ಮೂಡಿಗೆರೆ ತಾಲೂಕಿನ ಹಾಲೂರು ಚಕ್ರಮಣಿ ರಮೇಶ್ ಇನ್ನಿಲ್ಲ
1 min read
ಮೂಡಿಗೆರೆ ತಾಲೂಕಿನ ಹಾಲೂರು ಚಕ್ರಮಣಿ ರಮೇಶ್ ಇನ್ನಿಲ್ಲ 😔😔
ಮೂಡಿಗೆರೆ ತಾಲ್ಲೂಕು ಚಕ್ರಮಣಿ ಗ್ರಾಮದ ರಮೇಶ್( 43ವರ್ಷ ) ಏಪ್ರಿಲ್ 30ರಂದು ಗಂಗನಮಕ್ಕಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.
ಮೃತ ರಮೇಶ್ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದು ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗು ಇದ್ದಾರೆ.ಅಪ್ಪನಿಲ್ಲದ ಕ್ಷಣಗಳಲ್ಲಿ ಮೂಕ ವೇದನೆ ಅನುಭವಿಸುವಂತಾಗಿದೆ, ರಮೇಶ್ ಒಬ್ಬ ಜನಪದ ಕಲಾವಿದನಾಗಿದ್ದು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಭಾಗವಹಿಸಿರುತ್ತಾರೆ,ಇತ್ತ ವಿಧಿಗೆ ಶಾಪ ಹಾಕುತ್ತ ಗಂಡನಿಲ್ಲದ ಮುಂದಿನ ಜೀವನ ಹೇಗೆ ಎಂದು ಕಣ್ಣೀರು ಹರಿಸುತ್ತ ಪತ್ನಿಯ ವೇದನೆ ನೋಡಲಾಗದು.
ಇವರ ಅಂತ್ಯ ಕ್ರಿಯೆ ನಾಳೆ ಅಂದರೆ ಮಂಗಳವಾರ ಚಕ್ರಮಣಿಯಲ್ಲಿ ಮಧ್ಯಾಹ್ನ 2ಕ್ಕೆ ನೆರವೇರಲಿದೆ.