AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಒಂದು ಹಿರಿದಾದ ಅರ್ಥದಲ್ಲಿ ಪತ್ರಕರ್ತರೆ ನಿಜವಾದ ನಾಡೋಜರು

1 min read

*ಒಂದು ಹಿರಿದಾದ ಅರ್ಥದಲ್ಲಿ ಪತ್ರಕರ್ತರೆ ನಿಜವಾದ ನಾಡೋಜರು…* ಆದರೆ ಇಂದು ಪತ್ರಿಕಾ ಸ್ವಾತಂತ್ರ್ಯವನ್ನು ಧಮನಗೊಳಿಸುತ್ತ, ಸಂವಹನ ಮಾಧ್ಯಮವನ್ನು ಒಂದು ಆಯುಧದಂತೆ ಬಳಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯೋಜಿತ ಅಧ್ಯಕ್ಷರಾದ ಡಾ.ಎಲ್. ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿಗೆ ಆಗಮಿಸಿ ಇಲ್ಲಿನ ಮಾಧ್ಯಮ ಮಿತ್ರರೊಂದಿಗೆ ಸುದ್ದಿಗೋಷ್ಠಿ ನಡೆಸಿದರು. ನೂರು ದೇವರನೆಲ್ಲ ನೂಕಾಚೆ ದೂರ,ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ,,, ಎನ್ನುವ ಮೂಲಕ ಇಡೀ ಈ ಕಾಲವನ್ನು ಆವರಿಸಿಕೊಂಡು ದೇಶವನ್ನು ದೇವರು ಎಂದು ತೋರಿಸಿಕೊಟ್ಟ ನಮ್ಮ ಕಾಲದ ಮಹತ್ವದ ಕವಿ ಕುವೆಂಪು ಅವರ ವಾರಸುದಾರರು ನಾವೆಲ್ಲ ಆಗುವ ಮೂಲಕ, ಈ ದೇಶದ ರಾಜಕೀಯ ಸ್ಥಿತ್ಯಂತರದ ಬಗ್ಗೆ ಶೋಧಕ್ಕೆ ಇಳಿಯಬೇಕಾಗಿದೆ, ಧರ್ಮ ಮತ್ತು ರಾಜಕೀಯ ಕೇಂದ್ರಿತವಾದ ದೇವರುಗಳನ್ನು ಪರಿಶೀಲಿಸುವ ಅಗತ್ಯವಿದೆ, ವಿಶಾಲ ಅರ್ಥದಲ್ಲಿದ್ದ ಧರ್ಮ ಕಾಲನಂತರದ ನಂತರ ಇಂದು ಸಂಕುಚಿತ ಅರ್ಥವನ್ನು ತಳೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸುವ ಮೂಲಕ ಜಾತ್ಯತೀತ ಪ್ರಜ್ಞೆಯಿಂದ ಕಂಗೊಳಿಸುತ್ತಿರುವ ಕನ್ನಡ ಸಾಹಿತ್ಯವನ್ನು ಸರಿಯಾಗಿ ಕನ್ನಡಿಗರು ಅರಿಯದೆ ಹೋದ ಕಾರಣ ಜಾತಿ ಧರ್ಮದ ಹೆಸರಿನಲ್ಲಿ ಸಂಕುಚಿತಗೊಳ್ಳುತ್ತಿದ್ದಾರೆ ಎಂಬ ಆತಂಕದೊಂದಿಗೆ ಹತ್ತು ಹಲವು ಸಂಗತಿಗಳನ್ನು ತೆರೆದಿಟ್ಟರು, ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಗುರುಶಾಂತಪ್ಪ. ಸಾಹಿತಿ ಸಂಘಟಕ ರವೀಶ್ ಕ್ಯಾತನಬೀಡು. ರೈತ ಮುಖಂಡ ನಿರಂಜನ್. ಹಾಗೂ ಡಿ.ಎಂ. ಮಂಜುನಾಥಸ್ವಾಮಿ ಹಾಜರಿದ್ದರು, ✒️✒️

About Author

Leave a Reply

Your email address will not be published. Required fields are marked *