ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ* ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ
1 min read
*ಮೂಡಿಗೆರೆ ಜಿಂಕೆಯ ಕಣ್ಣಿಗೆ ರಾಜದಾನಿಯಲ್ಲಿ ಗೌರವ*
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಕಡುವಳ್ಳಿ ಹರಿಣಾಕ್ಷಿಯವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮ
*ದಿನಾಂಕ:14:06:2024* ರಂದು *ಚಿಕ್ಕಮಗಳೂರು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷಿಣಿಯವರಾದ ಶ್ರೀಮತಿ.ಹರಿಣಾಕ್ಷಿ ಕೆ ಸಿ ಅವರನ್ನು ಬೆಂಗಳೂರಿನಲ್ಲಿ ನಡೆದ ಗಾಯನೋತ್ಸವ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಕಲೆ,ಕನ್ನಡ ಸೇವೆ..ಸಂಗೀತ,ಸಾಂಸ್ಕೃತಿಕ ಕ್ಷೇತ್ರದ ಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ *ಯುವ ಕ್ರೀಡಾ ಸಬಲೀಕರಣ ಭಾರತ ಸರ್ಕಾರ ನೆಹರು ಯುವ ಕೇಂದ್ರ ಸಂಘಟನೆ* ವತಿಯಿಂದ *ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿ* ಹಾಗು *ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್* ಸಹಭಾಗಿತ್ವದ *ಸಂಗೀತ ಗಾನಲಹರಿ,ಕರ್ನಾಟಕ* ಸಂಘವು ವತಿಯಿಂದ *ಕಲಾರತ್ನ ರಾಜ್ಯ ಪ್ರಶಸ್ತಿ* ನೀಡಿ ಗೌರವಿಸಲಾಯಿತು.
ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ಸಂಗೀತ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
**ಅವಿನ್ ಸ್ವರ ಸಂಗಮ**ದ ಗಾಯಕಿಯಾಗಿ ಲೈವ್ ಪೇಜಿನಲ್ಲಿ ಗುರುತಿಸಿ ಕೊಡ ಇವರು ಸ್ವತಃ ಶ್ರಿಹರಿ ಲೈವ್ ಪೇಜನ್ನು ಪ್ರಾರಂಬಿಸಿದ್ದಾರೆ.ಇವರಿಗೆ ಬಂದ ಗೌರವಕ್ಕೆ ಜಿಲ್ಲೆಯ ಜನತೆ ಸಂತಸಗೊಂಡಿದ್ದಾರೆ.ಮುಂದೆ ಇನ್ನು ಅನೇಕ ಗೌರವಗಳು ಬರಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.