ಮೂಡಿಗೆರೆ :ಜೇಸಿಐ ಗೋಣಿಬೀಡು ಹೊಯ್ಸಳ ಇದರ ವತಿಯಿಂದ ನೆಡದ ಜೇಸಿಸಪ್ತಾಹ -2024ಇದರ ಸಮಾರೋಪ ಸಮಾರಂಭ.
1 min read
ಮೂಡಿಗೆರೆ :ಜೇಸಿಐ ಗೋಣಿಬೀಡು ಹೊಯ್ಸಳ ಇದರ ವತಿಯಿಂದ ನೆಡದ ಜೇಸಿಸಪ್ತಾಹ -2024ಇದರ ಸಮಾರೋಪ ಸಮಾರಂಭ. ಸಾಧಕರಿಗೆ ಸನ್ಮಾನ್ಯ. ಜೇಸಿ ಹಾಲ್ ನಲ್ಲಿ ನೆಡೆಯಿತು..
ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ ಹೆಚ್.ಜಿ.ಆದರ್ಶ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಯಾಗಿದ್ದ ಜೇಸಿಐ ವಲಯಧ್ಯಕ್ಷೆ ಶ್ರೀ ಮತಿ ಆಶಾ ಜೈನ್ ರವರು ಮಾತನಾಡಿ ಅತೀ ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದೇ ಶ್ರೀ ಮಂತಿಕೆ ಯಾಗಿದೆ. ಜೇಸಿ ಸೇರಿದಂತೆ ವಿವಿಧ ಸಂಘಟನೆ ಗಳಲ್ಲಿ ತೋಡಗಿಸಿ ಕೊಳ್ಳುವುದರಿಂದ ಜೀವನ ಶಿಕ್ಷಣ ಸಿಗುತ್ತದೆ ಎಂದರು..
ಸ್ಥಾಪಕ ಅಧ್ಯಕ್ಷ ಡಾ. ಮೋಹನ್ ರಾಜಣ್ಣ ಪ್ರಸ್ತಾವಿಕ ವಾಗಿ ಮಾತನಾಡುತ್ತಾ ನಾಯಕತ್ವದ ಕಲ್ಪನೆ ನೀಡಿದ್ದೆ ಜೇಸಿಐ. ಸಾಮಾಜಿಕ ಸೇವೆಗೆ ಒಳ್ಳೆಯ ಮನಸ್ಸು ಬೇಕು. ಜೇಸಿ ಸಪ್ತಾಹ ಉದ್ದೇಶ ಜೇಸಿಐ
ಧೈಯೋದ್ದೇಶಗಳು ಸಮಾಜ ಕ್ಕೆ ತಲುಪಬೇಕು ಎಂದರು..
ನಿಕಟಪೂರ್ವಧ್ಯಕ್ಷ ಸಿ ಎಸ್. ಚಂದ್ರಶೇಖರ ರವರು “ಕಮಲ ಪತ್ರ”ಸ್ವೀಕರಿಸಿ ಮಾತನಾಡುತ್ತಾ ಜೇಸಿ ಗಳ ಜೊತೆಗೆ ಜೇಸಿಯೆತರ ಹಿರಿಯ ಬಂಧುಗಳು ಪ್ರೋತ್ಸಾಹ ಸಹಕಾರ ದಿಂದ ಜೇಸಿ ಬೆಳೆಯುತ್ತಿದೆ ಎಂದರು.
ನಿವೃತ್ತ ಪಶು ಅಧಿಕಾರಿಗಳು ಅಪ್ಪಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೇಸಿ ಕಾರ್ಯದರ್ಶಿ ಹಾಗೂ ಜೇಸಿ ಸಪ್ತಾಹ ನಿರ್ದೇಶಕ ಬಿ. ಎಂ. ಜಗತ್ ಸಪ್ತಾಹ ವರದಿ ಓದಿದರು ಹಾಗೂ ವಂದಿಸಿದರು.
ಪೂರ್ವಧ್ಯಕ್ಷರಾದ ವೈ.ಬಿ.ಸುಂದ್ರೇಶ್. ಎಂ ಸಿ. ಗಣೇಶ್ ಗೌಡ.ಯೋಗೇಶ್ ಕುಮಾರ್.ಸತ್ಯ ಕುಮಾರ್. ರವಿಕುಮಾರ್. ರಂಜಿತ್. ಪೂರ್ಣೇಶ್. ಭರತ್.ಜ್ಯೋತಿ. ಶ್ವೇತಾ. ದರ್ಶನ್. ದಿಲೀಪ್. ಸಂತೋಷ್. ಚೇತನ್ ಹಾಗೂ ಇತರರು ಇದ್ದರು.