AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ್ಯ ಕಾರ್ಯನಿರ್ವಾಹಕ ಸದಸ್ಯರು. ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ

1 min read

ರಾಜ್ಯ ಕಾರ್ಯನಿರ್ವಾಹಕ ಸದಸ್ಯರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )

ಅಖಿಲಭಾರತ ವೀರಶೈವ ವೀರಶೈವ ಲಿಂಗಾಯತ ಮಹಾಸಭೆಯ ಕೇಂದ್ರ ಸಮಿತಿಯ ನಿರ್ದೇಶನ ದಂತೆ ದಿನಾಂಕ 1-8-2024ರಿಂದ ದಿನಾಂಕ 25-8-2024ರವರೆಗೆ ರಾಜ್ಯ ಘಟಕದ ಚುನಾವಣೆ ಘೋಷಣೆ ಮಾಡಿದ್ದೂ ಅದರಂತೆ ನಾಮಪತ್ರ ಗಳನ್ನು ಸಲ್ಲಿಸಿ ರಾಜ್ಯ ಅಧ್ಯಕ್ಷ ರಾಗಿ ನಿವೃತ್ತ ಐ ಪಿ ಎಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ರವರು ಅವಿರೋಧವಾಗಿ ಆಯ್ಕೆ ಆಗಿ ಅಧ್ಯಕ್ಷ ರಾದರು. ನಂತರ 13ಮಹಿಳಾ ಕಾರ್ಯನಿರ್ವಾಹಕ ಸದಸ್ಯರಾಗಿ ಅವಿರೋಧ ವಾಗಿ ಆಯ್ಕೆ ಆಗಿದ್ದಾರೆ.

ಅಧ್ಯಕ್ಷ ಸೇರಿ 41ಜನರ ಮಹಾಸಭೆ.

ಇನ್ನು ಉಳಿದ 27ಜನ ಪುರುಷ ಕಾರ್ಯನಿರ್ವಾಹಕ ಸದಸ್ಯಸ್ಥಾನ ಕ್ಕೆ ಸುಮಾರು 57ಜನರು ಚುನಾವಣೆ ಕಣ ದಲ್ಲಿ ಉಳಿದು ಇದೆ 25-8-2024ರಂದು ರಾಜ್ಯಾದಂತ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಚುನಾವಣೆ ನೆಡೆದು ಸುಮಾರು 27ಜನರು ಆಯ್ಕೆ ಆದರು ಆದರಲ್ಲಿ ಚಿಕ್ಕಮಗಳೂರು ಜಿಲ್ಲೆ ಯಿಂದ ಏಕೈಕ ಅಭ್ಯರ್ಥಿ ಕಂದಾಯ ಇಲಾಖೆಯ ಲ್ಲಿ ಉಪ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ. ವೀರಶೈವ ಲಿಂಗಾಯತ ಸಮಾಜ ದಲ್ಲಿ ಸೇವೆ ಸಲ್ಲಿಸಿದ ಎಂ.ಆರ್ ಪೂರ್ಣೇಶ್ ಮುರ್ತಿ.ರವರನ್ನು ಚುನಾವಣೆ ಗೆ ನಿಲ್ಲಿಸಿ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ರಾದ ಶಾಮನೂರು ಶಿವಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ. ಹಾಗೂ ಹಾಲಿ ರಾಜ್ಯ ಸರ್ಕಾರ ದ ಅರಣ್ಯ ಸಚಿವರು ಅದ ಈಶ್ವರ ಖoಡ್ರೆ ನೇತೃತ್ವದಲ್ಲಿ 27ಜನ ಸಿಂಡಿಕೆಟ್ ಸದಸ್ಯರು ವಿಜೇತ ರಾದರು
ಅದರಲ್ಲಿ ಮೂಡಿಗೆರೆ ಎಂ.ಆರ್.ಪೂರ್ಣೇಶ್ ಮೂರ್ತಿ. 11.488ಮತಗಳನ್ನು ಪಡೆದು ಇಡೀ ರಾಜ್ಯದಲ್ಲೇ 11ನೇ ಸ್ಥಾನ ಪಡೆದು ವಿಜೇತ ರಾಗಿದ್ದಾರೆ.
ಆದ್ದರಿಂದ ಕರ್ನಾಟಕ ದ ಎಲ್ಲಾ ವೀರಶೈವ ಲಿಂಗಾಯತ ಮಹಾಸಭೆ ಯ ಎಲ್ಲಾ ಮಾನ್ಯ ಮತದಾರರಿಗೆ ಹಾಗೂ ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ ಖoಡ್ರೆ ಮತ್ತು ಶಂಕರ ಮಹಾದೇವ ಬಿದರಿ ಹಾಗೂ ಎಲ್ಲಾ ವೀರಶೈವ ಲಿಂಗಾಯತ ಸಮಸ್ತ ಜನತೆಗೆ ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ಹಾಗೂ ಎಲ್ಲಾ ತಾಲ್ಲೂಕು ಅಧ್ಯಕ್ಷರಿಗಳಿಗೆ ಮತ್ತು ಎಲ್ಲಾ ಕಾರ್ಯನಿರ್ವಾಹಕ ಸದಸ್ಯರುಗಳಿಗೆ ಮತ್ತು ಮಾಧ್ಯಮ ಮಿತ್ರ ರಿಗೆ ಪತ್ರಕರ್ತ ರಿಗೆ ಹೃದಯ ಪೂರ್ವಕ ಕೃತಜ್ಞತೆಗಳು

ಸಮಾಜದ ಸಂಘಟನೆ ಗೆ ಹೆಚ್ಚಿನ ಶ್ರಮ ವಹಿಸುತ್ತೇನೆ. ಪತ್ರಿಕಾಗೋಷ್ಠಿ ಯಲ್ಲಿ.ನೂತನವಾಗಿ ಆಯ್ಕೆ ಅದ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯ ಎಂ. ಆರ್.ಪೂರ್ಣೇಶ್ ಮೂರ್ತಿ.
ತಾಲ್ಲೂಕು ಅಧ್ಯಕ್ಷ ಬಿ.ಎಸ್.ಒಂಕಾರ್.ಜಿಲ್ಲಾ ಕಾರ್ಯನಿರ್ವಾಹಕ ಸದಸ್ಯರಾದ ಡಾ. ಮೋಹನ್ ರಾಜಣ್ಣ. ಎಂ. ಡಿ. ಇಂದ್ರೇಶ್. ಶಾಲಿನಿ ಅನಿಲ್ ಕುಮಾರ್. ತಾಲ್ಲೂಕು ಮಹಿಳಾಘಟಕ ಅಧ್ಯಕ್ಷರಾದ ರಾಜಾಲಕ್ಸ್ಮಿ ಕಾಂತರಾಜ್.ಕಾರ್ಯನಿರ್ವಾಹಕ ಸದಸ್ಯರಾದ ಎಂ. ಸಿ.ಆದರ್ಶ್.ಕಾಂತರಾಜ್. ಮಂಜುನಾಥ್. ಬಸವರಾಜ್. ಪ್ರಮೋದ್ ಪಲ್ಗುಣಿ. ಹಾಗೂ ಮುಂತಾದವರು ಇದ್ದರು.

ಎಂ.ಆರ್.ಪೂರ್ಣೇಶ್ ಮೂರ್ತಿ.
ರಾಜ್ಯ ಕಾರ್ಯನಿರ್ವಾಹಕ ಸದಸ್ಯರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )
ಕರ್ನಾಟಕ ರಾಜ್ಯ. ಬೆಂಗಳೂರು..

About Author

Leave a Reply

Your email address will not be published. Required fields are marked *