಲಾ.
ಪ್ರತಿ ದಿನ 150.ರಿಂದ 200.ರೋಗಿಗಳನ್ನು ಒಬ್ಬರೆ ನೋಡುವ ಪರಿಸ್ಥಿತಿ ಎದುರಾಗಿದೆ.
ವೈದ್ಯರು ರಜೆ ಹಾಕಿದ ದಿನ ರೋಗಿಗಳ ಪರದಾಟ ಹೇಳ ತೀರದಾಗಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಆಸ್ಪತ್ರೆಯು ದಿನದ 24.ಗಂಟೆ ಕಾರ್ಯ ನಿರ್ವಹಿಸುವ ಅಗತ್ಯವಿದೆ.
ಚಾರ್ಮಾಡಿ ಘಾಟಿಯಲ್ಲಿ ದಿನನಿತ್ಯ ಅಪಘಾತಗಳು ನಡೆಯುತ್ತಿರುತ್ತವೆ. ರಾತ್ರಿ ವೇಳೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗದೆ ಮರಣ ಹೊಂದಿದ ಅನೇಕ ಘಟನೆಗಳು
ನಡೆದಿವೆ.
ಹೋಬಳಿಯ ಹೃದಯ ಭಾಗದಲ್ಲಿರುವ ಮತ್ತು ರಾಷ್ಟ್ರಿಯ ಹೆದ್ದಾರಿ ಪಕ್ಕದಲ್ಲಿರುವ ಆಸ್ಪತ್ರೆಗೆ ಈ ಸ್ಥಿತಿ ಬಂದರೆ ಉಳಿದ ಗ್ರಾಮೀಣ ಬಾಗದಲ್ಲಿರುವ ಆಸ್ಪತ್ರೆ ಗತಿ ಎನಾಗಿರಬಹುದು ನೀವೆ ಯೊಚಿಸಿಸ ಬೇಕಾಗಿದೆ.
ಆಸ್ಪತ್ರೆಯ ವ್ಯಾಪ್ತಿಯಲ್ಲಿ ಎಸ್ಟೆಟ್ ಗಳು ಜಾಸ್ತಿ ಇದ್ದು
ಕೂಲಿ ಕಾರ್ಮಿಕರು ಜಾಸ್ತಿ ಇರುವುದರಿಂದ ಆರೊಗ್ಯದ ಸೇವೆ ಬಹು ಮುಖ್ಯವಾಗಿರುತ್ತದೆ.
ಹಲವು ವರ್ಷಗಳ ಬೇಡಿಕೆ ಬೇಡಿಕೆಯಾಗಿಯೆ ಉಳಿದಿದೆ.
ಹಲವು ಬಾರಿ ಇಲಾಖೆಯ ಗಮನಕ್ಕೆ ತಂದರೂ ಪ್ರಯೊಜನವಾಗಿಲ್ಲ.
ಇನ್ನಾದರೂ ಜಿಲ್ಲಾ ಆರೊಗ್ಯ ಇಲಾಖೆಯ ಹಿರಿಯ ಅಧಿಕಾರಿಯದ ಡಿ ಹೆಚ್ ಓ ಗಮನ ಹರಿಸ ಬೇಕಾಗಿದೆ.ಸ್ಥಳೀಯ ಜನಪ್ರತಿನಿದಿಗಳೂ ಸಹ ಸಮಸ್ಯೆಯ ತಿವೃತೆಯನ್ನು ಅರಿತು ಹೆಚ್ಚಿನ ಗಮನ ಹರಿಸಿ ನ್ಯಾಯ ಒದಗಿಸಿ ಕೊಡಬೇಕು.
ಇಲ್ಲದಿದ್ದಲ್ಲಿ ನಾಗರಿಕಾ ಹೋರಾಟ ಸಮಿತಿಯಿಂದ ಪ್ರತಿಭಟನೆಯನ್ನು ಎದುರಿಸ ಬೇಕಾಗುತ್ತದೆ ಎಂದು ಸ್ಥಳಿಯರೊಬ್ಬರು ತಿಳಿಸಿದ್ದಾರೆ.