ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕೊಡ ಮಾಡುವ,2024ನೇ ಸಾಲಿನ ಗೌರವಕ್ಕೆ ಸಾಮಾಜಿಕ ಹೋರಾಟಗಾರ್ತಿ ಚಿಕ್ಕಮಗಳೂರಿನ ರಾಧಾಸುಂದರೇಶ್ ಭಾಜನ*
1 min read
*ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕೊಡ ಮಾಡುವ,2024ನೇ ಸಾಲಿನ ಗೌರವಕ್ಕೆ ಸಾಮಾಜಿಕ ಹೋರಾಟಗಾರ್ತಿ ಚಿಕ್ಕಮಗಳೂರಿನ ರಾಧಾಸುಂದರೇಶ್ ಭಾಜನ*
ಒಂದು ಸಾವಿರಕ್ಕೂ ಹೆಚ್ಚು ವರ್ಷದ ಇತಿಹಾಸ ಇರುವ ಗೌರವಕ್ಕೆ ಪ್ರಸಿದ್ಧಿಯಾಗಿರುವುದು *ಶ್ರೀ ಸುತ್ತೂರು ಮಹಾಸಂಸ್ಥಾನ ಮಠವು* ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬರುತ್ತಿದೆ.ಅದರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸ್ಥಾಪನೆಯೂ ಕೂಡ ಒಂದು.ಸುತ್ತೂರು ಮಠದ ಈ ಹಿಂದಿನ ಗುರುಗಳಾಗಿದ್ದ *ಲಿಂ.ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು* ಈ ಪರಿಷತ್ತಿನ ಸಂಸ್ಥಾಪನೆಗೆ ಕಾರಣಕರ್ತರು.ಅವರ ಜನ್ಮದಿನದ ಅಂಗವಾಗಿ *ಆಗಸ್ಟ್ 29ರಂದು ಸಂಸ್ಥಾಪನಾ ದಿನಾಚರಣೆ* ಮತ್ತು ಇದೇ ದಿನವನ್ನು *ವಚನ ದಿನವನ್ನಾಗಿ* ಆಚರಿಸುತ್ತಾ ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಸಮಾಜಮುಖಿಯಾಗಿ ದುಡಿದವರಿಗೆ, ಶರಣಪ್ರಜ್ಞೆಗೆ ಹತ್ತಿರವಾದವರಿಗೆ,ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದಿಸಲಾಗುತ್ತಾಬರುತ್ತಿದೆ.2024ನೇ ಸಾಲಿನ ಇಂತಹ ಗೌರವಕ್ಕೆ ಈ ಬಾರಿ ಭಾಜನರಾದವರು ಸಮಾಜಿಕ ಹೋರಾಟಗಾರ್ತಿ ರಾಧಾಸುಂದ್ರೇಶ್ ರವರು. *ಪಡೆದಿದ್ದು ತಾರೆ ಉಳಿದಿದ್ದು ಆಕಾಶ ಎಂಬಂತೆ*, ತನ್ನ ದಾಂಪತ್ಯ ಬದುಕಿನ ಅತ್ಯಮೂಲ್ಯ ಸಮಯದಲ್ಲಿಯೇ ಚಿಕ್ಕಮಗಳೂರು ಜಿಲ್ಲೆಯ ಅಮೂಲ್ಯವಾದ ರತ್ನದಂತಿದ್ದ, ಹಸಿದ ಹೊಟ್ಟೆಗಳಿಗೆಲ್ಲ ಅನ್ನದ ಅಗುಳಾಗಿ,ಚಿಕ್ಕಮಗಳೂರು ಜಿಲ್ಲೆಯ ಜನಪರ ಹೋರಾಟವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ದಿ:ಬಿ ಕೆ ಸುಂದ್ರೇಶ್ ಅವರು ರಾಧಕ್ಕನ ಬಾಳಸಂಗಾತಿ. ದಾಂಪತ್ಯ ಬದುಕಿನ ಅರ್ಧ ಸಮಯದಲ್ಲಿಯೇ ಈ ಜಿಲ್ಲೆಯ ಮುಕುಟಮಣಿಯಂತಿದ್ದ ತನ್ನ ಪತಿಯನ್ನು ಕಳೆದುಕೊಂಡ ಮೇಲೆ, ಸುಂದರೇಶ್ ಅವರ ಆದರ್ಶ ಹೆಸರಿನಲ್ಲಿ ಇದ್ದ ತಮ್ಮ ಏಕೈಕ ಪುತ್ರಿಯಾದ ಮಗಳೊಂದಿಗೆ ಕುಟುಂಬವನ್ನು ನಿರ್ವಹಿಸುತ್ತಾ, ಪತಿಯ ಅಗಲಿಕೆಯ ನೋವಿಂದ ಮನೆಯಲ್ಲಿಯೇ ಉಳಿಯದೆ, ತನ್ನ ಗಂಡ ರೂಪಿಸಿದ ಸಾಮಾಜಿಕ ಚಟುವಟಿಕೆಯನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವ ರಾಧಾಸುಂದರೇಶ್ ಅವರ ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ, ಸುತ್ತೂರು ಶ್ರೀಗಳ ನೆನಪಿನಲ್ಲಿ, ವಚನಗಳ ಹೊತ್ತಿಗೆಯನ್ನು ನೀಡುವುದರ ಮೂಲಕ ಗೌರವಿಸಲಾಯಿತು.ಪರಿಷತ್ತಿನ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭಕ್ಕೆ, ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳ ಮುಖಂಡರು.ಜನಪರ ಚಳುವಳಿಯ ಸ್ನೇಹಿತರು. ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಪ್ರಮುಖರು. ವಿವಿಧ ಧರ್ಮದ ಹಿತೈಷಿಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮದ ಸ್ನೇಹಿತರು,ಪರಿಷತ್ತಿನ ಪದಾಧಿಕಾರಿಗಳು ಒಟ್ಟುಗೂಡಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
••••••••••••••••••••••••••••••✒️ D.M.Manjunathaswamy. KJVS News Lain…… Chikkamagaluru