ಮೂಡಿಗೆರೆ ತಾಲೋಕ್ ಬಣಕಲ್ ಹೋಬಳಿಯ ಕೋಳೂರು ಗ್ರಾಮದಲ್ಲಿ ಅಂಬೇಡ್ಕರ್ ರವರ 133ನೇ ಜನ್ಮದಿನದ ಆಚರಣೆಯ “ಅಂಬೇಡ್ಕರ್ ಹಬ್ಬ”
1 min read
ಮೂಡಿಗೆರೆ ತಾಲೋಕ್ ಬಣಕಲ್ ಹೋಬಳಿಯ ಕೋಳೂರು ಗ್ರಾಮದಲ್ಲಿ ಅಂಬೇಡ್ಕರ್ ರವರ 133ನೇ ಜನ್ಮದಿನದ ಆಚರಣೆಯ “ಅಂಬೇಡ್ಕರ್ ಹಬ್ಬ” ಊರಿನಲ್ಲಿ ರಸ್ತೆಯ ಉದ್ದಕ್ಕೂ ತೋರಣ ಲೈಟಿಂಗ್ಸ್ ನೀಲಿ ಪ್ಲಾಗ್ ನೀಲಿ ಬಂಟಿಂಗ್ಸ್ ಗಳಿಂದ ಕಂಗೊಳಿಸುತ್ತಿತ್ತು.
ಊರಿನ ಯುವಕರು ಪಕ್ಕದ ಊರಿನ ಯುವಕರು ಒಟ್ಟಿಗೆ ಊರಿನಿಂದ ಸಬ್ಬೆನಹಳ್ಳಿ -ಬಡವನದಿಣ್ಣೆ ತನಕ ಬೈಕ್ ಜಾಥಾ ಅಮ್ಮಿಕೊಳ್ಳಲಾಗಿತು.
ಕಾರ್ಯಕ್ರಮ ಕೋಳೂರು ಕುಮಾರವರ ಅದ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಮೂಡಿಗೆರೆ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಅಕ್ಷತಾ ಹಾವೇರಿ ಗಿಡಕ್ಕೆ ನೀರು ಹಾಕುವುದರ ಮುಖಾಂತರ ಉದ್ಘಾಟನೆ ಮಾಡಿ ಭಾಷಣ ಮಾಡಿದರು.
ಪ್ರಾಸ್ತವಿಕವಾಗಿ ಪಿ ಕೆ ಮಂಜುನಾಥ ಮಾತನಾಡಿದರು. ವೇದಿಕೆಯಲ್ಲಿ ಗಿರೀಶ್, ಮಾರಯ್ಯ ಮೇಸ್ಟ್ರು,ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಶೀಲ ದೊಡ್ಡಯ್ಯ,ಸುಧೀರ್, ಸುಬ್ರಮಣ್ಯ ತ್ರಿಪುರ, ಹಾಗೂ ನೂರಾರು ಗ್ರಾಮಸ್ಥರು ನೆರೆದಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ನವೀನ್ ಕೋಳೂರು ಮಾಡಿದರು