ಭರವಸೆ ಶಾಸಕಿನಯಮ ಮೊಟಮ್ಮ ಅವರಿಂದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ.
1 min read
ಭರವಸೆ ಶಾಸಕಿನಯಮ ಮೊಟಮ್ಮ ಅವರಿಂದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ.
ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಚಂದುವಳ್ಳಿ ಗ್ರಾಮದ ರಸ್ತೆಕಾಮಗಾರಿಗೆ ನಯನ ಮೊಟಮ್ಮ ಅವರು ಗುದ್ದಲಿ ಪೂಜೆ ಸಲ್ಲಿಸಿದರು.
ಸಾಕಷ್ಟು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು ಸಾರ್ವಜನಿಕರು ಸಾಕಷ್ಟು ಅರ್ಜಿಗಳನ್ನು ನೀಡಿ ಮನವಿ ಮಾಡಿ ಕೊಂಡಿದ್ದರು.
ಈಗ ಬಾಳೂರು ಹೋಬಳಿ ಚಂದುವಳ್ಳಿ ಗ್ರಾಮಕ್ಕೆ ಸುಮಾರು 39 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆಗಿದ್ದು ಅದರ ಗುದ್ದಲಿ ಪೂಜೆಯನ್ನು ನಯನ ಮೊಟಮ್ಮ ಅವರು ನೆರವೇರಿಸಿದರು, ಇದೆ ಸಂದರ್ಭದಲ್ಲಿ ಚಂದುವಳ್ಳಿ ಭಾಗದ ಗ್ರಾಮಸ್ಥರು ಇನ್ನೂ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಊರಿನಲ್ಲಿ ಸಾಕಷ್ಟು ಜನರು ಬಡವರಾಗಿರುವುದರಿಂದ ಚಂದುವಳ್ಳಿ ಗ್ರಾಮಕ್ಕೆ ಸಮುದಾಯ ಭವನ ಮಾಡಿಕೊಡಬೇಕೆಂದು ಪ್ರಬಲವಾಗಿ ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಅಲ್ಲೇ ಸಂಭಂಧ ಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮುದಾಯ ಭವನ ಮಾಡಲು ಜಾಗ ಮಂಜೂರು ಮಾಡಿ ಕೊಟ್ಟರೆ ಅದಕ್ಕೆ ಅನುದಾನವನ್ನು ನೀಡುವುದಾಗಿ ಹೇಳಿದರು,
ಹಾಗೂ ಗಬ್ಬಲ್ ಭಾಗದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಪ್ರಸನ್ನ ಸಾಲ್ಡನ್ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು, ಮೃತಪಟ್ಟ ಪ್ರಸನ್ನ ಸಾಲ್ಡನ್ ಅವರ ಮನೆಗೆ ಬೇಟಿನೀಡಿ ಅವರ ಭಾವಚಿತ್ರ ಪುಷ್ಪ ನಮನ ಸಲ್ಲಿಸುವ ಮೂಲಕ ನಯನ ಮೊಟಮ್ಮ ಅವರು ಕುಟುಂಬಕ್ಕೆ ಸಾಂತ್ವನ ಹೇಳಿದರು,
ಹಾಗೆ ಕೆಲವು ಸಮಯದಿಂದ ಉದ್ಘಾಟನೆ ಮಾಡದೇ ಇದ್ದ ಕೂವೆ ಗ್ರಾಮ ಪಂಚಾಯತಿಯ ಧನ್ನಕ್ಕಿಹಾರ ಗ್ರಾಮದಲ್ಲಿ 50 ಲಕ್ಷ ಅನುದಾನದಲ್ಲಿ ನಿರ್ಮಾಣ ವಾಗಿರುವ ಸಮುದಾಯ ಭವನವನ್ನು ಗಿಡಕ್ಕೆ ನೀರು ಹಾಕಿ ಪೋಷಿಸುವ ಸಲುವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಅಚ್ಚುಕಟ್ಟಾಗಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ ಅಡುಗೆ ಕೋಣೆ ನಿರ್ಮಾಣ ಮಾಡಲು ಶೀಘ್ರವಾಗಿ ಅನುದಾನ ಇಡುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಾಳೂರು ಹೋಬಳಿ ಅಧ್ಯಕ್ಷರಾದ ಶ್ರೀನಾಥ್ ಹಾಗೂ ಕೂವೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಡಿದ್ದರು.