लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ :ಬಸವಣ್ಣ ನವರನ್ನು ವ್ಯಕ್ತಿ ಯಾಗಿ ನೋಡದೆ ಶಕ್ತಿ ಯಾಗಿ ಕಾಣಬೇಕು *ಡಾ.ಮೋಹನ್* *ರಾಜಣ್ಣ.*

1 min read

ಮೂಡಿಗೆರೆ :ಬಸವಣ್ಣ ನವರನ್ನು ವ್ಯಕ್ತಿ ಯಾಗಿ ನೋಡದೆ ಶಕ್ತಿ ಯಾಗಿ ಕಾಣಬೇಕು *ಡಾ.ಮೋಹನ್ ರಾಜಣ್ಣ.*

ಮೂಡಿಗೆರೆ :ಬಸವಣ್ಣ ನವರನ್ನು ವ್ಯಕ್ತಿ ಯಾಗಿ ನೋಡದೆ ಅವರೊಂದು ಶಕ್ತಿ ಸಿದ್ಧಾಂತವಾಗಿ ಕಾಣಬೇಕು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ) *ಸಂಸ್ಥಾಪಕ ಡಾ. ** *ಮೋಹನ್ ರಾಜಣ್ಣ ಹೇಳಿದರು** .

ಅವರು ಇಂದು ಗೋಣಿಬೀಡು ಬಸ್ ನಿಲ್ದಾಣ ಸರ್ಕಲ್ ನಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಮತ್ತು ಜೇಸಿಐ ಗೋಣಿಬೀಡು ಹೊಯ್ಸಳ ಇವರ ಸಂಯುಕ್ತ ಅಶ್ರಯ ದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ. *ಜಗಜ್ಯೋತಿ ಬಸವೇಶ್ವರ* ಜಯಂತಿ ಕಾರ್ಯಕ್ರಮ ದಲ್ಲಿ ಪ್ರಸ್ತಾವಿಕ ವಾಗಿ ಮಾತನಾಡಿದರು.

ಬಸವಣ್ಣ ನವರ ಜಗದಗಲ. ಮುಗಿಲಗಲ. ಮಿಗೆಯಗಲ ಎಂಬ ಮಾತು ಗಳನ್ನು ನಾವು ಅರ್ಥೈಸಿ ಕೊಳ್ಳಬೇಕು. ಆಗಮ್ಯ. ಅಪ್ರತಿಮ ಅಗೋಚರ ಲಿಂಗವೆ. ಕರಸ್ಥಲ ಕ್ಕೆ ಬಂದು ಚುಳುಕಾದಿರಿ ಎಂಬ ಕನ್ನಡದ ಮಾತುಗಳು ಪ್ರಪಂಚದ ಯಾವ ಭಾಷೆ ಯಲ್ಲಿಯೂ ಸಿಗುವುದಿಲ್ಲ. ನಮ್ಮಲ್ಲಿರುವ ಲಿಂಗತತ್ವ ವನ್ನು ಅರಿತು ಬದುಕ ಬೇಕು ಎಂದರು..

*ಗೋಣಿಬೀಡು ಗ್ರಾಮ ಪಂಚಾಯಿತಿ* *ಅಧ್ಯಕ್ಷ.ಜಿ ಎಸ್.* *ದಿನೇಶ್ ಆನೆದಿಬ್ಬ* ರವರು ಬಸವೇಶ್ವರ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಬಸವಣ್ಣ ನವರು ಬಯಸಿದ್ದು ಸಾಮಾಜಿಕ. ಆರ್ಥಿಕಮತ್ತು ಧಾರ್ಮಿಕ ಸಮಾನತೆಯನ್ನು ಸಾರುವಂತಹ ಆದರ್ಶ ಸಮಾಜ. ವರ್ಣ ರಹಿತ. ವರ್ಗರಹಿತ. ಜಾತಿ ರಹಿತ ಸುಂದರ ಸಮಾಜದ ಕಲ್ಪನೆ ಯ 12ನೇ ಶತಮಾನದ ಲ್ಲಿಯೇ ಪ್ರಾಯೋಗಿಕ ವಾಗಿ ಅನುಷ್ಠಾನ ಕ್ಕೆ ಬಂದದ್ದು ಅವರ ದುರದೃಷ್ಟಿ ಯ ಪ್ರತಿಬಿಂಬ. ಬಸವಣ್ಣ ನವರು ಕಂಡ ಸಮಾನತೆಯ ಸಮಾಜನಮ್ಮೆಲ್ಲರ ಇಂದಿನ ಆಶಯ ವಾಗಬೇಕು ಎಂದರು.

ಅಧ್ಯಕ್ಷತೆ ಯನ್ನು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಅಧ್ಯಕ್ಷ *ಹೆಚ್.ಜಿ.ಆದರ್ಶ* ವಹಿಸಿ ಮಾತನಾಡುತ್ತಾ ಬಸವಣ್ಣ ತಮ್ಮ ವಚನ ಗಳ ಮೂಲಕ. ಜನರನ್ನು ತಲುಪಲು ಜಾಗೃತಿ ಮೂಡಿಸುವಲ್ಲಿ ಯಶಸ್ವಿ ಯಾದರು. ಲಿಂಗಾರಾಧನೇಯನ್ನು ತಿರಸ್ಕರಿಸಿ ಅವರು ಇಷ್ಟ ಲಿಂಗ ಹಾರ ವನ್ನು ಪರಿಚಯಿ ಸಿದರು. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಹೊಸ ಚಿಂತನೆಗೆ ಕಾರಣ ವಾಯಿತು ಇದು ಎಲ್ಲಾ ವರ್ಗದ ಜನರ ಆದ್ಯಾತ್ಮಿಕ ವಿಚಾರ ಗಳನ್ನು ಬಹಿರಂಗ ವಾಗಿ ಚರ್ಚಿಸವ ಕೇಂದ್ರ ವಾಯಿತು ಎಂದರು.

ಕಾರ್ಯಕ್ರಮ ದಲ್ಲಿ *ಬಿ.ಎಂ ಜಗತ್ ಸ್ವಾಗತಿಸಿ* -ವಂದಿಸಿದರು.
ಪುಷ್ಪಗಿರಿ ಪ್ರತಿಷ್ಠಾನದ *ಟ್ರಸ್ತಿ ಸಿ ಸಿ ರಾಜಣ್ಣ.* ಜೇಸಿ ಸಂಸ್ಥೆಯ ನಿಕಟಪೂರ್ವಧ್ಯಕ್ಷ. *ಚಂದ್ರಶೇಖರ್.* *ಪೂರ್ವಧ್ಯಕ್ಷ.ವೈ* *ಬಿ.ಸುಂದರೇಶ್.*
*ಜಿ.ಆರ್.ಪರಮೇಶ್.*
ಸವಿತಾ ಸಮಾಜದ *ಮುಖಂಡ.ಸುಬ್ಬಣ್ಣ.* *ದೇವರಾಜ್.* *ಗಂಗಾಧರ್* .ಗ್ರಾಮಸ್ಥರು. ಮುಂತಾದವರು ಭಾಗವಹಿಸಿದ್ದರು. ಸಿಹಿ ಹಂಚಲಾಯಿತು.

About Author

Leave a Reply

Your email address will not be published. Required fields are marked *