“ಶನಿವಾರ ಬರ್ತ್ ಡೇ : ಭಾನುವಾರ ಡೆತ್ ಡೇ.”
1 min read
ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಳಸ ತಾಲ್ಲೂಕಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ,ಕಳಸ ತಾಲ್ಲೂಕಿನ,ಹಳುವಳ್ಳಿ ತಾರಿಕೊಂಡ ನಿವಾಸಿ ರಮ್ಯಾ(21 ವರ್ಷ) ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾರಿಕೊಂಡ ರಮೇಶ್ ಎಂಬುವವರ ಪುತ್ರಿ ರಮ್ಯಾ ಕ್ಷುಲ್ಲಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳಸ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ರಮ್ಯಾ ದಿನಾಂಕ 25/05/2024ರ ಶನಿವಾರದಂದು ತನ್ನ 21ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.
ದಿನಾಂಕ 26/05/2024ರ ಭಾನುವಾರ ಪೋಷಕರೆಲ್ಲ ತಮ್ಮ ಹತ್ತಿರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು.ಮದುವೆ ಮುಗಿಸಿಕೊಂಡು ಮನೆಗೆ ಬಂದಾಗ ರಮ್ಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ.
ಮದುವೆಗೆ ಹೋಗುವಾಗ ಸೀರೆಯ ವಿಚಾರಕ್ಕಾಗಿ ರಮ್ಯಾ ಮತ್ತು ಆಕೆಯ ಸಹೋದರಿಯ ನಡುವೆ ಜಗಳ ಆಗಿತ್ತು, ಇದರಿಂದ ತಾನು ಮದುವೆಗೆ ಹೋಗದೇ ರಮ್ಯಾ ಮನೆಯಲ್ಲೇ ಉಳಿದಿದ್ದಳು.ಮನೆಯವರೆಲ್ಲಾ ಮದುವೆಗೆ ತೆರಳಿದ ನಂತರ ರಮ್ಯಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆದರೆ ಈ ಘಟನೆಯ ಸತ್ಯಾಸತ್ಯತೆ ತನಿಖೆಯ ನಂತರ ತಿಳಿದು ಬರಬೇಕಿದೆ.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.