AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವ ಯಾವುದೇ ಪ್ರಜಾಪ್ರಭುತ್ವದ ದೇಶದ ಅತ್ಯುನ್ನತವಾದ ಆಶಯಗಳು. ಸೆಪ್ಟೆಂಬರ್ 15 2024ರಂದು ಪ್ರಜಾಪ್ರಭುತ್ವದ ಆಶಯಗಳನ್ನು ಸಹಕಾರ ಗೊಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡಂತೆ ಬೀದರ್ ನಿಂದ ಚಾಮರಾಜನಗರದವರೆಗೆ , ಸುಮಾರು 2,500 ಕಿಲೋಮೀಟರ್ ದೂರ ಏಕಕಾಲಕ್ಕೆ ಹಮ್ಮಿಕೊಂಡ ಈ ಮಾನವ ಸರಪಳಿಯು ಒಂದು ಚಾರಿತ್ರಿಕ ದಾಖಲೆಯ ಕಾರ್ಯಕ್ರಮ ಎನ್ನಬಹುದು. ಇಂತಹ ಚಾರಿತ್ರಿಕ ದಾಖಲೆಯ ಕಾರ್ಯಕ್ರಮಕ್ಕೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಬೀದರ್ ನಿಂದ ಚಾಮರಾಜನಗರದವರೆಗೆ ಹಾದುಹೋದ ಮಾನವ ಸರಪಳಿಗೆ ಕೈ ಜೋಡಿಸಿದೆ. ಈ ಮಾನವ ಸರಪಳಿಯು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು ತರಿಕೆರೆ ಈ ಮೂರು ತಾಲೂಕುಗಳಲ್ಲಿ ಸುಮಾರು 92 ಕಿಲೋ ಮೀಟರ್ ದೂರ ಹಾದು ಹೋಗಿದ್ದು , 92,000ಕ್ಕೂ ಹೆಚ್ಚು ವಿದ್ಯಾರ್ಥಿ ಯುವ ಜನ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಈ ಮೂರು ತಾಲೂಕುಗಳಲ್ಲಿ ಹಾದುಹೋದ ಮಾನವ ಸರಪಳಿಗೆ ಕೈಜೋಡಿಸಿದ್ದಲ್ಲದೆ, ಜಿಲ್ಲೆಯ ಇತರೆ ಆರು ತಾಲ್ಲೂಕುಗಳಲ್ಲೂ ಮಾನವ ಸರಪಳಿ ಮಹತ್ವ ಸಾರಿತು.
••••••••••••✒️ *ಸುದ್ದಿ ಮತ್ತು ಚಿತ್ರ*.
ಡಿ.ಎಂ.ಮಂಜುನಾಥಸ್ವಾಮಿ.
ಕೆಜೆವಿಎಸ್ ನ್ಯೂಸ್ ಲೈನ್….
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *