ಬಿ ಎಸ್ ಪಿ ಯ ನೂತನ ಜಿಲ್ಲಾಧ್ಯಕ್ಷ
1 min read
‘ಬಿ ಎಸ್ ಪಿ ಯ ನೂತನ ಚಿಕ್ಕಮಗಳೂರು ಜಿಲ್ಲಾದ್ಯಕ್ಷ. ‘
ಪಿ ಪರಮೇಶ್ ರನ್ನು ಅಧಿಕೃತ ಗೊಳಿಸಿ ಘೋಷಿಸಿದ ರಾಜ್ಯ ಸಮಿತಿ.
ಬಹುಜನ ಸಮಾಜ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ವಕೀಲ ವೃತಿಯಲ್ಲಿ ಕೆಲಸ ಮಾಡುತ್ತಾ ಸುಮಾರು 25ವರ್ಷಗಳಿಂದ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿ.ಪರಮೇಶ್ ರವರನ್ನು ಮಂಗಳವಾರ ಚಿಕ್ಕಮಗಳೂರು ಜಿಲ್ಲಾ ಬಿಸ್ಪಿ ಕಾರ್ಯಕರ್ತರ ಸಭೆಯಲ್ಲಿ ಕರ್ನಾಟಕ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ ರವರು ಘೋಷಿಸಿದ್ದಾರೆ.
ಪಿ ಪರಮೇಶ್ 2000ನೇ ಇಸವಿಯಲ್ಲಿ ಪಕ್ಷ ಸೇರಿಕೊಂಡು ಹಲವಾರು ಹುದ್ದೆಗಳಲಿ ಸೇವೆ ಸಲ್ಲಿಸಿ 2019ನೇ ಸಾಲಿನಲ್ಲಿ ನಡೆದ ಚಿಕ್ಕಮಗಳೂರು -ಉಡುಪಿ ಲೋಕ ಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ದಿಸಿ ಸುಮಾರು 16000 ಮತಗಳನ್ನು ಗಳಿಸಿ ಗಮನ ಸೆಳೆದಿದ್ದರು. ಈ ಹಿಂದೆ ಬಿ ಎಸ್ ಪಿ ಯ ರಾಜ್ಯ ಕಾರ್ಯದರ್ಶಿಯಾಗಿಯು ಕಾರ್ಯ ನಿರ್ವಹಿಸಿದ್ದರು.