ನೈತಿಕತೆಯನ್ನು ಇಟ್ಕೊಂಡು ಮಾತನಾಡಿ……
1 min read
ನೈತಿಕತೆಯನ್ನು ಇಟ್ಕೊಂಡು ಮಾತನಾಡಿ……
ಚಂದ್ರು ಓಡೆಯರ್.ಬಿಳಗೊಳ.
ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಯಲ್ಲಿ ಆರೊಗ್ಯ ರಕ್ಷಾ ಕಮಿಟಿಯಲ್ಲಿ ಅನಕ್ಷರಸ್ಥ ಸದಸ್ಯರು ಇದ್ದಾರೆಂದು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯೆ ಆಶಾಮೋಹನ್ ರವರಿಗೆ
ಆರೊಗ್ಯ ರಕ್ಷಾ ಕಮಿಟಿ ಸದಸ್ಯ ಚಂದ್ರುಓಡೆಯರು ತಿರುಗೆಟು ನೀಡಿದರು.
ಅವರ ಕಾಲದಲ್ಲಿ ಎರಡು ವರ್ಷಗಳಿಗೆ ಎರಡು ಸಭೆ ನಡೆಸಿದ್ದಾರೆ.ನಾವು ನಾಲ್ಕು ತಿಂಗಳಲ್ಲಿ ಎರಡು ಸಭೆ ಮಾಡಿ ಆಸ್ಪತ್ರೆಯ ಅಭಿವೃದ್ದಿಗೆ ಅದ್ಯಕ್ಷರಾದ ಶಾಸಕಿ ನಯನ ಮೋಟಮ್ಮ ನೇತ್ರತ್ಬದಲ್ಲಿ ಹಲವು ಕಾರ್ಯಗಳು ಉತ್ತಮವಾಗಿ ನಡೆದಿವೆ ಎಂದರು.
ಒಪಿಡಿ ಡಿಜಿಟಲ್ ಅಗಿದೆ.ಟೊಕನ್ ಸಿಸ್ಟಮ್ ಅಗಿದೆ.
ಎರಡು ಡಯಲಿಸಿಸ್ ಯಂತ್ರ ಕೆಟ್ಟು ಹೊಗಿದ್ದವು ಇಗ ಸರಿಯಾಗಿದೆ.
ಅಗತ್ಯ ಔಷದಿಗಳ ಕೊರತೆ ಇಲ್ಲ.
ಆಸ್ಪತ್ರೆಯಲ್ಲಿ ಒಬ್ಬರೆ ಫ಼ಿಜಿಸಿಯನ್ ಡಾ:ಮಾನಸವರನ್ನು ವರ್ಗಾವಣೆ ಮಾಡಲಾಗಿತ್ತು.ಅದನ್ನು ರದ್ದುಪಡಿಸಲಾಗಿದೆ.ನಿರಂತರ ನೀರಿನ ವ್ಯವಸ್ಥೆ .ಗೀಸರ್ ವ್ಯವಸ್ಥೆ.ಉತ್ತಮ ಅಹಾರದ ವ್ಯವಸ್ಥೆ
ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ.
ಡಯಾಬಿಟಿಸ್ ರೋಗಿಗಳಿಗೆ ಪ್ರತ್ಯೆಕ ಊಟದ ವ್ಯವಸ್ಥೆ ಮಾಡಲಾಗಿದೆ.
ರೋಗಿಗಳಿಗೆ ಅನುಕೂಲ ಅಗಲೆಂದು ಅಯಾ ವಿಬಾಗಗಳಿಗೆ ಬಣ್ಣ ಹೊಡೆಸಿ ನಾಮಪಲಕ ಹಾಕಲಾಗಿದೆ.
ಜನ ಜಂಗುಳಿ ತಡೆ ಗಟ್ಟುವ ಉದ್ದೇಶದಿಂದ ತಾಲೂಕು ಆರೊಗ್ಯ ಅಧಿಕಾರಿ ಕಚೇರಿಯನ್ನು ಪಟ್ಟಣದಲ್ಲಿರುವ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.
ಈ ಹಿಂದೆ ವಾರಕ್ಕೆ ಒಂದು ಬಾರಿ ಕಸ ವಿಲೆವಾರಿ ಅಗುತಿದ್ದು, ಈಗ ವಾರಕ್ಕೆ ಮೂರು ಬಾರಿ ವಿಲೆವಾರಿ ಅಗುತ್ತಿದೆ.ಸ್ವಚ್ಚತೆಗೆ ಆದ್ಯತೆ ಕೊಟ್ಟಿದ್ದೆವೆ.
ಗೆದ್ದ ಮೊದಲನೆ ದಿನವೆ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಜನಪರ ಕಾಳಜಿಯನ್ನು ಶಾಸಕಿ ಮೆರೆದಿದ್ದಾರೆ.
ಬೇರೆಯವರ ವಿನಾ ಕಾರಣ ತಪ್ಪು ಹುಡುಕುವ ಆಶಾಮೋಹನ್ ತಮ್ಮ ಬಡಾವಣೆಯಲ್ಲಿ ಉದ್ಯಾನವನಕ್ಕೆ ಪಟ್ಟಣ ಪಂಚಾಯಿತಿಯಿಂದ ಬಂದ 38. ಲಕ್ಢ ರೂಪಾಯಿ ಅನುದಾನದ ಲೆಕ್ಕ ಕೊಡಲಿ ಎಂದರು.
ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದರು.
ಜೊತೆಯಲ್ಲಿ ರಕ್ಷಾ ಸಮಿತಿಯ ಸದಸ್ಯರಾದ ಮಹೇಶ್.ಬಿ.ಬಾಳೂರು…ಕೋಮಲ. ಕೆ.ಎನ್.ಬಾನಹಳ್ಳಿ ಇದ್ದರು.