ಕ್ಯಾನ್ಸರ್ ಜಾಗೃತಿ ಶಿಬಿರ.
1 min read
ಇಂದು ಮೂಡಿಗೆರೆ ಜೆ ಸಿ ಐ ವತಿಯಿಂದ ಮೂಡಿಗೆರೆಯ ಪಟ್ಟಣ ಪಂಚಾಯತಿಯ ಪೌರಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಕ್ಯಾನ್ಸರ್ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಮೂಡಿಗೆರೆಯ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿಯ ಸದಸ್ಯರಾದ ಕೆ. ವೆಂಕಟೇಶ್ ರವರು ಭಾಗವಹಿಸಿ ಈ ಕಾರ್ಯಕ್ರಮಗಳು ಅತಿ ಉಪಯುಕ್ತವಾದದ್ದು ಎಂಬುದನ್ನು ತಿಳಿಸಿದರು, ಹಾಗೆಯೇ ತಾಲೂಕು ವೈದ್ಯಾಧಿಕಾರಿ ಡಾ:ಸುಂದರೇಶ್ ಮಾತನಾಡಿ ಧೂಮಪಾನ ಹಾಗೂ ಮದ್ಯಪಾನದಿಂದ ಕ್ಯಾನ್ಸರ್ ಹರಡುವ ಬಗ್ಗೆ ಜಾಗೃತಿ ಮೂಡಿಸಿದರು. ಮೂಡಿಗೆರೆಯ ವೈದ್ಯಾಧಿಕಾರಿಯಾದಂತಹ ಡಾಕ್ಟರ್ ಪ್ರಿಯಾಂಕ ಮಾತನಾಡಿ ಬಾಯಿ ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಎಸ್ ರಂಗಸ್ವಾಮಿ ಹಾಗೂ ಮೂಡಿಗೆರೆಯ ಜೆಸಿ ಅಧ್ಯಕ್ಷರಾದ ಸುಪ್ರೀತ್ ಹಾಗೂ ಕಾರ್ಯದರ್ಶಿ ದೀಕ್ಷಿತ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.