ಮಹಾಪ್ರಬಂಧಕ್ಕಾಗಿ ಕೂದುವಳ್ಳಿ ಕೆ.ಎಚ್.ಮಹೇಶ್ ಗೆ ಡಾಕ್ಟರೇಟ್ ಪದವಿ*
1 min read
*ಮಹಾಪ್ರಬಂಧಕ್ಕಾಗಿ ಕೂದುವಳ್ಳಿ ಕೆ.ಎಚ್.ಮಹೇಶ್ ಗೆ ಡಾಕ್ಟರೇಟ್ ಪದವಿ*
••••••••••••••••••••••••••••••••••••••
ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ವೈ.ಎಸ್.ವಗ್ಗಿ ರವರ ಮಾರ್ಗದರ್ಶನದಲ್ಲಿ, *ಕಾಫಿ ತೋಟದ ದುಡಿಮೆಗಾರರ ಸಮಸ್ಯೆ ಮತ್ತು ಸವಾಲುಗಳು* ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿ ಎಚ್ ಡಿ ಪದವಿಗೆ ಮಾನ್ಯತೆ ಪಡೆದ ಚಿಕ್ಕಮಗಳೂರು ತಾಲೂಕು ಕೂದುವಳ್ಳಿಯ ಕೆ. ಎಚ್. ಮಹೇಶ್ ಅವರು ಅರ್ಥಶಾಸ್ತ್ರದಲ್ಲಿ ಹತ್ತು ವರ್ಷಗಳ ಹಿಂದೆಯೇ ಕುವೆಂಪು ವಿಶ್ವವಿದ್ಯಾಲಯದಿಂದ
ಎಂ.ಎ.ಪದವಿ ಪಡೆದವರು. ಸ್ನಾತಕೋತ್ತರ ಪದವಿಯ ನಂತರ ಒಂದು ದಶಕಗಳ ಕಾಲ ಕರ್ನಾಟಕ ರಾಜ್ಯದಾದ್ಯಂತ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾಡಿನ ಹತ್ತಾರು ಪತ್ರಿಕೆಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಲೇಖನಗಳ ಮೂಲಕ ಬರೆದು ಓದುಗರ ಗಮನ ಸೆಳೆದವರು.ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಕಾಫಿ ತೋಟದ ವಾತಾವರಣದ ಮಧ್ಯೆ ಹುಟ್ಟಿ ಬೆಳೆದು ಓದಿದ ಮಹೇಶ್ ಅವರು ಕಾಫಿ ತೋಟದ ಕಾರ್ಮಿಕರು ಮತ್ತು ಮಾಲೀಕರ ಸ್ಥಿತಿಗತಿಗಳನ್ನು ತೀರ ಹತ್ತಿರದಿಂದ ನೋಡಿ, ಅದರ ಒಂದು ಭಾಗವಾಗಿಯೇ ಬೆಳೆದವರು.ಸುಮಾರು ಐದು ವರ್ಷಗಳ ಕಾಲ ಕ್ಷೇತ್ರಕಾರ್ಯ ಮತ್ತು ಸಂಶೋಧನಾ ಅಧ್ಯಯನ ನಡೆಸಿ ಮಂಡಿಸಿದ ಈ ಮಹಾಪ್ರಬಂಧ ಹೆಚ್ಚು ಪರಿಣಾಮಕಾರಿಯಾಗಿ ಮಂಡನೆಯಾಗಿದೆ ಎಂದು ಭಾವಿಸಿದ್ದೇನೆ.ತೋಟ ಕಾರ್ಮಿಕರು ಮತ್ತು ಮಾಲೀಕರು ಪರಸ್ಪರ ಹೆಚ್ಚು ಅರ್ಥ ಮಾಡಿಕೊಳ್ಳಲು ಈ ಮಹಾಪ್ರಬಂಧ ಸಾಧ್ಯವಾಗುವ ಮೂಲಕ ಪ್ರಖರ ಬೆಳಕು ಚೆಲ್ಲಲಿ.ಇವರ ಈ ಮಹಾಪ್ರಬಂಧವು ಪುಸ್ತಕ ರೂಪದಲ್ಲಿ ಹೊರಬಂದು,ಕಾಫಿ ವಲಯದಲ್ಲಿರುವ ಎಲ್ಲಾ ಓದುಗರ ಕೈ ಸೇರಲಿ ಎಂದು ಆಶಿಸುವೆ. 2024ರ ಡಿಸೆಂಬರ್ ಮಾಸದಲ್ಲಿ ನೆಡೆಯುವ ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿ ಹೆಚ್ ಡಿ ಪದವಿ ಪ್ರಧಾನ ಆಗಲಿದೆ.
*ಮಹಾಪ್ರಬಂದಕ್ಕಾಗಿ ಗೆಳೆಯ ಮಹೇಶ್ ಗೆ ಅಭಿನಂದನೆಗಳು*
••••••••••••••••••••••••••✊✒️
ಸುದ್ದಿ ಮತ್ತು ಚಿತ್ರ:
ಡಿ. ಎಂ. ಮಂಜುನಾಥಸ್ವಾಮಿ
ಕೆಜೆವಿಎಸ್ ನ್ಯೂಸ್ ಲೈನ್….
ಚಿಕ್ಕಮಗಳೂರು