ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವ.
1 min read
ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವ ಯಾವುದೇ ಪ್ರಜಾಪ್ರಭುತ್ವದ ದೇಶದ ಅತ್ಯುನ್ನತವಾದ ಆಶಯಗಳು. ಸೆಪ್ಟೆಂಬರ್ 15 2024ರಂದು ಪ್ರಜಾಪ್ರಭುತ್ವದ ಆಶಯಗಳನ್ನು ಸಹಕಾರ ಗೊಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡಂತೆ ಬೀದರ್ ನಿಂದ ಚಾಮರಾಜನಗರದವರೆಗೆ , ಸುಮಾರು 2,500 ಕಿಲೋಮೀಟರ್ ದೂರ ಏಕಕಾಲಕ್ಕೆ ಹಮ್ಮಿಕೊಂಡ ಈ ಮಾನವ ಸರಪಳಿಯು ಒಂದು ಚಾರಿತ್ರಿಕ ದಾಖಲೆಯ ಕಾರ್ಯಕ್ರಮ ಎನ್ನಬಹುದು. ಇಂತಹ ಚಾರಿತ್ರಿಕ ದಾಖಲೆಯ ಕಾರ್ಯಕ್ರಮಕ್ಕೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಬೀದರ್ ನಿಂದ ಚಾಮರಾಜನಗರದವರೆಗೆ ಹಾದುಹೋದ ಮಾನವ ಸರಪಳಿಗೆ ಕೈ ಜೋಡಿಸಿದೆ. ಈ ಮಾನವ ಸರಪಳಿಯು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು ತರಿಕೆರೆ ಈ ಮೂರು ತಾಲೂಕುಗಳಲ್ಲಿ ಸುಮಾರು 92 ಕಿಲೋ ಮೀಟರ್ ದೂರ ಹಾದು ಹೋಗಿದ್ದು , 92,000ಕ್ಕೂ ಹೆಚ್ಚು ವಿದ್ಯಾರ್ಥಿ ಯುವ ಜನ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಈ ಮೂರು ತಾಲೂಕುಗಳಲ್ಲಿ ಹಾದುಹೋದ ಮಾನವ ಸರಪಳಿಗೆ ಕೈಜೋಡಿಸಿದ್ದಲ್ಲದೆ, ಜಿಲ್ಲೆಯ ಇತರೆ ಆರು ತಾಲ್ಲೂಕುಗಳಲ್ಲೂ ಮಾನವ ಸರಪಳಿ ಮಹತ್ವ ಸಾರಿತು.
••••••••••••✒️ *ಸುದ್ದಿ ಮತ್ತು ಚಿತ್ರ*.
ಡಿ.ಎಂ.ಮಂಜುನಾಥಸ್ವಾಮಿ.
ಕೆಜೆವಿಎಸ್ ನ್ಯೂಸ್ ಲೈನ್….
ಚಿಕ್ಕಮಗಳೂರು