day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಭೂಮಿ ಅಕ್ರಮ’ ‘ಶಿಕ್ಷೆ ಸಕ್ರಮ’ “ರಮೇಶ”ನ ‘ಪರಾಕ್ರಮ’…???!!!!!!! – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಭೂಮಿ ಅಕ್ರಮ’ ‘ಶಿಕ್ಷೆ ಸಕ್ರಮ’ “ರಮೇಶ”ನ ‘ಪರಾಕ್ರಮ’…???!!!!!!!

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

‘ಭೂಮಿ ಅಕ್ರಮ’ ‘ಶಿಕ್ಷೆ ಸಕ್ರಮ’ “ರಮೇಶ”ನ ‘ಪರಾಕ್ರಮ’…???!!!!!!!

ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಮತ್ತೆ ಸದ್ದು ಮಾಡಲಾರಂಬಿಸಿದೆ.
ಕಳೆದ ಎರಡು ಮೂರು ವರ್ಷಗಳಿಂದ ಇಲ್ಲಿಯ ಸರ್ಕಾರಿ ಭೂಮಿಯ ಭೂ ಹಗರಣದ ಕೂಗು ಎದ್ದಿದ್ದರು ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು .ಅದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಅಕ್ರಮ ಭೂ ಮಂಜೂರಾತಿ ಪ್ರಕರಣ ರಾಜ್ಯ ಸರ್ಕಾರವೇ ಎ ಗ್ರೇಡ್ ಹೊಂದಿರುವ 15ಜನ ತಹಶೀಲ್ದಾರ್ ಗಳ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿತು. ತನಿಖಾ ತಂಡ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳು ಸಹ ದೂರು ನೀಡಿದ್ದವು.
ಆದರೆ ಭಾರತ ಕಮ್ಯೂನಿಸ್ಟ್ ಪಕ್ಷ ವಿಶೇಷ ತನಿಖಾ ವರದಿ ತಯಾರಿಸಿ ಪ್ರತಿ ಗ್ರಾಮದ ಯಾವ ಸರ್ವೆ ನಂಬರ್ ಯಾರ ಹೆಸರಲ್ಲಿ ದಾಖಲಾತಿ ಮಾಡಲಾಗಿದೆ ಆ ಕುಟುಂಬ ಹೊಂದಿರುವ ಆಸ್ತಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಯಾರು ಯಾವ ರೀತಿ ಹಗರಣ ನಡೆದಿದೆ ಸರ್ಕಾರಕ್ಕೆ ಯಾವ ರೀತಿ ಕೋಟಿ ಕೋಟಿ ನಷ್ಟ ಆಗಿದೆ ಆ ಹಣ ಅಧಿಕಾರಿಗಳು ಯಾವ ರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಈ ಎಲ್ಲಾ ದಾಖಲೆ ಸಮೇತ ಸಂಬಂಧಪಟ್ಟ ತನಿಖಾ ಅಧಿಕಾರಿಗಳು ಮತ್ತು ಸರ್ಕಾರ, ಕಂದಾಯ ಸಚಿವರು,ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ, ವಿವಿಧ ತನಿಖಾ ಸಂಸ್ಥೆಗೆ ಅಧಿಕೃತ ದೂರನ್ನು ಪಕ್ಷದ ಮೂಡಿಗೆರೆ ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಅವರ ಹೆಸರಿನಲ್ಲಿ ದಾಖಲಿಸಿತು.
ಸರ್ಕಾರ ಮಟ್ಟದಲ್ಲಿ ಅಕ್ರಮ ವೆಸಗಿರುವುದು ಸಾಬಿತು ಆಗಿ ಇದೀಗ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶಿದೆ.
ಆದರೆ ತಮ್ಮ ಪಕ್ಷ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲು ಎಲ್ಲಾ ರೀತಿಯ ಕಾನೂನು ಹೋರಾಟಕ್ಕೆ ನಾವು ಕಳೆದ ಎರಡು ವರ್ಷಗಳಿಂದ ಹೋರಾಡುತ್ತಿದ್ದೇವೆ ಎನ್ನುತ್ತಾರೆ ರಮೇಶ್ ಕೆಳಗೂರು.
ಹಾಗಾಗಿ ಇತ್ತೀಚೆಗೆ ಕಳೆದ ವರ್ಷ ದಾಖಲಿಸಿದ ದೂರನ್ನು ಲೋಕಾಯುಕ್ತ ಪರಿಶೀಲಿಸಿ ದಾಖಲೆಗಳ ಅನ್ವಯ ಇದೀಗ ಭಾಗಿಯಾಗಿರುವ 22 ಜನ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ ಇವರೆಲ್ಲರ ಪಾಲು ಇದೆ ಕೆಲವರದು ದೊಡ್ಡ ಪಾಲಾದರೆ ಕೆಲವರು ಸಣ್ಣ ಪ್ರಮಾಣದಲ್ಲಿ ಭಾಗಿಗಳಾಗಿದ್ದಾರೆ.
ಕಳ್ಳರನ್ನು ಸತ್ಯವಂತರು ಎನ್ನಲು ಸಾದ್ಯವಿಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆಲ್ಲ ಶಿಕ್ಷೆಯಾದರೆ ನಾವು ಒಂದು ವರ್ಷ ಜನರ ಮದ್ಯೆ ಸಂಚರಿಸಿ ದಾಖಲೆ ಸಂಗ್ರಹಿಸಿ ದೂರನ್ನು ದಾಖಲಿಸಿದಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಇಲ್ಲಿ ಈಗಾಗಲೇ 6785 ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ನೂರು ಎಕರೆ ಇನ್ನೂರು ಎಕರೆ ಮುನ್ನೂರು ಎಕರೆ 800 ಎಕರೆ ಇರುವವರಿಗೂ ಸರ್ಕಾರಿ ಭೂಮಿಯನ್ನು ಫಾರಂ ನಂಬರ್ 53,57, ಹೀಗೆ ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರಿಗಳು ಅಕ್ರಮವಾಗಿ ದಾಖಲೆ ಸೃಷ್ಟಿ ಮಾಡಿ ಕೊಟ್ಟಿದ್ದಾರೆ.
ಅದನ್ನು ನಾವು ಪತ್ತೆ ಹಚ್ಚಿ ಸಂಬಂಧಪಟ್ಟ ತನಿಖಾ ಸಂಸ್ಥೆಗೆ,ಸರ್ಕಾರಕ್ಕೆ,ಸಚಿವರಿಗೆ,ದಾಖಲೆ ಸಮೇತ ಸಾಬೀತು ಪಡಿಸಿದ್ದೇವೆ. ನಾವು ಸುಮ್ಮನೆ ಕೂರಲಿಲ್ಲ ನ್ಯಾಯಾಲಯದ ಕದ ಕೂಡ ತಟ್ಟುತ್ತಿದ್ದೇವೆ. ನಮಗೆ ಅನ್ಯಾಯವನ್ನು ಕಂಡರೆ ಸಹಿಸಲು ಸಾದ್ಯವಿಲ್ಲ. ಇಲ್ಲಿ ತಲೆ ತಲೆಮಾರುಗಳಿಂದ ನಿವೇಶನ ಇಲ್ಲದೇ ಬೀದಿಗಳಲ್ಲಿ ಎಸ್ಟೇಟ್ ಲೈನ್ ಗಳಲ್ಲಿ ಬಾಡಿಗೆ ಮನೆಗಳಲ್ಲಿ ಜೀತದಂತೆ ಜನ ಜೀವನ ಸಾಗಿಸುತ್ತಿದ್ದಾರೆ ಅವರೆಲ್ಲ ನಿವೇಶನದ ಹೋರಾಟ ನಡೆಸಿದರೆ ಅಧಿಕಾರಿಗಳು ಇಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲ ಎನ್ನುತ್ತಾರೆ.
ನಾವು ಮೂಲಭೂತ ಸೌಲಭ್ಯ ಹೊಂದಿರುವ ಅದೇ ಸರ್ಕಾರಿ ಭೂಮಿ ಎಲ್ಲಿದೆ ಎನ್ನುವುದನ್ನು ಇದೀಗ ಸಾಬೀತು ಪಡಿಸಿದ್ದೇವೆ. ನ್ಯಾಯಾಲಕ್ಕೂ ಈ ಬಗ್ಗೆ ವರದಿ ಸಲ್ಲಿಸಲಿದ್ದೇವೆ. ಇಲ್ಲಿಯ ಅಧಿಕಾರಿಗಳ ಹೆಸರಿಗೂ ಸರ್ಕಾರಿ ಭೂಮಿ ಮಂಜೂರು ಮಾಡಲು ಹೊರಟಿರುವ ದಾಖಲೆ ಸಮೇತ ನಮ್ಮ ದೂರಲ್ಲಿ ಸಾಬೀತು ಪಡಿಸಿದ್ದೇವೆ ಈ ಹಿಂದೆ ಉಪವಿಭಾಗ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ರಾಜೇಶ್ ಅವರಿಗೆ 1300 ಎಕರೆ ಇನ್ನೂ ಹೆಚ್ಚುವರಿ ಭೂಮಿಯ ದಾಖಲೆ ಸಂಗ್ರಹಿಸಿ ದೂರನ್ನು ಸಲ್ಲಿಸಿದ್ದೆವು. ಅವರು ಕಟ್ಟು ನಿಟ್ಟಿನ ಆದೇಶ ನೀಡಿ ಅದನ್ನು ತೆರವು ಗೊಳಿಸಲು ಎಲ್ಲಾ ತಯಾರಿ ನಡೆಸಿದ್ದ ಸಂದರ್ಭ ಅವರನ್ನು ಎತ್ತಂಗಡಿ ಮಾಡಲಾಯಿತು. ಅನಿವಾರ್ಯವಾಗಿ ನಾವು ಇತರೆ ತನಿಖಾ ಸಂಸ್ಥೆಗಳ ಮುಂದೆ ನಮ್ಮ ದೂರನ್ನು ಕೊಂಡೊಯ್ಯ ಬೇಕಾಯಿತು ಆ ದೂರುಗಳಲ್ಲಿ ಇದೀಗ ಲೋಕಾಯುಕ್ತ ದೂರು ಸಹ ಒಂದು ಇನ್ನೂ ಹಲವಾರು ದೂರುಗಳಿವೆ ಪರಿಶೀಲನೆಯಲ್ಲಿ ಇದೆ ಭೂ ಕಬಳಿಕೆ ನ್ಯಾಯಲಕ್ಕೂ ನಮ್ಮ ಅವವಾಲು ಇದೆ ಇನ್ನೂ ದೊಡ್ಡ ಮಟ್ಟದಲ್ಲಿ ಇದು ಸ್ಫೋಟಗೊಳ್ಳ ಬಹುದು ಮತ್ತು ಭಾಗಿಯಾಗಿರುವ ಯಾರೇ ಆದರೂ ಅವರಿಗೆ ತಕ್ಕ ಶಿಕ್ಷೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ.
ಸರ್ಕಾರಿ ಭೂಮಿಯನ್ನು ಕಬಳಿಸಲು ಕಾರಣಕರ್ತರಾದ ಅಧಿಕಾರಿಗಳೇ ಇಂತಹ ಭ್ರಷ್ಟಚಾರದ ಮೂಲ ಪಾಲುದಾರರು ಯಾರು ಯಾರು ಎಂಬುವುದನ್ನು ಅಧಿಕೃತ ದೂರಿನ ದಾಖಲೆಯಲ್ಲಿ ಸಂಪೂರ್ಣವಾಗಿ ನಾವು ವಿವರಿಸಿದ್ದೇವೆ.ಅದಕ್ಕೆ ಸಂಬಂಧಪಟ್ಟ ದಾಖಲೆ ಒದಗಿಸಿದ್ದೇವೆ. ಲೋಕಾಯುಕ್ತ ದಾಖಲು ಮಾಡಿ ತನಿಖೆ ಮಾಡುತ್ತಿರುವುದು ಸ್ವಾಗತಾರ್ಹ ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆ ಆಗಬೇಕು ಅದು ನಮ್ಮ ಒತ್ತಾಯ ಮುಂದೆ ಮೂಡಿಗೆರೆ ಬದಲಾಗಬೇಕು ಭ್ರಷ್ಟಚಾರ ನಿಲ್ಲಬೇಕು ಎಂದು ರಮೇಶ್ ಕೆಳಗೂರು ಹೇಳಿದ್ದರು

ಬರಹ…
ಕೆಳಗೂರು ರಮೇಶ್.
ತಾ:ಕಾರ್ಯದರ್ಶಿ.
ಮೂಡಿಗೆರೆ.

About Author

Leave a Reply

Your email address will not be published. Required fields are marked *