AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

  • ರೈತರಿಗೆ ಮಾರಕವಾದ
    ಮೂಡಿಗೆರೆ ರೈತ ಭವನ..
    ಮೂಡಿಗೆರೆ ರೈತ ಭವನದಲ್ಲಿ ವರ್ಷಕ್ಕೆ ಕನಿಷ್ಟ 200.ಕಾರ್ಯಕ್ರಮಗಳು ನಡೆಯುತ್ತವೆ.ಒಂದು ಕಾರ್ಯಕ್ರಮದಲ್ಲಿ 2000.ಪ್ಲಾಸ್ಟಿಕ್ ಬಾಟಲಿಗಳು ಕಸಕ್ಕೆ ಸೇರುತ್ತವೆ. ಅಲ್ಲಿಗೆ ವರ್ಷಕ್ಕೆ 400000.(ನಾಲ್ಕು ಲಕ್ಷ )ಪ್ಲಾಸ್ಟಿಕ್ ಬಾಟಲಿಗಳು ಪರಿಸರದ ಓಡಲಿಗೆ ಸೇರುತ್ತಿವೆ.ಟಿಎಪಿಸಿಎಂಎಸ್ ನ ನಿರ್ದೆಶಕರುಗಳಿಗೆ ಈ ಬಗ್ಗೆ ಸಾಮಾನ್ಯ ಜ್ನಾನ ಇಲ್ಲದಿರುವುದು ವಿಪರ್ಯಾಸವೆ ಸರಿ.
    ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸಿಗೆ ಕ್ಯಾರೆ ಅನ್ನುತ್ತಿಲ್ಲ ಆಡಳಿತ ಮಂಡಳಿ.
    ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸಿಗೆ ರಾಜ್ಯದಲ್ಲಿ ಯಾವ ಕಲ್ಯಾಣ ಮಂಟಪಗಳು ಉಪ್ಪು ಹಾಕುವುದಿಲ್ಲ.
    ರೈತರ ಓಳಿತಿಗಾಗಿ ದಾನಿಗಳ ನೆರವಿನಿಂದ ಕಟ್ಟಿರುವ ರೈತ ಭವನ ಕೃಷಿಗೆ ಮಾರಕವಾದ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೊಗಿಸಲು ಅವಕಾಶ ನೀಡಿರುವುದು ಎಷ್ಟು ಸರಿ.
    ಚಿಕ್ಕಮಗಳೂರು ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪ್ಲಾಸ್ಟಿಕ್ ಬಾಟಲಿ ನಿಷೇಧವಿರುವುದು ಇವರ ಗಮನಕ್ಕೆ ಬಂದಿಲ್ಲವೆ.
    ಆಡಳಿತ ಮಂಡಳಿಯ ನಿರ್ದೆಶಕರ ಮನೆಯ ಕಾರ್ಯಕ್ರಮದಲ್ಲೆ ಪ್ಲಾಸ್ಟಿಕ್ ಬಾಟಲಿಯ ದರ್ಬಾರ್ ಹೆಚ್ಚಾಗಿದೆ.
    ನಿರ್ದೆಶಕರು ಮತ್ತು ಅಲ್ಲಿನ ವ್ಯವಸ್ಥಾಪಕರನ್ನು ಕೇಳಿದರೆ ಪ್ಲಾಸ್ಟಿಕ್ ಬಾಟಲಿ ವಿತರಿಸಲು ಅವಕಾಶ ಕೊಡದಿದ್ದರೆ ರೈತ ಭವನಕ್ಕೆ ಬಾಡಿಗೆಗೆ ಯಾರೂ ಬರುವುದಿಲ್ಲ ಎಂಬ ಉಡಾಫ಼ೆ ಉತ್ತರ ನೀಡುತ್ತಾರೆ.

ಉತ್ತಮ ಕುಡಿಯುವ ನೀರನ್ನು ಪೇಪರ್ ಗ್ಲಾಸಿನಲ್ಲಿ ಕೊಡುವುದು ಆಡಳಿತ ಮಂಡಳಿಯ ಜವಬ್ದಾರಿ ಅಗಿರುತ್ತದೆ.
ಇನ್ನಾದರೂ ಸಂಬಂಧಿಸಿದ ಇಲಾಖೆ ಜನ ಪ್ರತಿನಿದಿಗಳು ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪರಿಸರ ಪ್ರೆಮಿಗಳು ಎಚ್ಚರಿಕೆ ನೀಡಿದ್ದಾರೆ.
ಇದೆ 15.ನೆ ತಾರಿಖು ರೈತ ಭವನದಲ್ಲಿ ನಡೆಯುವ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲಿ ವಿತರಿಸಿದರೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಪರಿಸರವಾದಿಗಳು ತಿಳಿಸಿದ್ದಾರೆ.

 

About Author

Leave a Reply

Your email address will not be published. Required fields are marked *