AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಂಗಳೂರು ಪ್ಯಾಂಥರ್ಸ್ ತಂಡದ ತರಬೇತುದಾರರಾಗಿ – ರಮೇಶ್ ಕೆಳಗೂರು ಆಯ್ಕೆ.

1 min read

ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಪಂದ್ಯಾವಳಿ( KSPL) ಬೆಂಗಳೂರಿನಲ್ಲಿ ನಡೆಯುತ್ತಿದ್ದು ,  ಒಂದು ತಿಂಗಳು ವಿವಿಧ ತಂಡಗಳು ರಾಜ್ಯದ ಪ್ರತಿಷ್ಠಿತ ಟ್ರೋಫಿಗಾಗಿ  ಸೆಣಸಲಿದೆ. ಈ ಪಂದ್ಯಾವಳಿಯಲ್ಲಿ, ಮಂಗಳೂರು ಪ್ಯಾಂಥರ್ಸ್ ತಂಡದ ಮುಖ್ಯ ಕೋಚ್ ಆಗಿ ಮೂಡಿಗೆರೆ ತಾಲ್ಲೂಕಿನ ಹೆಮ್ಮೆಯ ಕುವರ ರಮೇಶ್ ಕೆಳಗೂರು ಆಯ್ಕೆಯಾಗಿದ್ದು , ಇದೀಗ   ‘ಎ ‘ ಗ್ರೇಡ್ ನೊಂದಿಗೆ NIS ಪದವಿ ಪೂರೈಸಿ  ಅಂತರಾಷ್ಟ್ರೀಯ ತರಬೇತಿ ಪರೀಕ್ಷೆ ‘ಪ್ರೀ ಲೆವೆಲ್ ಒನ್ ‘ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಭಾರತದ ಭವಿಷ್ಯದ ಅಂತರಾಷ್ಟ್ರೀಯ ತರಬೇತುದಾರಾಗಿ ರಮೇಶ್ ಕೆಳಗೂರು ಈ ಬಾರಿಯ KSPL ಟೂರ್ನಿಯ ಪ್ರಮುಖ ಕೇಂದ್ರಬಿಂದುವಾಗಿರುವುದು ಮಾತ್ರವಲ್ಲ ನಮ್ಮ ಮೂಡಿಗೆರೆ ಹೆಸರು ರಾಜ್ಯ ಹಾಗೂ ದೇಶದ ಗಮನ ಸೆಳೆಯಲಿದೆ.ಹೀಗಾಗಲೇ ಮೂಡಿಗೆರೆ ತಾಲ್ಲೂಕಿನ ಕಾರ್ಮಿಕ ವರ್ಗದ ಜನರ ಧ್ವನಿಯಾಗಿ ಹೋರಾಟದ ಹಾದಿಯಲ್ಲಿ ಗುರುತಿಸಿಕೊಂಡಿರುವ ಇವರು ಕ್ರೀಡಾ ತರಬೇತುದಾರರಾಗಿ ಕ್ರೀಡಾಪಟುಗಳನ್ನು ತಮ್ಮ ಮಾರ್ಗದರ್ಶನದೊಂದಿಗೆ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ತಮ್ಮ ನೆಲದ ಕ್ರೀಡಾ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಕಾತುರರಾಗಿದ್ದಾರೆ. ಇವರಿಗೆ ಶುಭವಾಗಲಿ.

About Author

Leave a Reply

Your email address will not be published. Required fields are marked *