ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಆವರ ಜನ್ಮದಿನಾಚರಣೆ ಅಂಗವಾಗಿ
1 min read
ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಆವರ ಜನ್ಮದಿನಾಚರಣೆ ಅಂಗವಾಗಿ
ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಆವರ ಜನ್ಮದಿನಾಚರಣೆ ಅಂಗವಾಗಿ ಬಿ.ಹೊಸಹಳ್ಳಿ ಗ್ರಾಮ ಪಂಚಾಯತಿ ಇದರ ವತಿಯಿಂದ ವಿಶೇಷವಾಗಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಈ ಬಾರಿಯ ಆಚರಣೆಯಲ್ಲಿ ಮೂಡಿಗೆರೆ ತೋಟಗಾರಿಕಾ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡು ಕಸ್ತೂರಬಾ ಗಾಂಧಿ ಟ್ರಸ್ಟ್ ಸೇರಿದಂತೆ ಹಳ್ಳಿಗಳ ಬೀದಿಗಳಲ್ಲಿ ಸ್ವಚ್ಚತೆಯನ್ನ ಮಾಡಿದರು.
ಗ್ರಾಮದ ಬಸ್ಟಾಪ್ ಗಳಿಗೆ ಬಣ್ಣ ಹೊಡೆವುದರ ಮೂಲಕ ಶ್ರಮದಾನವನ್ನ ಯಶಸ್ವಿಗೊಳಿಸಿ ಕೊಟ್ಟರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ HM ಆಶ್ರಿತ್ ಗೌಡ ಅವರು ಮಾತನಾಡಿ ಶ್ರಮದಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ನಾಟ್ಯ ರಂಜಿತ್. ಸದಸ್ಯರಾದ ಸರಸ್ವತಿ. ಸುನಿತಾ PDO ಸಿಂಚನ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಗ್ರಾಮಸ್ಥರಾದ ರವಿಶಂಕರ್. ರಾಜೀವ್. ಮಧುರ. ಸವಿತಾ. ನಳಿನಾಕ್ಷಿ ಅವರು ಉಪಸ್ಥಿತರಿದ್ದರು