ಕಾರ್ಮಿಕರ ಬದುಕಿನ ಆಶಾಕಿರಣ ಡಾ. ಅಂಬೇಡ್ಕರ್.
1 min read
ಕಾರ್ಮಿಕರ ಬದುಕಿನ ಆಶಾಕಿರಣ ಡಾ. ಅಂಬೇಡ್ಕರ್.
ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಕಾರ್ಮಿಕರ ದಿನಾಚರಣೆ ಹಾಗೂ ಬಿ ಕೆ ಕೃಷ್ಣಪ್ಪ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ವನ್ನು ಉದ್ದೇಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಮಾತನಾಡಿ ಇಂದು ಕಾರ್ಮಿಕರ ದಿನಾಚರಣೆ ಹಾಗಾಗಿ ಇಂದು ಕಾರ್ಮಿಕರ ಬದುಕು ಹಸನಾಗಲು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕಾರಣ ಆ ಕಾರಣಕ್ಕಾಗಿ ಅಂಬೇಡ್ಕರ್ ಹೆಸರನ್ನು ನೆನಪಿಸದ ಯಾವುದೇ ವೇದಿಕೆಯು ಕೂಡ ಕಾರ್ಮಿಕ ದಿನಾಚರಣೆ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಿ ಪರಮೇಶ್ ಮಾತನಾಡಿ -ಇಂದಿಗೂ ಹೆಣ್ಣುಮಕ್ಕಳು ಸರ್ಕಾರದ ಹಲವಾರು ಯೋಜನೆಗಳು ಪಡೆದುಕೊಳ್ಳುತ್ತಿದ್ದಾರೆ ಜೊತೆಗೆ ಕಾರ್ಮಿಕರ ಸ್ಥಿತಿಗತಿಗಳು ಸುಧಾರಣೆಯಾಗಲು ಅಂಬೇಡ್ಕರ್ ಕಾರ್ಮಿಕ ಮಂತ್ರಿ ಯಾಗಿ ಹಲವಾರು ಯೋಜನೆಗಳು ರೂಪಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ ಟಿ ರಾಧಾಕೃಷ್ಣ ರವರು, ಬಿ ಕೆ ಕೃಷ್ಣಪ್ಪ ರಂತ ಹೋರಾಟಗಾರ ಹುಟ್ಟದಿದ್ದರೆ ನಾವೆಲ್ಲಾ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಬಹುಜನ ಚಳುವಳಿ ಗಟ್ಟಿಗೊಳ್ಳಲು ಆ ಮುಖೇನ ಪ್ರಜ್ಞಾವಂತಿಕೆಯ ಸಮಾಜ ಕಟ್ಟಲು ಆಗುತಿರಲಿಲ್ಲ, ದುರಂತ ಅಂದ್ರೆ ಆ ಕಾಲಗಟ್ಟದಲ್ಲಿ ಬಂದ ಸ್ವಾರ್ಥ ಒಂದಷ್ಟು ದಲಿತ ನಾಯಕರು ತಮ್ಮ ತನವನ್ನು ಮಾರಿಕೊಂಡು ಬದುಕುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದೇ ಸಮಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಮತ ನೀಡಿದ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ, ಗಂಗಾಧರ್, ಮಂಜಯ್ಯ, ಪಿ ಕೆ ಮಂಜುನಾಥ್, ಬಕ್ಕಿ ಮಂಜುನಾಥ್, ಲೋಕವಳ್ಳಿ ರಮೇಶ್, ಮಹೇಶ್, ಮಂಜುಳಾ, ರತ್ನ, ಆಸೀಫ್ ಮುಂತಾದವರು ಇದ್ದರು.