“ಧರ್ಮಸ್ಥಳಕ್ಕೆ ಭೇಟಿನೀಡುವ ಪಾದಯಾತ್ರಿಕರಿಗಿಲ್ಲದ ಸಾಮಾನ್ಯ ಜ್ಞಾನ : ಕಂಡಕಂಡಲ್ಲಿ ಕಸ ಬಿಸಾಡುವ ಸಂಸ್ಕೃತಿ : ಸಾರ್ವಜನಿಕರ ಆಕ್ರೋಶ.”
1 min read
ಮಲೆನಾಡು ಮತ್ತು ದಕ್ಷಿಣ ಕನ್ನಡ ಸಂಪರ್ಕಿಸುವ ದಾರಿ ಉದ್ದಕ್ಕೂ ಕಸದ ರಾಶಿಗಳೇ ಕಂಡು ಬರುತ್ತಿವೆ.ರಾಜ್ಯದ ವಿವಿಧ ಮೂಲೆಗಳಿಂದ ಪಾದಯಾತ್ರೆ ಕೈಗೊಳ್ಳುವ ಧರ್ಮಸ್ಥಳಕ್ಕೆ ಭೇಟಿನೀಡುವ ಪಾದಯಾತ್ರಿಕರಿಂದಾಗಿ ಇದೀಗ ಇಲ್ಲಿನ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ.
ಧರ್ಮಸ್ಥಳಕ್ಕೆ ಹೋಗುವ ಪಾದಯಾತ್ರಿಗಳು ಸಾಗುವ ಮಾರ್ಗದುದ್ದಕ್ಕೂ ಕಸದ ರಾಶಿ ಬೀಳುತ್ತಿದ್ದು,ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ತಟ್ಟೆ,ಅರೆ ಬರೆ ತಿಂದೆಸೆದ ಪಾತ್ರೆಗಳು ರಸ್ತೆ ಬದಿಯಲ್ಲಿ ಗಬ್ಬೆದ್ದು ನಾರುವಂತಾಗಿದೆ.
ಬಣಕಲ್ ಮುಖ್ಯ ರಸ್ತೆಯಲ್ಲಿ ರಾಶಿ ರಾಶಿ ಕಸಗಳು ಪತ್ತೆಯಾಗಿವೆ.ಧರ್ಮಸ್ಥಳ ಪಾದಯಾತ್ರೆಗಳ ವಿರುದ್ಧ ಇದೀಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಪಾದಯಾತ್ರಿಗಳು ಸಾಗುವ ದಾರಿಯುದ್ದಕ್ಕೂ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಯವರು ಕಸ ಹಾಕಲು ಪ್ಲಾಸ್ಟಿಕ್ ಚೀಲಗಳನ್ನು ಅಲ್ಲಲ್ಲಿ ಇಟ್ಟಿದ್ದರು ಆದರೆ ಈ ಬಾರಿಯ ಪಾದಯಾತ್ರಿಗಳು ಕೂಡ ಬಳಸಿದ ತ್ಯಾಜ್ಯಗಳನ್ನು ರಸ್ತೆಯ ಬದಿಯಲ್ಲಿ ಬಿಸಾಕುತ್ತಿರುವುದು ಮತ್ತು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿರುವುದು ವಿಪರ್ಯಾಸ,ಅವರುಗಳು ಕೂಡ ಸ್ವಲ್ಪ ಯೋಚಿಸಿ ತಮ್ಮ ಸಾಮಾನ್ಯ ಜ್ಞಾನದಿಂದ ಕಸವನ್ನು ಕಸದ ಬುಟ್ಟಿಯಲ್ಲಿ ವಿಲೇವಾರಿ ಮಾಡುವ ಕೆಲಸವನ್ನು ಮಾಡಬೇಕು,ಆದರೆ ಇವರಿಗೆ ಅಷ್ಟು ಕೂಡ ಸಾಮಾನ್ಯ ಜ್ಞಾನ ಇಲ್ಲದಿರುವುದು ಪರಮಾಶ್ಚರ್ಯವಾಗಿದೆ.
ಇದರ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಪಾದಯಾತ್ರಿಗಳು ಗುಂಪಿನ ಮುಖ್ಯಸ್ಥರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.