ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರದ ಭಾರತೀಯ
1 min read
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರದ ಭಾರತೀಯ ಜನಜೀವನದ ಬಹುಮುಖ್ಯ ಪರಿಚಯವಿರುವ ಡಿ.ವಿ. ಗುಂಡಪ್ಪನವರು 19ನೇ ಶತಮಾನದಲ್ಲಿ ಹುಟ್ಟಿ 20ನೇ ದೇಶಮಾನದುದ್ದಕ್ಕೂ ಬಾಳಿ ಬದುಕಿದ ದಾರ್ಶನಿಕ ಕವಿ. ಪ್ರಾಚೀನ ಸಂಪ್ರದಾಯಗಳಿಂದ ಪೌಷ್ಟಿಕಾಂಶಗಳನ್ನು ಸಂಗ್ರಹಿಸಿಕೊಂಡು,ಆಧುನಿಕ ಹಾಗೂ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆರೆಸಿಕೊಂಡು, ಹಳೆಬೇರು ಹೊಸ ಚಿಗುರಿನಂತೆ ಕನ್ನಡ ಸಾಹಿತ್ಯದೊಳಗೆ ಕಂಗೊಳಿಸುತ್ತಿದ್ದಾರೆ. ಇಂತಹ ದಾರ್ಶನಿಕ ಕವಿ ಡಿ ವಿ ಜಿ ಅವರು ಮಂಕುತಿಮ್ಮನ ಕಗ್ಗವನ್ನು ರಚಿಸಿ,ಅದನ ಪ್ರತಿಯನ್ನು ಓದಲು ಕುವೆಂಪು ಅವರ ಕೈಗೆ ಇಟ್ಟಾಗ, ಈ ದಾರ್ಶನಿಕ ಕವಿಯ ಬಗ್ಗೆ ಅ ರಾಷ್ಟ್ರಕವಿ ಮಂಕುತಿಮ್ಮನ ಕಗ್ಗದ ಬಗ್ಗೆ ಕಗ್ಗದ ರೂಪದಲ್ಲಿಯೇ ಕೃತಜ್ಞತೆ ಸಲ್ಲಿಸಿದ್ದು ಹೀಗೆ. *ಹಸ್ತಕ್ಕೆ ಬರೆ ನಕ್ಕೆ. ಓದುತ್ತಾ ಓದುತ್ತಾ ಮಸ್ತಕಕ್ಕಿಟ್ಟು ಗಂಭೀರನಾದೆ ವಿಸ್ತರದ ದರ್ಶನಕೆ. ತುತ್ತ ತುದಿಯಲ್ಲಿ ನಿನ್ನ ಪುಸ್ತಕಕ್ಕೆ ಕೈ ಮುಗಿದೆ~ಮಂಕುತಿಮ್ಮ* ರಾಷ್ಟ್ರಕವಿಯಿಂದ ಇಂತಹ ಹೆಗ್ಗಳಿಕೆಗೆ ಪಾತ್ರವಾದ ಗುಂಡಪ್ಪನವರು 10ನೇ ತರಗತಿಯಲ್ಲಿ ಕನ್ನಡದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ.10ನೇ ತರಗತಿಯನ್ನು ತೇರ್ಗಡೆಯಾಗದೆ ಇದ್ದಂತಹ ಈ ವಿದ್ಯಾರ್ಥಿ ಮುಂದೆ ಮೈಸೂರು ವಿ ವಿ ಯಿಂದ ಗೌರವ ಡಾಕ್ಟರೇಟ್ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ಪಡೆಯುತ್ತಾರೆ. 11ರ ನಂತರದ ಮಗ್ಗಿಯನ್ನು ಹೇಳಲಾಗದೆ ತನ್ನ ಅಪ್ಪನ ಹತ್ತಿರ ಶಿಕ್ಷೆಗೋಳಪಡುತ್ತಿದ್ದ ಡಿವಿಜಿ ಅವರು ಮುಂದೆ ಮಂಕುತಿಮ್ಮನ ಕಗ್ಗದ ಮೂಲಕ ಇಡೀ ಮನುಕುಲದ ಲೆಕ್ಕದ ಪಾಠವನ್ನೇ ಚುಪ್ತ ಮಾಡಿ ಹೇಳಿದ್ದು ಒಂದು ಸೋಜಿಗ. ಚಿಕ್ಕಮಗಳೂರು ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ,ಜಿಲ್ಲೆಯಾದ್ಯಂತ ನಡೆಸಿದ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿತ್ತು. ಈ ಪ್ರಯುಕ್ತ, ಡಿವಿಜಿ ಅವರ ಬದುಕು ಬರಹ ಕುರಿತು ಉಪನ್ಯಾಸ ಮತ್ತು ಚಿಂತನ ಮಂಥನ ಏರ್ಪಡಿಸಿತ್ತು. ಧರ್ಮ ಗುರುಗಳು. ಸಾಹಿತಿಗಳು. ಕವಿ ಬರಹಗಾರರು. ವಿವಿಧ ಸಂಘ ಸಂಸ್ಥೆಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಡಿವಿಜಿ ಅವರ ಸಂಸ್ಮರಣೆಗೆ ಸಾಕ್ಷಿಯಾದರು.
••••••••••••••••••••••••••••✒️ ಡಿ.ಎಂ. ಮಂಜುನಾಥಸ್ವಾಮಿ
ಕೆಜೆವಿಎಸ್ ನ್ಯೂಸ್ ಲೈನ್…. ಚಿಕ್ಕಮಗಳೂರು