ಸಾಧನೆಗೆ ಸಮಾಜದ ಪ್ರೇರಣೆ ಅಗತ್ಯ
1 min read
ದಿನಾಂಕ : 12 : 05 : 2024.ನೇ ಭಾನುವಾರದಂದು
ಶ್ರೀ ಸತ್ಯ ಸಾರಮಾನಿ ಕ್ಷೇತ್ರ.ಕಗ್ಗನಳ್ಳ ( ಪಡೀಲ್ ) ಬಾಳೆಹೊಳೆ. ಕಳಸ ತಾಲ್ಲೂಕು ಇಲ್ಲಿ ಕ್ಷೇತ್ರದ ದೈವಗಳ ವರ್ಷಾವಧಿ ಪರ್ವ ಸೇವೆ ನಡೆಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಾಧನೆಗೈದ ಆದಿ ದ್ರಾವಿಡ ಸಮಾಜದ 19 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮಹಾಬಲ ಮಾತನಾಡಿ ಕ್ಷೇತ್ರವು ಧಾರ್ಮಿಕ ಚಿಂತನೆಯ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದರೆ ಸಮಾಜದಲ್ಲಿ ಒಂದಷ್ಟು ಪರಿವರ್ತನೆ ಸಾಧ್ಯ ಎಂದರು.
ಚಿಕ್ಕಮಗಳೂರು ಜಿಲ್ಲಾ ಆದಿ ದ್ರಾವಿಡ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅರ್ಡಿಕೊಪ್ಪ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ನಮ್ಮ ಸಮುದಾಯದ ಜನ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಾಧನೆಯ ಹಾದಿಯಲ್ಲಿದ್ದಾರೆ ಅಂತವರನ್ನು ಪ್ರೇರೇಪಿಸುವ ಕಾರ್ಯ ಸಮುದಾಯದ ಜವಾಬ್ದಾರಿ,ಇದರಿಂದ ಸಮುದಾಯದ ಏಳಿಗೆ ಸಾಧ್ಯ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ತನೂಡಿ ಗ್ರಾಮದ ಕೊಡುಗೈ ದಾನಿಗಳು ಹಾಗೂ ಕೃಷಿಕರಾದ ಶ್ರೀಯುತ ಜಗದೀಶ್ ಹೆಗಡೆ ದಂಪತಿಗಳು ಭಾಗವಹಿಸಿದ್ದರು .
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಆದಿ ದ್ರಾವಿಡ ಸಮಾಜ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಎ.ಎಸ್.ಮೋನಪ್ಪ.ಅಣ್ಣಯ್ಯ ಬದ್ರಿಯಾ ನಗರ ಮಂಗಳೂರು.ಚಿನ್ನಯ್ಯ ಗುಡ್ಡಹಟ್ಟಿ. ಶೇಖರ್ ವೇಣೂರು.ಶ್ರೀನಿವಾಸ್ ಮಿಜಾರ್. ಕ್ಷೇತ್ರದ ಗುರಿಕಾರರಾದ ಲಕ್ಷ್ಮಣ. ಕಾರ್ಯದರ್ಶಿ ಶ್ರೀನಿವಾಸ್.ಶಿವಪ್ಪ ಮತ್ತು ಸಮಿತಿಯ ಸದಸ್ಯರು.ಮಹಿಳಾ ಸಮಿತಿಯ ಪದಾಧಿಕಾರಿಗಳು.
ಚಿಕ್ಕಮಗಳೂರು.ದಕ್ಷಿಣ ಕನ್ನಡ ಜಿಲ್ಲೆಯ ದೈವಸ್ಥಾನಗಳಿಂದ ವಿವಿಧ ಕ್ಷೇತ್ರಗಳಿಂದ ಹಾಗೂ ಕ್ಷೇತ್ರದ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಸಿರಿ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾದರು.
ಬರಹ ಕೃಪೆ……
ವಸಂತ್ ಹಾರ್ಗೋಡು