ಕಲ್ಯಾಣ ಮಂಟಪದಲ್ಲಿ ಕನ್ನ…
1 min read
ಕಲ್ಯಾಣ ಮಂಟಪದಲ್ಲಿ ಕನ್ನ…
ಚಿಕ್ಕಮಗಳೂರು ತಾಲೂಕು. ಆಲ್ದೂರು ಹೋಬಳಿ ಹಾಂದಿ ರಾಯಲ್ ಶಾಲಿಮಾರ್ ಕಲ್ಯಾಣ ಮಂಟಪದಲ್ಲಿ ಇಂದು ಬಂಕೆನಹಳ್ಳಿ ಅಮರನಾಥರವರ ಮಗಳು ಮತ್ತು ಹ್ಯಾರಗುಡ್ಡೆ ನಾಗೇಶಗೌಡರ ಮಗನ ಮದುವೆ 13.10.2024 ರಂದು ಎರ್ಪಾಡಾಗಿತ್ತು.
ಸಂಪ್ರದಾಯದ ಪ್ರಕಾರ ಗಂಡಿನ ಕಡೆಯವರು ಹೆಣ್ಣಿಗೆ ಚಿನ್ನ ಕೊಡುವುದು. ಗಂಡಿನ ಕಡೆಯವರು ಕೊಟ್ಟ ಚಿನ್ನವನ್ನು ಮತ್ತೆ ಅರತಕ್ಷತೆಗೆ ಹಾಕಲು ಹುಡುಗಿಯ ರೂಂನಲ್ಲಿ ಇಟ್ಟರು.
ಮದುವೆ ಮುಗಿದ ಮೇಲೆ ಹೋಗಿ ನೊಡಿದರೆ ಕಿಟಕಿಯನ್ನು ತೆರೆದು ಒಳಗೆ ಬಂದು ಕಳ್ಳರು ಕೈಚಳಕ ತೊರಿಸಿ ದೊಚಿಕೊಂಡು ಹೋಗಿದ್ದಾರೆ.
ಚಿನ್ನದ ಮೌಲ್ಯ ಸುಮಾರು 10.ಲಕ್ಷ ಎಂದು ಸಂಬದಿಕರು ತಿಳಿಸಿದ್ದಾರೆ.ಕೂಡಲೆ ಆಲ್ದೂರು ಪೋಲಿಸಿಗೆ ತಿಳಿಸಿದ್ದಾರೆ.ಸ್ಥಳಕ್ಕೆ ಕೂಡಲೆ ಬಂದ ಪೋಲಿಸರು ಹೆಚ್ಚಿನ ಕಾರ್ಯಚರಣೆ ಕೈಗೊಂಡರು.
ಭದ್ರವಾದ ಕಿಟಕಿ ಇಲ್ಲದೆ ಇರುವುದರಿಂದ ಚಿನ್ನದ ಜವಬ್ದಾರಿಯನ್ನು ಮಾಲಿಕರು ನೀಡಬೇಕೆಂದು ವರ ಮತ್ತು ವದುವಿನ ಕಡೆಯವರು ಓತ್ತಾಯಿಸುತಿದ್ದಾರೆ.