ಬಾಳೂರು ಸಬ್ ಇನ್ಸ್ಪೆಕ್ಟರ್ ದೀಲಿಪ್ ಹಾಗೂ ತಂಡದವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ
1 min read
ದಿನಾಂಕ:14/07/2024 ರಂದು ಮದ್ಯಾಹ್ನ 03.00 ಗಂಟೆಗೆ ಬಾಳೂರು ರಾಣಾ ವ್ಯಾಪ್ತಿಯ ಪ್ರವಾಸಿ ಸ್ಥಳವಾದ ರಾಣಿಝರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಬೈಕ್ ಸವಾರರು ದುಡುಕು ಮತ್ತು ನಿರ್ಲಕ್ಷತನವಾಗಿ ಸಾರ್ವಜನಿಕ ರಸ್ತೆಯಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕ ಉಪದ್ರವ ಉಂಟುಮಾಡಿದ ಮಂಗಳೂರು ವಾಸಿಗಳಾದ *ಬೆಳ್ತಂಗಡಿ ಉಜಿರೆ ವಾಸಿಗಳಾದ* 1.ಗಿರೀಶ್ ಬಿನ್ ಲಿಂಗಪ್ಪ ಪೂಜಾರಿ 2.ಗಣೇಶ್ ಬಿನ್ ಅಣ್ಣಿ ಕುಮಾರ್ 3.ಗಣೇಶ್ ಬಿನ್ ಕುಮಾರ್ ಭಂಡಾರಿ 4.ಪ್ರವೀಣ ಬಿನ್ ನಾರಾಯಣ 5.ರೋಹಿತ್ ಬಿನ್ ನೊಣಯ್ಯ ರವರುಗಳ ಮೇಲೆ ಠಾಣಾ ಮೊ ಸಂಖ್ಯೆ *20/2024 ಕಲಂ 281,292 ಬಿ ಏನ್ ಎಸ್* ಅಡಿಯಲ್ಲಿ ಪ್ರಕರಣ ದಾಖಲಿಸಿ ಸದರಿಯವರಿಂದ *KA21H1070, KA7019264, ΚΑ1957053, KA19K4942* ಬೈಕ್ ಗಳನ್ನು ವಶಕ್ಕೆ ಪಡೆದಿರುತ್ತಾರೆ.
ಪ್ರವಾಸದ ನೆಪದಲ್ಲಿ ಶೋಕಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವವರಿಗೆ ದೀಲಿಪ್ ತಕ್ಕ ಶಾಸ್ತಿ ಮಾಡಿದ್ದಾರೆ.
ಬಾಳೂರು ಸಬ್ ಇನ್ಸ್ಪೆಕ್ಟರ್ ದೀಲಿಪ್ ಹಾಗೂ ತಂಡದವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.