ನಿರಾಶ್ರಿತರಿಗೆ ಸಹಾಯ….
1 min read
ನಿರಾಶ್ರಿತರಿಗೆ ಸಹಾಯ….
*ದಾನಿಗಳಾದ ನಿಶಾಂತ್ ಕೊಪ್ಪರ್ ಎಸ್ಟೇಟ್ ಮಾಲೀಕರ ಸಹಕಾರ ದೊಂದಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಳೆ ಗಾಳಿಗೆ ಬಿದ್ದಂತ ಮನೆಗಳ ಕುಟುಂಬಸ್ಥರಿಗೆ ಹಾಗೂ ವಿಕಲಚೇತನರಿಗೆ ಹಾಗೂ ಪಾಶುವಾಯು ರೋಗದಿಂದ ಬಳಲುತ್ತಿದ್ದವರಿಗೆ ಹಾಗೂ ವಯಸ್ಸಾದ ಕುಟುಂಬದವರಿಗೆ ಒಟ್ಟು 8 ಕುಟುಂಬಸ್ಥರಿಗೆ ಆಹಾರ ಸಾಮಗ್ರಿಗಳು ಮತ್ತು ತರಕಾರಿ ಮತ್ತು ಹಾಲು ವಿತರಿಸಲಾಯಿತು*
*ಈ ಕುಟುಂಬಸ್ಥರಿಗೆ ಆಹಾರ ಕಿಟ್ ಕೊಟ್ಟಂತಹ ದಾನಿಗಳಾದ ನಿಶಾಂತ್ ಕುಪಾರ್ ಎಸ್ಟೇಟ್ ಮಾಲೀಕರಿಗೆ ಶಿವರಾಮಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೃದಯ ಪೂರ್ವಕ ಧನ್ಯವಾದಗಳು*
————–
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಗ್ರಾಮದಲ್ಲಿ ಹಾಗೂ ಶುಂಠಿ ಮಂಗಳೂರು ಗ್ರಾಮದಲ್ಲಿ ಮಳೆಗಾಳಿಗೆ ಮನೆಗಳು ಸಂಪೂರ್ಣ ಬಿದ್ದು ಹೋಗಿದ್ದವು ಇದ ನರಿತ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರು ಮನೆಗಳ ವಿವರ ತೆಗೆದುಕೊಂಡು ಕೊಪರ್ ಎಸ್ಟೇಟ್ ಮಾಲೀಕರಾದ ನಿಶಾಂತ್ ಕೆ. ವಿ ರವರನ್ನು ಫೋನ್ ಮುಖಾಂತರ ಸಂಪರ್ಕಿಸಿದಾಗ ತುಂಬು ಹೃದಯದಿಂದ ಬಡವರಿಗೆ ತೊಂದರೆ ಒಳಗಾದ ಕುಟುಂಬದವರಿಗೆ ಆಹಾರಕ್ಕೆ ಕೊಡಲು ತುಂಬು ಹೃದಯದಿಂದ ಒಪ್ಪಿಕೊಂಡು ತೊಂದರೆ ಒಳಗಾದ ಎಂಟು ಕುಟುಂಬದವರಿಗೆ ಅಹಾರ ಸಾಮಗ್ರಿಗಳು ಹಾಗೂ ತರಕಾರಿ ಹಾಗೂ ಹಾಲನ್ನು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಅಧ್ಯಕ್ಷರ ಕೈಲಿ ಕೊಟ್ಟು ಕೊಟ್ಟು ಕಳಿಸಿದ ಅದನ್ನು ಇವತ್ತು ಮನೆಗಳಿಗೆ ಮನೆ ಬಿದ್ದಂತಹ ಕುಟುಂಬಸ್ಥರಾದ ಲಕ್ಷ್ಮಿ ಚನ್ನಾಪುರ ಮತ್ತು ಇಂದ್ರಮ್ಮ ಸುಂಟಿಮಂಗಳೂರು ಹಾಗೂ ಹೊನ್ನಮ್ಮ ಚನ್ನಪುರ ಹಾಗೂ ವಿಕಾಲ ವಿಕಲಚೇತನರಾದ ಹಾಸಿಗೆಯಲ್ಲಿ ಮಹೇಶ್ ಚನ್ನಪುರ ಹಾಗೂ ಪಾಸುವಾಯುದಿಂದ ಮಲಗಿದ ಸುಂದರಿ ಹಾಗೂ ವಯಸ್ಸಾದ ನಡೆಯಲು ಅಸಾಧ್ಯವಾದಂತಹ ಕುಟುಂಬದವರಿಗೆ ಒಟ್ಟು 8 ಕುಟುಂಬಸ್ಥರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಹಾರ ಸಾಮಗ್ರಿಗಳನ್ನು ಹಾಗೂ ಹಾಲನ್ನು ಕೊಡಲಾಯಿತು ಇದೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಾನಿಗಳಾದ ನಿಶಾಂತ್ ಕೊಪ್ಪರ್ ಎಸ್ಟೇಟ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದೆವು ಇದೆ ಸಂದರ್ಬದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಬಿಟಿಕಟ್ಟೆ ಗ್ರಾಮದ ಅಧ್ಯಕ್ಷರಾದ ಶಿವಪ್ರಸಾದ್ ಹಾಗೂ ಗ್ರಾಮದ ಸಲಹೆಗಾರ ಟಿ ಆರ್ ರಾಮಚಂದ್ರ ಹಾಗೂ ವಿಶ್ವನಾಥ್ ಖಜಾಂಜಿ ಹಾಗೂ ಓಂ ಶ್ರೀ ನವದುರ್ಗಪರಮೇಶ್ವರಿ ದೇವಾಲಯದ ಅರ್ಚಕರಾದ ವಿಶ್ವರೂಪ ಆಚಾರ್ಯರವರು ಹಾಗೂ ಡೀವನ್ ಡಿಸೋಜ ಉಪಸ್ಥಿತರಿದ್ದರು.