AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಾಯ್ಸ್ ಸಂಸ್ಥೆ ಮೂಡಿಗೆರೆ ಮತ್ತು ಕಪುಚಿನ್ ಕೃಷಿ ಸೇವಾ ಕೇಂದ್ರ (ರಿ) ಬಣಕಲ್.

1 min read

ವಾಯ್ಸ್ ಸಂಸ್ಥೆ ಮೂಡಿಗೆರೆ ಮತ್ತು ಕಪುಚಿನ್ ಕೃಷಿ ಸೇವಾ ಕೇಂದ್ರ (ರಿ) ಬಣಕಲ್.

ವಾಯ್ಸ್ ಸಂಸ್ಥೆ ಮೂಡಿಗೆರೆ ಮತ್ತು ಕಪುಚಿನ್ ಕೃಷಿ ಸೇವಾ ಕೇಂದ್ರ (ರಿ) ಬಣಕಲ್.
ಸಮಾನ ಮನಸ್ಕ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆ ತಾಲೂಕಿನ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಎರಡು ದಿನಗಳ ಮಕ್ಕಳ ಶಿಕ್ಷಣ ಪೂರಕ ತರಬೇತಿ ಕಾರ್ಯಗಾರ ಮಾಡಲಾಯಿತು. ಕಾರ್ಯಗಾರದಲ್ಲಿ ಇಂಗ್ಲಿಷ್ ಕಲಿಕೆಯ ಸರಳತೆಯ ಬಗ್ಗೆ ಮತ್ತು ಸರಳಿಕರಣಗಳ ಕುರಿತಂತೆ ಹಾಗೂ ಇಂಗ್ಲಿಷ್ ಉಚ್ಚಾರಗಳ ಬಗ್ಗೆ ಶಿಕ್ಷಕರಾದ ಅಜ್ಗರ್ ಅಲಿ ಖಾನ್ ರವರು ಮಕ್ಕಳಿಗೆ ಆಟ ಮತ್ತು ಪದ್ಯ ಚಟುವಟಿಕೆಗಳ ಮೂಲಕ ಕಲಿಸಿಕೊಟ್ಟರು.
ಕಪುಚ್ಚಿನ್ ಕೃಷಿಕ ಸೇವಾ ಕೇಂದ್ರದ ನಿರ್ದೇಶಕರಾದ ಫಾದರ್ . ಎಡ್ವಿನ್ ಡಿಸೋಜರವರು ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಮತ್ತು ಅನುಸರಿಸಬೇಕಾದ ಮಾನದಂಡಗಳು ಪರೀಕ್ಷಾ ಪೂರಕ ಮತ್ತು ಪೂರ್ವ ಸಿದ್ಧತೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಪರಿಕರಗಳ ಬಗ್ಗೆ ದೃಶ್ಯಗಳ ಮೂಲಕ ತಿಳಿಸಿಕೊಟ್ಟರು.
ಶಿಕ್ಷಣ ಒಂದು ಆಯುಧ ಅದನ್ನು ಸರಿಯಾಗಿ ಬಳಸಿದ್ದಲ್ಲಿ ಎಂತಹ ಸವಾಲುಗಳನ್ನು ಕೂಡ ಎದುರಿಸಲು ಅದು ಸಹಾಯ ಮಾಡುತ್ತದೆ ಪರೀಕ್ಷಾ ತಯಾರಿಯಲ್ಲಿ ದೂರದ ತಯಾರಿ ಮತ್ತು ಹತ್ತಿರದ ತಯಾರಿ ಎಂಬ ಎರಡು ವಿಷಯಗಳ ಕುರಿತಂತೆ ಸೂಕ್ತವಾದ ಮತ್ತು ಸರಿಯಾದ ಪರೀಕ್ಷಾ ತಯಾರಿ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ನನ್ನ ಸಾಮರ್ಥ್ಯ ಏನು ಮತ್ತು ಅದನ್ನು ನಾನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಅರ್ಥೈಸಿದರು ಸಾಹಿತಿಗಳು ಮತ್ತು ಸಾಹಿತ್ಯ ಸಂಭ್ರಮ ವೇದಿಕೆಯ ಅಧ್ಯಕ್ಷರಾದ ಎಂ.ಎಸ್.ನಾಗರಾಜ್ ರವರು ವ್ಯಕ್ತಿತ್ವ ವಿಕಸನ ಮತ್ತು ಮಕ್ಕಳ ಭೌತಿಕ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾ ಪ್ರತಿಯೊಂದು ಮಕ್ಕಳು ಮುಂದಿನ ಭವಿಷ್ಯದಲ್ಲಿ ಒಬ್ಬೊಬ್ಬರು ಅಧಿಕಾರಿಗಳಾಗಿ,ಸಮಾಜದ ಉನ್ನತ ವ್ಯಕ್ತಿಗಳಾಗಿ ಕಣ್ಣ ಮುಂದೆ ಕಾಣುತ್ತಿದ್ದಾರೆ. ಒಬ್ಬೊಬ್ಬರು ಉನ್ನತ ಅಧಿಕಾರಿಗಳಾಗುವ ಸಾಮರ್ಥ್ಯವನ್ನು ಹೊಂದಿದ್ದೀರಿ ಹಾಗೆ ಸ್ಪಷ್ಟವಾದ ಗುರಿಯನ್ನು ಹೊಂದಬೇಕು.ಹಾಗೆಯೇ ನಾವು ಸೋಲನ್ನು ಕಂಡಾಗ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಸೋಲಿನಲ್ಲಿ ಕಂಡಂತಹ ಪಾಠದಿಂದ ಮುಂದಿನ ದಿನಗಳಲ್ಲಿ ಗೆಲುವನ್ನು ರೂಪಿಸಲು ಮೆಟ್ಟಿಲುಗಳನ್ನಾಗಿ ಮಾಡಿ ಗೆಲುವನ್ನು ಸಾಧಿಸುವ ತಂತ್ರಗಳನ್ನು ನಾವು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರ ತರಬೇತುದಾರ ಮತ್ತು ಆಯೋಜಕರಾದ ನವೀನ್ ಆನೆದಿಬ್ಬ ರವರು ಮಾತನಾಡಿ ಮಕ್ಕಳಲ್ಲಿ ಇರುವ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ಮುಂದಿನ ಭವಿಷ್ಯ ಉಜ್ಜ್ವಲವಾಗುತ್ತದೆ.
ಮಕ್ಕಳಿಗೆ ಪೂರಕ ಶಿಕ್ಷಣ ಅಗತ್ಯ ಮತ್ತು ಶಿಕ್ಷಣದಿಂದ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾದ ಸ್ವಾತಿ ಗಜೇಶ್ ಮಾತನಾಡಿ ಮಕ್ಕಳಿಗೆ ಮೌಲ್ಯವರ್ದಿತ ಉತ್ತಮ ಮೌಲ್ಯಗಳನ್ನು ಚಿಕ್ಕವರಿಂದಲೇ ಕಲಿಕೆಯಾದಲ್ಲಿ ಆದರ್ಶ ಮಕ್ಕಳಾಗಲು ಸಾಧ್ಯವಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾದ ವಿಂದ್ಯಾ ರವರು ಮಕ್ಕಳ ಸರ್ವೋತ್ತಮ ಬೆಳವಣಿಗೆಗೆ ಚಟುವಟಿಕೆ ಸಹಕಾರಿಯಾಯಿತು ಮತ್ತು ಮಕ್ಕಳು ಮೊಬೈಲ್ ಗಳಿಂದ ದೂರವಿದ್ದು ಹೆಚ್ಚು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕೊಡಬೇಕು ಎಂದು ಕಿವಿ ಮಾತನ್ನು ಹೇಳಿದರು.
ಸಮಾಜ ಸೇವಕರಾದ ಹಸೈನರ್ ಬಿಳಗುಳ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಲು ಇಂತಹ ಕಾರ್ಯಗಾರ ಅವಶ್ಯಕತೆ ಮತ್ತು ಈ ಕಾರ್ಯಗಾರವು ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತದೆ ಎಂದು ಶುಭ ಹಾರೈಸಿದರು.
ಕಾರ್ಯಗಾರದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಅಂದವಾದ ಬರಹ, ಸ್ಪರ್ಧೆ ಕ್ರಾಫ್ಟ್ ವರ್ಕ್, ಸ್ಪರ್ಧೆ ಭಾಷಣ ಸ್ಪರ್ಧೆ, ಮತ್ತು ಗಾಯನ ಸ್ಪರ್ಧೆಗಳನ್ನು, ಏರ್ಪಡಿಸಿ ವಿಜೇತ ಮಕ್ಕಳಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಹಾಗೆಯೇ ಗಾಯನ ಸ್ಪರ್ಧೆಗೆ ತೀರ್ಪುಗಾರರಾಗಿ ಗಾಯಕರಾದ ರಕ್ಷಿತ್ ಮಲೆಮನೆ ಹಾಗೂ ಸ್ಮೈಲಿಸದಾ ಮಣ್ಣಿಕೆರೆ ತೀರ್ಪನ್ನ ನೀಡಿದರು ಮುಖ್ಯಅತಿಥಿಗಳಾಗಿ ಆಗಮಿಸಿದ್ದ ವಿ. ಪಿ. ನಾರಾಯಣ್ ರವರು ಮಕ್ಕಳಿಗೆ ಈ ಕಾರ್ಯಗಾರ ಭವಿಷ್ಯಕ್ಕೆ ತುಂಬಾ ಉಪಯೋಗವಾಗಲಿದೆ.
ಮಕ್ಕಳಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು .ಶಿಕ್ಷಣ ಪೂರಕ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಬಿರ ಶಿಕ್ಷಕರಾದ ವಿಜಯಲಕ್ಷ್ಮಿ .ಆದರ್ಶ. ದೀಕ್ಷಿತ್. ಹಾಗೂ ಡಾ. ಅನುಶ್ ಪೋಷಕರಾದ ರಾಜು ಮಾಕೋನಹಳ್ಳಿ ಶ್ವೇತಾ .ನೇತ್ರ .ರೋಷನ್. ಸುಬ್ರಮಣಿ ಚಂದ್ರ .ಚೈತ್ರ ,ಲ್ಯಾಂಪ್ಸ್ ಸೊಸೈಟಿ ವ್ಯವಸ್ಥಾಪಕರಾದ ಕೃಷ್ಣಪ್ಪ
ರವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *