“ಅಬಕಾರಿ ಇಲಾಖೆಗೆ ಮದ್ಯಪ್ರಿಯರ ಬೇಡಿಕೆ.!!???.”
1 min read
ದಿನಾಂಕ 27/12/2023ರ ಬುಧವಾರದಂದು, ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ (ರಿ.) ಇದರ ವತಿಯಿಂದ,ಮದ್ಯಪ್ರಿಯರ ಬೇಡಿಕೆಗಾಗಿ ಹಾಸನ ಜಿಲ್ಲೆಯ,ಬೇಲೂರು ತಾಲ್ಲೂಕಿನ,ಅಬಕಾರಿ ಕಚೇರಿಯ ಎದುರು ಹೋರಾಟ ನಡೆಯಿತು.
ಈ ಹೋರಾಟದ ಕುರಿತು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ (ರಿ.) ಇದರ ತಾಲ್ಲೂಕು ಅಧ್ಯಕ್ಷರಾದ ತೋಟೇಶ್ ತಗರೆ ಮಾತನಾಡಿದರು.
ಈ ಸಂದರ್ಭದಲ್ಲಿ ಅನೇಕ ಗೃಹಿಣಿಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಹೋರಾಟದ ಸಭೆಯಲ್ಲಿ ತಾಲ್ಲೂಕು ಅಬಕಾರಿ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.ಮದ್ಯಪ್ರಿಯರ ಅನೇಕ ಬೇಡಿಕೆಗಳು ಮನವಿಯಲ್ಲಿದ್ದು ಈ ಕುರಿತು ಅಬಕಾರಿ ಇಲಾಖೆ ಹಾಗೂ ಸರ್ಕಾರ ಗಮನಹರಿಸುವಂತೆ ಹಾಗೂ ಮದ್ಯದ ಬಾಟಲಿಗಳನ್ನು ಮೂಲ ದರದಲ್ಲೇ ಮಾರುವಂತೆ ಘೋಷಣೆಗಳನ್ನು ಕೂಗುತ್ತಾ ಹೋರಾಟ ನಡೆಯಿತು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.