ನೈತಿಕತೆ ಮೆರೆಯುತ್ತಿರುವ ಉಪ ಸಭಾಪತಿ…….
1 min readನೈತಿಕತೆ ಮೆರೆಯುತ್ತಿರುವ ಉಪ ಸಭಾಪತಿ…….
ನೈತಿಕತೆ ಮೆರೆಯುತ್ತಿರುವ ಉಪ ಸಭಾಪತಿ…….
ಕೆಂಪೇಗೌಡ ಕುಡಿಯುವ ನೀರಿನ ಘಟಕಕ್ಕೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳು ಆದ ಶ್ರೀಯುತ ಎಂ,ಕೆ ಪ್ರಾಣೇಶ್ ಬಂದು ವೀಕ್ಷಿಸಿದರು, ಇದು ಜನಪ್ರತಿನಿದಿಗಳ ನೈತಿಕತೆಯನ್ನು ಎತ್ತಿ ಹಿಡಿದಿದೆ.
ಎಂ.ಎಲ್.ಸಿ.ಪ್ರಾಣೇಶ್ ಅನುದಾನದಲ್ಲಿ ಬರುವ ಎಲ್ಲಾ ಹಣವನ್ನು ಸರಿಯಾಗಿ ವಿನಿಯೊಗವಾಗುತ್ತಿದೆಯೆ ಎಂದು ಖುದ್ದು ಪರಿಶೀಲನೆ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈಗಿನ ಶಾಸಕರು ಇದೆ ರೀತಿಯ ನೈತಿಕತೆ ಮೆರೆಯಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಕೆಂಪೇಗೌಡ ಕುಡಿಯುವ ನೀರಿನ ಘಟಕ ಮತ್ತು ಕೊಳವೆಬಾವಿಯನ್ನು ತಮ್ಮ ಅನುದಾನದಲ್ಲಿ ಮಾಡಿಸಿಕೊಟ್ಟ ಮತ್ತು ನಾಡಪ್ರಭು ಕೆಂಪೇಗೌಡರ ಹೆಸರನ್ನು ನಮ್ಮ ಮೂಡಿಗೆರೆ ಪಟ್ಟಣದಲ್ಲಿ ಶಾಶ್ವತವಾಗಿ ಉಳಿಸಲು ಸಹಕರಿಸಿದ ವಿಧಾನ ಪರಿಷತ್ ಶಾಸಕರು ಮತ್ತು ವಿಧಾನ ಪರಿಷತ್ ಉಪ ಸಭಾಪತಿಗಳು ಆದ ಶ್ರೀಯುತ, ಎಂ. ಕೆ. ಪ್ರಾಣೇಶ್ ಅವರಿಗೆ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಅದ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜೊತೆಯಲ್ಲಿ ಬೆಟ್ಟಗೆರೆ ಅಶ್ವತ್( ಪುಣ್ಣ್ಯ)ಇದ್ದರು.