“ಸೇವಾ ರತ್ನ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ.”
1 min read
ದಿನಾಂಕ 17/12/2023ರ ಭಾನುವಾರದಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾ ಭವನದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2023
ಸೇವಾರತ್ನ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೂಡಿಗೆರೆ ತಾಲ್ಲೂಕಿನ ಕಾಫಿನಾಡು ಸಮಾಜ ಸೇವಕರಾದ ಹಸೈನಾರ್ ಬಿಳಗುಳ ಭಾಗವಹಿಸಿದ್ದರು.
ಕಾಫಿನಾಡು ಸಮಾಜ ಸೇವಕರಾದ ಇವರುಗಳು ಅದೆಷ್ಟೋ ಬಡವರಿಗೆ ಹಾಗೂ ಆಶಕ್ತರಿಗೆ,ನಿರ್ಗತಿಕರಿಗೆ ಸಹಾಯ,ಕೊಳೆತ ಸ್ಥಿತಿಯಲ್ಲಿದ್ದ ಅದೆಷ್ಟೋ ಅನಾಥ ಶವಗಳಲ್ಲದೇ ಕೊಲೆ ಮಾಡಿ ಎಲ್ಲೋ ಕಂದಕಗಳಿಗೆ ಬಿಸಾಕಿ ಹೋದಂತಹ ಶವಗಳನ್ನು ಹಸೆನಾರ್ ಬಿಳಗುಳ ಹಾಗೂ ಅಬ್ದುಲ್ ರೆಹಮಾನ್ ಅವರುಗಳು ಸೇರಿ ಹುಡುಕಿ ಕಂಡುಹಿಡಿದು ಮೇಲೆತ್ತಿ ಪೋಲಿಸರಿಗೆ ಒಪ್ಪಿಸುವಂತಹ ಕೆಲಸಗಳನ್ನು ಮಾಡಿರುವ ವ್ಯಕ್ತಿಗಳಾಗಿದ್ದು,ಇವರುಗಳಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹಾಗೂ ಮಲೆನಾಡಿನ ಗಾನ ಕೋಗಿಲೆ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿರುವ ರಾಷ್ಟ್ರೀಯ ಹಾಡುಗಾರ ಬಕ್ಕಿ ಮಂಜುನಾಥ್ ಅವರು ಕಳೆದ ಕೆಲವು ದಿನಗಳ ಹಿಂದೆ ಸತತವಾಗಿ 12ಗಂಟೆಗಳ ಕಾಲ 105 ಹಾಡುಗಳನ್ನು ಹಾಡುವ ಮೂಲಕ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದು ಅವರನ್ನು ಗುರುತಿಸಿದ ಹಸೆನಾರ್ ಬಿಳಗುಳರವರು ಕಾವ್ಯಶ್ರೀ ಪ್ರಶಸ್ತಿಗೆ ಬಕ್ಕಿ ಮಂಜುನಾಥ್ ಅವರ ಹೆಸರನ್ನು ಸೂಚಿಸಿದ್ದರು.ಅದರಂತೆ ಈ ಕಾರ್ಯಕ್ರಮದಲ್ಲಿ ಬಕ್ಕಿ ಮಂಜುನಾಥ್ ಅವರಿಗೆ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮೂಡಿಗೆರೆ ಸಾಹಿತಿ ಎಂ.ಎಸ್.ನಾಗರಾಜ್ ವಹಿಸಿದ್ದು ವಿಶೇಷವಾಗಿದ್ದು,ಇವರನ್ನು ಕೂಡ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಮೂಡಿಗೆರೆ ಕಸಬಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ನವೀನ್ ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ಕಸಾಪ ಕಸಬಾ ವತಿಯಿಂದ ನಡೆದಾಡುವ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀ ಶ್ರೀ ಮಂಜುನಾಥ್ ಸ್ವಾಮಿಗಳಿಗೆ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಡಾ.ಶಿವಣ್ಣ ಮತ್ತು ದಂಪತಿಗಳು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.