AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಮಕ್ಕಳಿಗೆ ನೀಡುವುದು ಪೋಷಕರು ಕರ್ತವ್ಯ : ಅವಧೂತ ವಿನಯ್ ಗುರೂಜಿ.”

1 min read

ಯಾರ ಮನಸ್ಸು ಕಲ್ಮಶವಿಲ್ಲದೇ ಶುದ್ಧವಾಗಿರುತ್ತದೆಯೋ ಅಂತವರನ್ನು ದೇವರು ಪ್ರೀತಿಸುತ್ತಾನೆಂದು ಅವಧೂತ ವಿನಯ್ ಗುರೂಜಿ ಹೇಳಿದರು.

ಅವರು ದಿನಾಂಕ 12/04/2024ರ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ತ್ರಿಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಈ ಸಹಕಾರ ಸಂಸ್ಥೆ 1956ರಲ್ಲಿ ಪ್ರಾರಂಭಗೊಂಡು ಇಂದಿಗೂ ಸೇವೆ ನೀಡುತ್ತಾ ಗ್ರಾಮದ ನೂರರು ಜನಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿರುವುದು ಶ್ಲಾಘನೀಯ. ಸಹಕಾರ ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ದೊಡ್ಡ ಸವಾಲು. ಇಂತಹ ಸವಾಲನ್ನು ಸಂಘಟಿತರಾಗಿ ಎದುರಿಸಿ ದಾನಿಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದರಿಂದ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಕ್ಷಿಯಾಗಿದೆ. ಹಲವಾರು ದೇವಸ್ಥಾನ ನಿರ್ಮಾಣ ಮಾಡಿದರೆ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗಬಹುದು. ಆದರೆ ಇಂತಹ ಸಂಘ ಸಂಸ್ಥೆಯನ್ನು ನಿರ್ಮಾಣ ಮಾಡಿದರೆ ಗ್ರಾಮದವರು ಬದುಕು ಕಟ್ಟುಕೊಳ್ಳಲು ಸಹಕಾರಿಯಾಗಲಿದೆ ಎಂದ ಅವರು, ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರದ ಕೊರತೆಯಿಂದಾಗಿ ಕುಟುಂಬಗಳಲ್ಲಿ ಕಲಹ ಅಧಿಕಗೊಳ್ಳುತ್ತಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕೆಂದು ಹೇಳಿದರು.

ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ತೇಜಸ್ವಿನಿ ಮಾತನಾಡಿ,ಈ ಹಿಂದೆ ಸಹಕಾರ ಸಂಘಗಳನ್ನು ಕಟ್ಟಿ ಬೆಳಸಲು ಕಷ್ಟ ಪಡಬೇಕಾಗಿತ್ತು.ಅಲ್ಲದೇ ಲಾಭ ಗಳಿಸದೇ ನಷ್ಟ ಅನುಭವಿಸುತ್ತಿತ್ತು.ಆದರೆ ಈಗ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ವಹಿವಾಟಿನಿಂದ ಉತ್ತಮ ಲಾಭ ಗಳಿಸುತ್ತಿದೆ.

ಈಗಾಗಲೇ ಸಹಕಾರ ಸಂಸ್ಥೆಗಳಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ವರೆಗೆ ಸಾಲ ನೀಡಲಾಗುತ್ತಿದೆ.ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

 

ಸಂಘದ ಅಧ್ಯಕ್ಷ ಟಿ.ಎನ್. ಚನ್ನಕೇಶವಗೌಡ,ಉಪಾಧ್ಯಕ್ಷ ಸುಂದರ್,ರಾಜ್ಯ ಸಹಕಾರ ಮಹಾ ಮಂಡಳದ ಸದಸ್ಯ ಬಿ.ಸಿ.ಲೋಕಪ್ಪಗೌಡ,ಪಿ.ಸಿ.ಎ.ಆರ್.ಡಿ.ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ,ಜಿಲ್ಲಾ ಸಹಕಾರ್ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್ ಗೌಡಹಳ್ಳಿ,ಟಿ.ಎ.ಪಿ.ಸಿ.ಎಂ.ಅಧ್ಯಕ್ಷ ವಿ.ಕೆ.ಶಿವೇಗೌಡ,ಹಿರಿಯ ಸಹಕಾರಿ ಓ.ಎಸ್.ಗೋಪಾಲಗೌಡ,ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು,ಸಂಘದ ನಿರ್ದೇಶಕರಾದ ಯದುವೀರ್,ಅರುಣ್,ಗಿರೀಶ್,ಸಂದರ್ಶ,ಉಪೇಂದ್ರ, ಮಧು,ಮಮತಾ,ಸೌಮ್ಯ,ದೇವರಾಜ್,ಮೇಲ್ವಿಚಾರಕ ಪ್ರಯಾಗ್,ಸಿಇಒ ಎ.ವಿನುತ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು,ಸಂಘ ಮಾಜಿ ಅಧ್ಯಕ್ಷರುಗಳನ್ನು, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಸಿ.ಇ.ಓ. ಗಳನ್ನು ಗೌರವಿಸಲಾಯಿತು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *