“ವಿಧವೆ ಮನೆಗೆ ಹೊಗುವ ದಾರಿ ಅಡ್ಡಗಟ್ಟಿದ ರಾಜು.”
1 min read
ಹೊಸಮನೆ ಸುಧಾ ಎಂಬ ವಿಧವೆ ಮಹಿಳೆಯ ಮನೆಗೆ ಹೊಗುವ ದಾರಿ ಸರ್ಕಾರಿ ಭೂಮಿಯಾಗಿದ್ದು ಸಿಮೆಂಟ್ ರಸ್ತೆ ಕೂಡ ಅಗಿದೆ.ಸುಧಾ ಊರಿನಲ್ಲಿ ಇಲ್ಲದ ಸಮಯದಲ್ಲಿ ಬೇಲಿ ಹಾಕಿ ಮನೆಗೆ ಹೋಗುವ ದಾರಿಯನ್ನು ಅಡ್ಡಗಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಸಮನೆ ಕಾಲೊನಿಯಲ್ಲಿ ಈ ಘಟನೆ ನಡೆದಿದೆ.
ಹತ್ತಾರು ಬಾರಿ ಗ್ರಾಮಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೊಜನ ಅಗಿಲ್ಲ.ನಂತರ ತಹಸಿಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.ಆದರೆ ಏನು ಪ್ರಯೊಜನ ಅಗದ ಕಾರಣ ಇಂದು (ದಿನಾಂಕ 29/06/2024)ಹೊಸಮನೆಯ ಗ್ರಾಮಸ್ಥರು ಚಿನ್ನಿಗ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಉದುಸೆ ಮಂಜಯ್ಯ ಅವರ ನೇತೃತ್ವದಲ್ಲಿ ನೂರಾರು ಜನ ಧರಣಿ ಮಾಡುತಿದ್ದಾರೆ.
ನ್ಯಾಯ ದೊರಕುವವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಧರಣಿ ನಿರತ ಗ್ರಾಮಸ್ಥರು ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿಯದಿರಲು ಪಿ.ಡಿ.ಒ ಅವರ ನಿರ್ಲಕ್ಷ್ಯ ಕಾರಣ ಎಂದು ಗ್ರಾಮಸ್ಥರು ತಿಳಿಸಿದರು.
ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಅಗಮಿಸಿ ನ್ಯಾಯ ದೊರಕಿಸಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.