AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕುದುರೆ ಸವಾರಿ” : ‘ಚಾರ್ಮಾಡಿ To ಪುಂಜಾಲಕಟ್ಟೆ. ಪ್ರತಿದಿನ ಭಾಗವಹಿಸಿ.ಉಚಿತ…ಉಚಿತ…ಉಚಿತ…’

1 min read

ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ರಸ್ತೆ ರಾಷ್ಟಿಯ ಹೆದ್ದಾರಿ ಅದರೂ ಕೂಡ ಚಾರ್ಮಾಡಿಯಿಂದ ಪುಂಜಾಲಕಟ್ಟೆಯವರೆಗೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.

ಪೂರ್ಣಚಂದ್ರ ತೇಜಸ್ವಿಯವರು ಹೇಳುವ ಹಾಗೆ ಪ್ರಯಾಣಿಕರು ಕುದುರೆ ಮೇಲೆ ಕುಳಿತ ಹಾಗಾಗುತ್ತದೆ.
ರಸ್ತೆಗಳು ಕಂಬಳದ ಗದ್ದೆಗಳಾಗಿವೆ.

ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
ಪ್ರಯಾಣಿಕರಿಗೆ ರಸ್ತೆ ಸರಿ ಇಲ್ಲದಿದ್ದರೆ ಪ್ರಯಾಣ ಮಾಡುವಾಗ ತೊಂದರೆ ಅದರೆ ಸಂಬಂಧಿಸಿದ ಇಲಾಖೆ ಕಾರಣ ಎಂಬ ಕಾನೂನನ್ನು ಇಲಾಖೆ ಗಾಳಿಯಲ್ಲಿ ತೂರಿದೆ.


ಸಂಬಂಧಿಸಿದ ಜನಪ್ರತಿನಿದಿಗಳು ಬದಲಾಗುತ್ತಾರೆ ಹೊರತು ಸಾಮಾನ್ಯ ಜ್ಞಾನದ ಅರಿವಿಲ್ಲದಂತಾಗಿದೆ.ರಾಷ್ಟ್ರೀಯ ಹೆದ್ದಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಎಂ.ಎಲ್.ಎ ಗಳು ತಪ್ಪಿಸಿಕೊಳ್ಳುತ್ತಾರೆ.

ಹವಾಮಾನಕ್ಕೆ ತಕ್ಕಂತೆ ನಕ್ಷೆಯನ್ನು ತಯಾರಿಸದೆ ಇಂಜಿನಿಯರುಗಳು ಸರ್ಕಾರದ ದಾರಿ ತಪ್ಪಿಸುತಿದ್ದಾರೆ.ಸರ್ಕಾರದ ಖಜಾನೆ ಖಾಲಿಯಾದರೆನು ತಮ್ಮ ಖಜಾನೆ ಭರ್ತಿ ಅದರೆ ಸಾಕು ಅನ್ನುವ ಮನೋಭಾವನೆ ಕೆಲವು ಅಧಿಕಾರಿಗಳದ್ದು.


ಸರ್ಕಾರವು ಬದಲಾಗುತ್ತೆ ಹೊರತು ಭ್ರಷ್ಟ ಅಧಿಕಾರಗಳ ಮನಸ್ಸು ಬದಲಾಗಲ್ಲ.ಈಗ ಮಳೆಗಾಲ ಎಂಬ ಸಾಮಾನ್ಯ ಜ್ಞಾನವಿಲ್ಲದ ಇಂಜಿನಿಯರುಗಳು ವರ್ಕ್ ಆರ್ಡರ್ ಕೊಟ್ಟಿದ್ದಾದರು ಯಾಕೆ.

ಬಾಕ್ಸ್ ಚರಂಡಿ ಮಾಡುವ ನೆಪದಲ್ಲಿ ಚೆನ್ನಾಗಿದ್ದ ರಸ್ತೆಯನ್ನು ಅಗೆದು ಹಾಕಿದ್ದಾದರೂ ಯಾಕೆ????
ಇತ್ತ ರಸ್ತೆಯು ಇಲ್ಲ.ಅತ್ತ ಚರಂಡಿಯು ಇಲ್ಲ.
ಕಳಪೆ ಕಾಮಗಾರಿಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ತರುವ ಇಂಜಿನಿಯರುಗಳನ್ನೆ ಹೊಣೆಗಾರರನ್ನಾಗಿ ಸರ್ಕಾರ ಮಾಡಬೇಕು. ಅಗ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಅಗುತ್ತೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯ.
ದೊಡ್ಡ ದೊಡ್ಡ ಕಾಮಗಾರಿಗಳ ಬಗ್ಗೆ ಎಂ.ಪಿ.ಮತ್ತು ಎಂ.ಎಲ್.ಎ ಮತ್ತು ಎಂ.ಎಲ್.ಸಿಗಳು ಗಮನ ಹರಿಸದಿದ್ದರೆ ಮತದಾರ ಕುತ್ತಿಗೆ ಪಟ್ಟಿ ಹಿಡಿದು ಕೇಳುವ ಕಾಲ ಬರಲಿ ಎಂಬುದೇ ಪ್ರಯಾಣಿಕರ ಆಶಯ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *